<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-2372666341371107821</id><updated>2012-02-14T04:51:18.303-08:00</updated><title type='text'>Guruprasad Kurtkoti</title><subtitle type='html'>(ನನಗ ತಿಳದದ್ದು ನಾನು ಬರೀತೀನಿ...ನಿಮಗ ಅನಿಸಿದ್ದು ನೀವು ಹೇಳ್ರಿ!)</subtitle><link rel='http://schemas.google.com/g/2005#feed' type='application/atom+xml' href='http://kurtkoti.blogspot.com/feeds/posts/default'/><link rel='self' type='application/atom+xml' href='http://www.blogger.com/feeds/2372666341371107821/posts/default?max-results=100'/><link rel='alternate' type='text/html' href='http://kurtkoti.blogspot.com/'/><link rel='hub' href='http://pubsubhubbub.appspot.com/'/><author><name>ಗುರುಪ್ರಸಾದ ಕುರ್ತಕೋಟಿ</name><uri>http://www.blogger.com/profile/10861815905653228183</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_e_tOxrsrEcc/SejNhmMPHWI/AAAAAAAAAkA/7fs9a56NqZg/S220/DSCF3720.JPG'/></author><generator version='7.00' uri='http://www.blogger.com'>Blogger</generator><openSearch:totalResults>15</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-2372666341371107821.post-781754210985571512</id><published>2011-11-13T20:47:00.001-08:00</published><updated>2012-02-11T04:22:16.424-08:00</updated><title type='text'>ಕೇಶ ಕ್ಷಾಮ!</title><content type='html'>&lt;div dir="ltr" style="text-align: left;" trbidi="on"&gt;&lt;div style="text-align: justify;"&gt;&lt;/div&gt;&lt;div style="text-align: justify;"&gt;&lt;span style="font-size: large;"&gt;&amp;nbsp;"ಇವತ್ತರೆ ಹೋಗ್ರೀ" ನಲ್ಲೆ ಪ್ರೀತಿಯಿಂದ ಆದೇಶಿಸಿದಳು. ಕಳೆದ ಎರಡು ವಾರದಿಂದ ಮುಂದೆ ಹಾಕ್ತಾ ಬಂದಿದ್ದೆ. &lt;/span&gt;&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;&lt;span style="font-size: large;"&gt;ಅವಳು ಹೋಗು ಅಂತ ಒತ್ತಾಯಿಸಿದ್ದು ಹಜಾಮತಿಗೆ ಅಂದರೆ ಕೂದಲಿನ ಕಟಾವಿಗೆ. ಸಾಮಾನ್ಯವಾಗಿ ಕೂದಲುಗಳು ಎರ್ರಾ ಬಿರ್ರಿ ಬೆಳೆದಾಗ ಅದನ್ನು ಒಂದು ಲೆವೆಲ್ ಗೆ ಕತ್ತರಿಸಿ ಒಪ್ಪವಾಗಿ ಬಾಚಿಸಿಕೊಂಡು ಬರುವ ಸಂಬ್ರಮಕ್ಕೆ ಹಜಾಮತಿ ಅಥವಾ ಅಚ್ಚ ಕನ್ನಡದಲ್ಲಿ ಕಟಿಂಗ ಅನ್ನುತ್ತಾರೆ. ಆದರೆ ನನ್ನಂತಹ ಅರೆ ಬಾಲ್ದಿಗಳಿಗೆ ಅದೊಂದು ಹಿಂಸೆ. ಅವಳಿಗೆ ನನ್ನ ವ್ಯಥೆ ಅರ್ಥವಾಗದು. ಹಜಾಮತಿ ಅಂಗಡಿಯಲ್ಲಿ ನಾನು ಅನುಭವಿಸುವ ಅವಮಾನ, ನಿರಾಸೆ ಹಾಗು ನೋವುಗಳು ನನಗೇ ಗೊತ್ತು! ಅಲ್ಲಿ ತಮ್ಮ ಕೂದಲಿನ ಕಟಾವಿಗೆ ಕಾಯುತ್ತಿರುವ, ತಲೆ ತುಂಬಾ ಸೊಂಪಾದ ಕೂದಲಿರುವ ಮನುಷ್ಯರು ನನ್ನ ತಲೆ ನೋಡಿ "ಇವನ್ಯಾಕೆ ಇಲ್ಲಿಗೆ ಬಂದಿರಬಹುದು?" ಎಂದು ಪ್ರಶ್ನಾರ್ಥಕ ವಾಗಿ ನೋಡುವ ಪರಿ ಇದೆಯಲ್ಲ. ಅದನ್ನು ಅನುಭವಿಸಿದವರಿಗೆ ಗೊತ್ತು.&amp;nbsp; &lt;/span&gt;&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;&lt;span style="font-size: large;"&gt;ಒಂದು ಸರ್ತಿ ಹಜಾಮತಿ ಅಂಗಡಿಗೆ ಹೋದಾಗ, ಕಟಿಂಗ ಮಾಡುವವನೂ ಕೂಡ ಏನು ಮಾಡಲಿ ಎಂದು ಕೇಳಬೇಕೆ? ಸ್ವಲ್ಪ ಸಣ್ಣಗೆ ಕೂದಲು ಕತ್ತರಿಸಿ&amp;nbsp; ಅಂತ ಹೇಳಿದರೆ, "ಎಲ್ಲಿದೆ ಸರ್ ಕೂದಲು ? " ಎನ್ನಬೇಕೆ?! ನನಗೇ ಅವನ ತಲೆ ಕೂದಲು ಕೈಯಲ್ಲಿ ಹಿಡಿದು ಮಕ ಮೂತಿ ಕಿತ್ತುವಂತೆ ಹೊಡೆಯೋಣ ಅನಿಸಿತು. ಆದರೆ ಪಾಪ ಅವನದೂ ತಪ್ಪಲ್ಲವಲ್ಲ. "ಇದ್ದುದರಲ್ಲೇ ಮಾಡಪ್ಪ" ಅಂದಿದ್ದಕ್ಕೆ, ೫ ನಿಮಿಷದಲ್ಲಿ ಚಕ ಚಕ ಅಂತ ಕೈ ಚಳಕ ತೋರಿಸಿ, ದುಡ್ಡು ಕೊಡಲು ಹೋದರೆ ಬೇಡ ಬಿಡಿ ಸರ್ ಅಂದು ಗಾಯದ ಮೇಲೆ ಬಾರೆ ಎಳೆದು ಬಿಟ್ಟ. ಈ ಥರ ಅನುಭವವಾದ ಮೇಲೆ ಒಂದು ವಿಧಾನ ಅನುಸರಿಸತೊಡಗಿದೆ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಅಥವಾ ರಜೆಯ ದಿನಗಳಲ್ಲಿ ಅವನಿಗೆ ಗಿರಾಕಿಗಳು ಜಾಸ್ತಿ. ಅದಕ್ಕೆ ನಾನು ವಾರದ ದಿನಗಳಲ್ಲಿ ಬೆಳಿಗ್ಗೆ ಬೇಗನೆ ಹೋಗತೊಡಗಿದೆ. ಹಿಂದಿನ ಎರಡು ದಿನ ಮುಖ ಕ್ಷೌರ ಮಾಡಿಕೊಳ್ಳುತ್ತಿರಲಿಲ್ಲ. ಹೀಗಾಗಿ, ಅವನು ಕೇಳುವುದಕ್ಕೆ ಮೊದಲೇ, ಶೇವಿಂಗ್ ಮಾಡು ಅಂತ ಹೇಳಿಬಿಡುತ್ತಿದೆ. ಅದರ ಜೊತೆಗೆ ಸ್ವಲ್ಪ ತಲೆ ಕೂದಲು ಟ್ರಿಮ್ ಮಾಡಲು ಹೇಳುತ್ತಿದ್ದೆನಾದ್ದರಿಂದ ಅವನು ಅಷ್ಟಾಗಿ ತನ್ನ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಒಟ್ಟಿನಲ್ಲಿ ಕೂದಲುಗಳ ಕೊರತೆಯಿಂದಾಗಿ ಈ ರೀತಿಯಲ್ಲಿ ಪಡಬಾರದ ಕಷ್ಟ ಪಡುತ್ತಿದ್ದೇನೆ.&amp;nbsp;&amp;nbsp;&amp;nbsp; &lt;/span&gt;&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;&lt;span style="font-size: large;"&gt;ಇದು ಅಪ್ಪನಿಂದ ಬಂದ ಬಳುವಳಿ. ಪಾಪ ಅದು ಅವನ ತಪ್ಪಲ್ಲ ಅವನಿಗೆ ಅವರಪ್ಪನಿಂದ ಬಂದಿದ್ದು. ಒಟ್ಟಿನಲ್ಲಿ ನನ್ನ ತಲೆ ಮೇಲೆ ಮೂರು ಗುಂಟೆ ಸೈಟು! ಅದೇನು ಪ್ರಕೃತಿ ವಿಶೇಷವೋ ನಾಕಾಣೆ 16 ನೆ ವಯಸ್ಸಿನವರೆಗೆ ತಲೆಯನ್ನು ಅಲಂಕರಿಸಿ ಹುಲುಸಾಗಿ ಬೆಳೆದಿದ್ದ ಸೊಂಪಾದ ಕೂದಲುಗಳು, ನಂತರದ ದಿನಗಳಲ್ಲಿ ಒಂದೊಂದಾಗಿ ಕಾಣದಂತೆ ಮಾಯವಾಗತೊಡಗಿದವು. ಕೂದಲು ಉದರುತ್ತಿದೆಯಲ್ಲ ಅಂತ ಚಿಂತೆ ಮಾಡಿ ಮಾಡಿ ಒಂದಿಷ್ಟು ಕೂದಲು ಉದುರಿದವು. ಮದುವೆಯಾದ ಮೇಲಂತೂ ಇನ್ನೂ ಕಡಿಮೆಯಾಗಿ, ತಲೆಯ ಮೇಲೆ ಮೂರು ಸೈಟು ನಿರ್ಮಾಣವಾಗಿದ್ದವು. ಎಲ್ಲಾ ಕೂದಲುಗಳು ಉದುರಿ &lt;/span&gt;&lt;/div&gt;&lt;div style="text-align: justify;"&gt;&lt;span style="font-size: large;"&gt;ಪೂರಾ ಬಾಲ್ಡಿ ಯಾದರೆ ಒಂಥರಾ ನಿಶ್ಚಿಂತೆ. ಅರ್ಧ ಮರ್ಧ ಇದ್ದರೆ ಬಲು ಕಷ್ಟ. ಚಿಕ್ಕ ವಯಸ್ಸಿನಲ್ಲೇ ಅಂಕಲ್ ಅಂತ ಕರಿತಾರೆ. ಅದೂ ಹುಡುಗಿಯರು ಹಾಗೆ ಕರೆದರೆ ಎಷ್ಟು ದುಃಖ ವಾಗುತ್ತೆ ಗೊತ್ತೇ?! ಆ ಬ್ರಹ್ಮ ಸೃಷ್ಟಿ ಮಾಡುವಾಗ ಈ ಥರ ತಲೆಗೊಂದು ಕೊರತೆ ಇಟ್ಟು ಕಳಿಸಿಬಿಟ್ಟಿರುತ್ತಾನೆ. ಅಥವಾ ಬಹುಷಃ ಹಣೆ ಬರಹ ಬರೆಯಲು ಜಾಗ ಸಾಕಾಗಲಿಲ್ಲವೆಂದು ಕೂದಲುಗಳ ನ್ನು ಕಡಿಮೆ ಇಟ್ಟು ಹಣೆ ದೊಡ್ಡದು ಮಾಡಲು ಇದೊಂದು ಅವನ ತಂತ್ರ ಇರಬಹುದೇನೋ. ಇದಕ್ಕೆ ಉತ್ತರ ಬ್ರಹ್ಮನೇ ಕೊಡಬೇಕು!&amp;nbsp;&amp;nbsp;&amp;nbsp; &lt;/span&gt;&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;&lt;span style="font-size: large;"&gt;ಎಲ್ಲಾ ತರಹದ ಎಣ್ಣೆ ಹಚ್ಚಿದೆ, ಆಯುರ್ವೇದ, ಹೋಮಿಯೋಪತಿ, ಅಲೋಪತಿ, ಕೈಲಾಸಪತಿ ಹೀಗೆ ಯಾವ ಪ್ರಯತ್ನಗಳೂ ಫಲ ಕೊಡಲಿಲ್ಲ. ಹೊಸ ಕೂದಲುಗಳು ಚಿಗುರಲೇ ಇಲ್ಲ. ಒಂದು ಚೆಂದನೆಯ ವಿಗ್ಗಾದರೂ ಮಾಡಿಸಲೇ ? ಯೋಚನೆ ಬಂತು. ಆದರೆ ಅದು ಹೆಂಡತಿಯ ಅನುಮಾನಕ್ಕೂ ಕಾರಣವಾಯ್ತು. ತನ್ನ ಯಜಮಾನ ಈ ವಯಸ್ಸಿನಲ್ಲಿ (ಅಷ್ಟೇನೂ ವಯಸ್ಸಾಗಿಲ್ಲ ಬಿಡಿ) ಇಷ್ಟು ಪ್ರಯತ್ನ ಮಾಡುತ್ತಿದ್ದಾನೆ ಅಂದರೆ ಆಫೀಸ ನಲ್ಲಿ ಯಾವುದೊ ಹುಡುಗಿಗೆ ಸ್ಕೆಚ್ ಹಾಕಿರಬಹುದೇ ಎಂದು ಅವಳ ಯೋಚನಾ ಲಹರಿ. ಹುಡುಗಿಯರನ್ನು ಪಟಾಯಿಸಲು ಬರೀ ತಲೆ ತುಂಬಾ ಕೂದಲಿದ್ದರೆ ಸಾಕಾಗುವುದಿಲ್ಲ ಎನ್ನುವದನ್ನು ನಾನು ಮನವರಿಕೆ ಮಾಡುವ ವಿಫಲ ಯತ್ನ ಮಾಡಿದೆ. ಕೊನೆಗೆ ವಿಗ್ಗು ಕೊಳ್ಳುವ ಯತ್ನಕ್ಕೆ ಪೂರ್ಣ ವಿರಾಮ ಹಾಕಿದೆ. ಅದು ಅಲ್ಲದೆ ವಿಗ್ಗು ಹಾಕಿಕೊಂಡಿರುವುದು ಸ್ಪಷ್ಟವಾಗಿ ಗೊತ್ತಾಗಿ ಬಿಡುತ್ತದೆ. ವಿಘ್ನೇಶ್ವರ ಅಂತ ನಾಮಕರಣ ಬೇರೆ ಆಗುತ್ತದೆ. &lt;/span&gt;&lt;/div&gt;&lt;div style="text-align: justify;"&gt;&lt;br /&gt;&lt;/div&gt;&lt;div style="text-align: justify;"&gt;&lt;span style="font-size: large;"&gt;ಸಧ್ಯಕ್ಕಂತೂ ಇದ್ದುದರಲ್ಲೇ ತೃಪ್ತಿ ಪಟ್ಟುಕೊಂಡು ಇದ್ದೇನೆ. ಕೂದಲು ಕಡಿಮೆ ಇದ್ದರೆ ಕೆಲವಂದು ಉಪಯೋಗಗಳೂ ಇವೆ ಅಂತ ಸಮಾದಾನ ಮಾಡಿಕೊಳ್ಳುತ್ತೇನೆ. ತಿಂಗಳಿಗೊಮ್ಮೆ ಕ್ಷೌರ ಮಾಡಿಸುವ ಖರ್ಚು ಇಲ್ಲ. ಶಾಂಪೂ ಜಾಸ್ತಿ ಬೇಕಾಗುವುದಿಲ್ಲ. ಆದರೆ ಹಣೆ ದೊಡ್ದದಾಗುವುದರಿಂದ ಮುಖ ತೊಳೆಯುವಾಗ ಸೋಪು ಜಾಸ್ತಿ ಹಚ್ಚಬೇಕಾಗುತ್ತದೆ. ಬಸ್ಸಿನಲ್ಲಿ ಅಂಕಲ್ ಅಂತ ರೆಸ್ಪೆಕ್ಟ್ ಕೊಟ್ಟು ಕೆಲವು ಪುಣ್ಯಾತ್ಮರು ಸೀಟು ಬಿಟ್ಟು ಕೊಡುತ್ತಾರೆ. ಅರೆ ಬಾಲ್ಡಿ ಯಾದ್ದರಿಂದ ಯಾವ ಹುಡುಗಿಯರೂ ತನ್ನ ಗಂಡನ ನೋಡಲಾರರು ಎಂದು ಹೆಂಡತಿ ನಿಶ್ಚಿಂತೆಯಿಂದ ಇದ್ದಾಳೆ (ಪಾಪ!). ಆದರೂ ಕೂದಲು ಗಳು ಸಿಕ್ಕಾಪಟ್ಟೆ ಬೆಳೆಸಿಕೊಂಡು ಜುಟ್ಟು ಕಟ್ಟಿಕೊಂಡು ಬರುವ ಗಂಡಸರನ್ನು (?) ನೋಡಿದಾಗ ಸ್ವಲ್ಪ ದುಃಖವಾಗಿ ತಲೆ ಕೆರೆದುಕೊಳ್ಳುತ್ತೇನೆ. ಹಿಂದುಗಡೆಯಿಂದ ಹುಡುಗಿಯರೂ ಕಿಸಕ್ಕನೆ ನೋಡಿ ನಕ್ಕರೆ, &lt;br /&gt;ನನ್ನ ತಲೆ ನೋಡಿ ನಕ್ಕಿರಬಹುದೇ? ಎಂದು ಸಂಶಯ ಬಂದು ಬೇಜಾರಾಗುತ್ತದೆ. ಏನು ಮಾಡೋದು ಅದು ಬ್ರಹ್ಮ ಲಿಖಿತ. ಪರವಾಗಿಲ್ಲ ನೀವು ಬೇಜಾರು ಮಾಡ್ಕೊಂಡು ಚಿಂತೆ ಮಾಡಿ ನಿಮ್ಮ ತಲೆ ಬಾಲ್ಡಿ ಮಾಡ್ಕೋ ಬೇಡಿ!&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;/span&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2372666341371107821-781754210985571512?l=kurtkoti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kurtkoti.blogspot.com/feeds/781754210985571512/comments/default' title='Post Comments'/><link rel='replies' type='text/html' href='http://www.blogger.com/comment.g?blogID=2372666341371107821&amp;postID=781754210985571512&amp;isPopup=true' title='7 Comments'/><link rel='edit' type='application/atom+xml' href='http://www.blogger.com/feeds/2372666341371107821/posts/default/781754210985571512'/><link rel='self' type='application/atom+xml' href='http://www.blogger.com/feeds/2372666341371107821/posts/default/781754210985571512'/><link rel='alternate' type='text/html' href='http://kurtkoti.blogspot.com/2011/11/blog-post.html' title='ಕೇಶ ಕ್ಷಾಮ!'/><author><name>ಗುರುಪ್ರಸಾದ ಕುರ್ತಕೋಟಿ</name><uri>http://www.blogger.com/profile/10861815905653228183</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_e_tOxrsrEcc/SejNhmMPHWI/AAAAAAAAAkA/7fs9a56NqZg/S220/DSCF3720.JPG'/></author><thr:total>7</thr:total></entry><entry><id>tag:blogger.com,1999:blog-2372666341371107821.post-8854562380594383778</id><published>2011-06-20T23:48:00.000-07:00</published><updated>2011-07-09T05:03:29.153-07:00</updated><title type='text'>ಮರೆಗುಳಿಗೆ</title><content type='html'>&lt;div dir="ltr" style="text-align: left;" trbidi="on"&gt;&lt;strong&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮರೆವು ಒಂದು ಕಾಯಿಲೆಯೇ? ಅನುವಂಶೀಯವೇ? ಅಥವಾ ಬರೀ ನಾಟಕವೇ?! ಪ್ರತಿಯೊಬ್ಬ ಹುಲುಮಾನವನಿಗೂ ಮರೆವು ಅನ್ನೋ ರೋಗ ಬಿಟ್ಟಿಲ್ಲ. ನಮ್ಮ ನಾಗ್ಯಾ ನ್ನೇ ತೊಗೋರಿ. ಮುಂಜಾನೆ ಆಫೀಸ್ ಗೆ ಹೋಗೋವಾಗ ಅವನ ಮನದನ್ನೆ ಹೇಳ್ತಾಳೆ "ರೀ ಸಂಜಿ ಮುಂದ ಬರುವಾಗ, ಎಲ್ಲ ಸಾಮಾನು ತೊಗೊಂಡು ಬರ್ರೀ. ಚೀಟಿ ಕಿಸೆದಾಗ ಹಾಕೀನಿ ಮರೀಬ್ಯಾಡ್ರೀ". ಅವಳು ಚೀಟಿಯಲ್ಲಿ ಸಾಮಾನು ಲಿಸ್ಟ್ ಬರೆದು ಗಂಡನ ಜೇಬಿನಲ್ಲಿ ಇಡುವದು ಯಾಕೆ ಅಂದ್ರೆ, ಗಂಡ ಮರೆಗೂಳಿ ಅನ್ನೋದು ಅವಳಿಗೆ ಚೆನ್ನಾಗಿ ಗೊತ್ತಿರುವುದಕ್ಕೆ. ಆದರೆ ಪತಿ ಮಹಾಶಯ ಸಂಜೆ ಖಾಲಿ ಕೈಯಲ್ಲಿ ವಾಪಸ್ಸಾದಾಗ!!? ಅವನು ಹೇಳುತ್ತಾನೆ "ಅಯ್ಯೋ ಸಾರೀ ಲೇ ಪಾ! ಚೀಟಿ ಕಿಸೆದಾಗ ಇರುದ ಮರ್ತು ಬಿಟ್ಟೆ!". ಮರೆತಾನೆಂದು ಚೀಟಿ ಕೊಟ್ಟರೆ ಚೀಟಿಯನ್ನೇ ನೋಡಲು ಮರೆತರೆ ಏನು ತಾನೇ ಮಾಡಲು ಸಾಧ್ಯ? ನಾಗ್ಯಾಂದು ಚಿಕ್ಕವನಿದ್ದಾಗಿಂದ ಇದೆ ಗೋಳು. ನಾನು ಅವನು ಜಿಗರಿ ದೋಸ್ತ್ ಗಳು. ಚಿಕ್ಕವನಿದ್ದಾಗ ಒಂದು ಸಲ ರೇಶನ್ ಅಂಗಡಿಗೆ ಹೋಗಿ ಸಾಮಾನು ತರುವ ಜವಾಬ್ದಾರಿಯನ್ನು ಹೊತ್ತು ಚೀಲವನ್ನು ಹೆಗಲಿಗೆ ಹೊತ್ತು ಹೊರಟ. ಅಂಗಡಿಯಲ್ಲಿ ಉದ್ದನೆಯ ಕ್ಯೂ ನಲ್ಲಿ ನಿಂತು ಬಳಲಿ ಬೆಂಡಾದ ಪಾಪ. ಕೊನೆಗೂ ಇವನ ಸರದಿ ಬಂತು! ರೇಶನ್ ಅಂಗಡಿ ಕಾಕಾ "ರೇಶನ್ ಕಾರ್ಡ್ ಕೊಡಪ ತಮ್ಮ" ಅಂದಾಗಲೇ ನಾಗ್ಯನಿಗೆ ನೆನಪಾದದ್ದು, ತಾನು ಕಾರ್ಡು ಮನೆಯಲ್ಲಿ ಬಿಟ್ಟು ಬಂದ ವಿಷಯ! ಅಷ್ಟು ಅಗಾಧ ನೆನಪಿನ ಶಕ್ತಿ ಅವನದು. ಒಂದೇ ಉಸುರಿಗೆ ಮನೆಗೆ ಹೋಗಿ ಕಾರ್ಡು ತಂದ. ಬಂದ ಕೆಲಸ ಮುಗುದು ಮನೆಗೆ ವಾಪಸ್ಸು ಬಂದಾಗ ಅಪ್ಪ ಕೇಳಿದ "ಎಲ್ಲಿಲೆ ರೆಷನ್ನು ಮಂಗ್ಯಾನ ಮಗನೆ?", ಪಾಪ ನಾಗ್ಯಾ ಸಾಮಾನು ತುಂಬಿರುವ ಚೀಲವನ್ನು ಅಂಗಡಿಯಲ್ಲೇ ಬಿಟ್ಟು ಬಂದಿದ್ದ. ಮತ್ತೆ ಚೀಲ ತರಲು ಅಂಗಡಿಗೆ ತೆರಳಿದ, ಆದರೆ ದಾರಿಯಲ್ಲಿ ಅಪ್ಪ ತನಗೆ "ಮಂಗ್ಯಾನ ಮಗಾ" ಅಂತ ಬೈದರೆ, "ಮಂಗ್ಯಾ" ಯಾರು ಅನ್ನುವ ಚಿಂತೆ ಅವನಿಗೆ ಕಾಡದೆ ಇರಲಿಲ್ಲ!&lt;/strong&gt;&lt;br /&gt;&lt;strong&gt;&amp;nbsp;&lt;/strong&gt;&lt;strong&gt;ಹೀಗೆ ನಾಗ್ಯಾ ಬೆಳೆದು ದೊಡ್ಡವನಾದ. ಅವನು ಬೆಳೆದಂತೆ ಮರೆವು ಕೂಡ ಅವನೊಂದಿಗೆ ಬೆಳೆಯಿತು. ಸಣ್ಣವನಿದ್ದಾಗ ಚೀಲ ಮರೆಯುತ್ತಿದ್ದವನು ದೊಡ್ಡವನಾದ ಮೇಲೆ ಮೊಬೈಲ್, ಕಾರ್, ಹೀಗೆ ಏನೇನೋ ಮರೆಯತೊಡಗಿದ. ಆದರೂ ಅದಕ್ಕೊಂದು ಮಿತಿ ಬೇಡವೇ? ಮದುವೆಯಾದ ಹೊಸತು, ಹೆಂಡತಿಯನ್ನು ಬೆಂಗಳೂರಿಗೆ ಕರೆದೊಯ್ದಿದ್ದ. ಎಲ್ಲ ಸುತ್ತಾಡಿ ವಾಪಸ್ಸು ಬರುವಾಗ ಅವಳನ್ನು ಅಲ್ಲೇ ಮರೆತು ಬಿಟ್ಟು ಬಂದಿದ್ದ! ಅವಳನ್ನು ನಿಜವಾಗಿಯೂ ಮರೆತು ಬಿಟ್ಟು ಬಂದಿದ್ದನೇ? ಅದಕ್ಕುತ್ತರ ಅವನೇ ಹೇಳಬೇಕು! ಆಗೆಲ್ಲ ಮೊಬೈಲ್ ಇರ್ಲಿಲ್ಲ, ಪಾಪ ಹೆಂಗೋ ಮನೆಗೆ ವಾಪಸ್ಸು ಬಂದಳು. ಪಾಪ ನಾಗ್ಯಾ! &lt;/strong&gt;&lt;br /&gt;&lt;br /&gt;&lt;strong&gt;ಆದರೆ ಈ weekness ನ್ನೇ ಎಷ್ಟೋ ಸಲಾ ಸದುಪಯೋಗ ಪಡಿಸಿಕೊಂಡ. ಹೆಂಡತಿಯ ಹುಟ್ಟಿದ ದಿನವೇ ಮರೆತು ಹೋಯಿತೆಂದು, ಅವನು ಅವಳಿಗೊಂದು gift ತರದಿದ್ದರೂ ಅವಳು ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ, ಯಾಕಂದರೆ ಅವಳಿಗೆ ಇವನು ಮರೆಗುಳಿತನ ಗೊತ್ತು. ನಾಗ್ಯಾ ಬಚಾವು! ಗೆಳೆಯರಿಗೂ ಇವನ ಕಾಯಿಲೆ ಗೊತ್ತಿದ್ದುದರಿಂದ ಅವನಿಗೆ ಯಾವುದೇ ತೆರನಾದ ಜವಾಬ್ದಾರಿಗಳನ್ನು ಕೊಡುತ್ತಿರಲಿಲ್ಲ. "ಯಪ್ಪಾ ನಾಗ್ಯನ ನಂಬಿದರ ಮುಗದು ಹೋತು" ಅನ್ನೋದು ಎಲ್ಲರ ಅಂಬೋಣ ವಾಗಿತ್ತು. ನಾಗ್ಯಾ ಕಣ್ಣು ಮಿಟುಕಿಸುತ್ತಿದ್ದ! &lt;/strong&gt;&lt;br /&gt;&lt;br /&gt;&lt;strong&gt;ಒಂದು ಸಲ ಅವರ ಮನೆಗೆ ಹೋದಾಗ, ನಾಗ್ಯನ ಹೆಂಡತಿ ಗೊಳೋ ಅಂತ ಅತ್ತು ಬಿಟ್ಟಳು. "ಇವ್ರ ಮರಿಯೋ ಜಡ್ಡು ಅತೀಯಾಗ್ಯದ್ರೀ, ನನಗ ಸಾಕಾಗಿ ಹೊಗ್ಯದ" ಅಂದ್ಲು. ಅವಳು ಜಡ್ಡು ಅಂದದ್ದೇ ತಡ ನನಗೆ ಒಂದು ಐಡಿಯಾ ಬಂತು. ಬೇರೆ ಕಾಯಿಲೆ ತರಹ ಮರೆವಿಗೂ ಒಂದು ಔಷಧಿ ಇರಬೇಕು ಅಲ್ವೇ? ಅಲ್ಲಿಂದ ಶುರುವಾಯ್ತು ನನ್ನ ಹುಡುಕಾಟ. ಮರೆವಿಗೆ ಚಿಕಿತ್ಸೆ ಕೊಡುವ ಡಾಕ್ಟರ ನ ಹುಡುಕಾಟ. ಈಗೆಲ್ಲ ಹುಡುಕಾಡೋದು ಅಷ್ಟು ಕಷ್ಟದ ವಿಷಯವಲ್ಲ. ಗೂಗಲ್ ನಲ್ಲಿ ನಮಗೆ ಬೇಕಾದ ಪದಗಳನ್ನು ಹಾಕಿ ಒಂದು button ಒತ್ತಿದರಾಯ್ತು ನೂರಾರು ಪೇಜ್ ಗಳು ತೆರೆದುಕೊಳ್ಳುತ್ತೆ. ಒಂದು ಸೂಜಿಯನ್ನು ಹಿಡಿದು ಮನೆಯ ವರೆಗೂ ಎಲ್ಲ ವಿಷಯದ ಮಾಹಿತಿ ಸಿಗುತ್ತೆ. ಹೀಗೆ ಹುಡುಕುತ್ತಿರುವಾಗ ನನಗೆ ಸಿಕ್ಕಿದ್ದು ಡಾಕ್ಟರ ಮರಿಯಪ್ಪ ಅವರ ವಿಳಾಸ. ಅವರು ಮರೆಗುಳಿ ಗಳಿಗೆ ಔಷಧಿ ಕೊಡುವವರು. ಅದಕ್ಕೆ ಅವರ ಹೆಸರು ಮರಿಯಪ್ಪ ಇರಬಹುದಾ? ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಗೋಜಿಗೆ ನಾನು ಹೋಗಲಿಲ್ಲ ...... &lt;/strong&gt;&lt;br /&gt;&lt;br /&gt;&lt;strong&gt;ಡಾ.ಮರಿಯಪ್ಪನವರ ದವಾಖಾನೆಗೆ ತಲುಪಿದೆವು. ಅಲ್ಲಿ ಹುಲು ಮಾನವರ ಸರದಿ ನಿಂತಿರುವ ಪರಿ ಹನುಮಂತನ ಬಾಲವನ್ನು ನೆನಪಿಸುತ್ತಿತ್ತು. ಜಗತ್ತಿನಲ್ಲಿ ಇಷ್ಟೊಂದು ಮರೆಗುಳಿಗಳಿದ್ದಾರೆಯೇ? ನನಗೆ ಆಶ್ಚರ್ಯವಾಗುತ್ತಿತ್ತು. &lt;/strong&gt;&lt;br /&gt;&lt;br /&gt;&lt;strong&gt;ಅಂತು ಎರಡು ಗಂಟೆ ಕಾಯ್ದ ಮೇಲೆ ಮರಿಯಪ್ಪನವರ ದರ್ಶನ ಭಾಗ್ಯ ದೊರೆಯಿತು. ನಾಗ್ಯಾನ ಸಮಸ್ಸೆಗಳನ್ನು ತುಂಬಾ ಸಂಯಮದಿಂದ ಕೇಳಿದರು. ಅವನ ಮರೆವಿನಿಂದಾದ ಅನಾಹುತಗಳ ಒಂದಿಷ್ಟು ಉದಾಹರಣೆಗಳನ್ನು ಅವರ ಮುಂದಿಟ್ಟೆ. ಅವರು ವಿಚಲಿತರಾದಂತೆ ಕಾಣಲಿಲ್ಲ. ಇಂಥ ಎಷ್ಟೋ ನಮೂನೆ ಗಳನ್ನು ನೋಡಿದ್ದಾರೋ ಅವರು! &lt;/strong&gt;&lt;strong&gt;ಒಂದಿಷ್ಟು ಪರೀಕ್ಷೆಗಳನ್ನು ಮಾಡಿಸಲು ಹೇಳಿ ಸಧ್ಯಕ್ಕೆ ಕೈ ತೊಳೆದುಕೊಂಡರು. ಮುಂದಿನ ವಾರ ಮತ್ತೆ ಭೇಟಿ ನಿಗದಿಯಾಯ್ತು. ಒಂದು ಸಾವಿರ ರೂಪಾಯಿ ಮರೆಯದೆ ವಸೂಲಿ ಮಾಡಿದರು. ನಾನ್ಯಾಕೆ ಡಾಕ್ಟರ ಆಗಲಿಲ್ಲ ಅಂತ ನಾನು ಮರುಗಿದೆ. ದಿನಕ್ಕೆ ಸುಮಾರು ಐವತ್ತು ಜನ ಬಂದರೂ ಐವತ್ತು ಸಾವಿರ ಆಯಿತಲ್ಲವೇ ಅಂತ ಮನಸಿನಲ್ಲೇ ಲೆಕ್ಕ ಹಾಕಿದಾಗ ಇನ್ನು ಸಂಕಟವಾಯ್ತು.&lt;/strong&gt;&lt;br /&gt;&lt;br /&gt;&lt;strong&gt;ಮುಂದಿನ ವಾರ ಎಲ್ಲ ಪರೀಕ್ಷೆಗಳನ್ನು ಮಾಡಿಸಿಕೊಂಡು ಮತ್ತೆ ಡಾಕ್ಟರ ಬಳಿ ಹೋದೆವು. ನಾನು ನಾಗ್ಯನ ಸಮಸ್ಸೆ ಬಗೆಹರಿಸುವ ಪಣ ತೊಟ್ಟಾಗಿತ್ತು. ರಿಪೋರ್ಟ್ ಗಳನ್ನು ಡಾಕ್ಟರ ಮುಂದೆ ಇಟ್ಟೆವು. ಅದರಲ್ಲಿ ವಿಧ ವಿಧವಾದ ಕೋನಗಳಲ್ಲಿ ನಗ್ಯಾನ ತಲೆಯ ಸ್ಕ್ಯಾನ್ ಮಾಡಿಸಿದ ಚಿತ್ರ ಗಳಿದ್ದವು. ಅದನ್ನು ನೋಡಿ ನನಗೆ ಸಮಾಧಾನವಾಯ್ತು. ಯಾಕಂದರೆ ಅದರಿಂದ ನಾಗ್ಯಾನಿಗೆ ಮಿದುಳು ಇರುವುದು ಖಚಿತವಾಗಿತ್ತು! ಎಲ್ಲ ರಿಪೋರ್ಟ್ ಗಳನ್ನು ಕೂಲಂಕುಶವಾಗಿ ಪರೀಕ್ಷಿಸಿದ ವೈದ್ಯರು ಒಂದಿಷ್ಟು ಗುಳಿಗೆ ಗಳನ್ನು ಕೊಟ್ಟರು. ಎರಡು ತಿಂಗಳ ಅವಧಿಯ ಕೋರ್ಸ್. ಮತ್ತೆ ಐದು ಸಾವಿರ ಬಾಚಿಕೊಂಡರು. ಔಷಧಿ ಮರೆಯದೆ ತೆಗೆದುಕೊಳ್ಳಿ ಅಂತ ಉಪದೇಶಿಸಿದ್ದು ಸ್ವಲ್ಪ ಹಾಸ್ಯಾಸ್ಪದ ವಾಗಿತ್ತು. ದಿನಕ್ಕೆ ಮೂರು ಸರ್ತಿ ಮರೆಯದೆ ಗುಳಿಗೆ ತಿನ್ನುವುದು ಮರೆಗುಳಿ ನಾಗ್ಯನಿಗೆ ಸಾಧ್ಯವೇ? ನನಗದು ಚಿಂತೆಯ ವಿಷಯವೂ ಆಗಿತ್ತು. ಅದಕ್ಕೂ ಪರಿಹಾರವಿತ್ತು. ಸಧ್ಯ ಅವನ ಹೆಂಡತಿ ಮರೆಗುಳಿ ಇರಲಿಲ್ಲವಲ್ಲ! ಅವಳಿಗೆ ಗುಳಿಗೆ ಯಾವಾಗ ಕೊಡಬೇಕು ಅಂತ ತಿಳಿಸಿ ಹೇಳಿ ಮನೆಗೆ ಹೋದೆ. &lt;/strong&gt;&lt;br /&gt;&lt;br /&gt;&lt;strong&gt;ಎರಡು ತಿಂಗಳು ಹೀಗೆ ಕಳೆಯಿತು. ಅಲ್ಲಿಯವರೆಗೆ ನಾಗ್ಯಾ ಮತ್ತು ನಾನು ಭೇಟಿಯಾಗುವುದು ಸಾಧ್ಯವಾಗಿರಲಿಲ್ಲ. ಅವತ್ತೊಂದು ದಿನ ನಾಗ್ಯಾನ ಫೋನ್ ಬಂತು. ಮರೆಯದೆ ಫೋನ್ ಮಾಡಿದ್ದು ಕಂಡು ಖುಷಿಯಾಯ್ತು. &lt;/strong&gt;&lt;strong&gt;ಔಷಧಿ ಕೆಲಸ ಮಾಡಿರುವುದು ನಿಚ್ಚಳವಾಗಿತ್ತು. ಮರಿಯಪ್ಪನವರ ಬಗ್ಗೆ ಅಭಿಮಾನ ಮೂಡಿತು. &lt;/strong&gt;&lt;br /&gt;&lt;strong&gt;&lt;br /&gt;&lt;/strong&gt;&lt;br /&gt;&lt;strong&gt;"ಹೇಳೋ ನಾಗ್ಯಾ ಅರಾಮಿದ್ದಿಯ?" ಅಂತ ಕೇಳಿದೆ. &lt;/strong&gt;&lt;br /&gt;&lt;br /&gt;&lt;strong&gt;"ಹೂನಪ್ಪ ನೀ ಹೆಂಗಿದ್ದಿ?" ಅಂತ ಕೇಳಿದ. ಉಭಯ ಕುಶಲೋಪರಿಗಳ ನಂತರ &lt;/strong&gt;&lt;br /&gt;&lt;br /&gt;&lt;strong&gt;"ನೀ ಹೋಗಿದ್ದು ಕೆಲಸ ಏನಾತು" ಅಂದ, ಯಾವ ಕೆಲಸ ಅಂತ ನಾನು ಗೊಂದಲದಲ್ಲಿ ಬಿದ್ದೆ. ಅಥವಾ ನಾನೇ ಏನಾದರೂ ಇವನಿಗೆ ಹೇಳಿ ಮರೆತುಬಿಟ್ಟೆನಾ? ಡಾ. ಮರಿಯಪ್ಪನವರ ಬರಿ ಹೋಗುವ ಸರದಿ ಈಗ ನಂದು ಅಂತ ಅನಿಸ್ತು. ಈ ಗೊಂದಲ ಪರಿಹರಿಸಿಕೊಳ್ಳಲು ನಾಗ್ಯಾನಿಗೆ ಕೆಲವು ಪ್ರಶ್ನೆ ಗಳನ್ನು ಕೇಳಲು ತೊಡಗಿದಾಗ, ನಾಗ್ಯಾ ಅರುಹಿದ್ದು ಹೀಗೆ,&lt;/strong&gt;&lt;br /&gt;&lt;br /&gt;&lt;strong&gt;"ಓ ಸಾರೀ ಪಾ, ನಾನು ರವಿಗೆ ಒಂದು ಕೆಲ್ಸಾ ಹೇಳಿದ್ದೆ, ಅದರ ಬಗ್ಗೆ ಅವಂಗ ಕೇಳುದು ಬಿಟ್ಟು ನಿನಗ ಫೋನ್ ಮಾಡೀನಿ ನೋಡು" ಅಂದ. &lt;/strong&gt;&lt;br /&gt;&lt;br /&gt;&lt;strong&gt;ನಾನು ಫೋನ್ ಕುಕ್ಕರಿಸಿದೆ. ಈ "ಮಂಗ್ಯಾನ ಮಗನಿಗೆ" ಮರೆವು ಈ ಜನ್ಮದಲ್ಲಿ ಬಿಡುವುದಲ್ಲ ಅಂತ ಸ್ವಲ್ಪ ತಡವಾಗಿ ಅರ್ಥ ಮಾಡಿಕೊಂಡೆ. ಆದರೆ ಯಾಕೋ ಮರಿಯಪ್ಪ ಅವರ ನೆನಪು ತುಂಬಾ ಕಾಡಿತು! &lt;/strong&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2372666341371107821-8854562380594383778?l=kurtkoti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kurtkoti.blogspot.com/feeds/8854562380594383778/comments/default' title='Post Comments'/><link rel='replies' type='text/html' href='http://www.blogger.com/comment.g?blogID=2372666341371107821&amp;postID=8854562380594383778&amp;isPopup=true' title='5 Comments'/><link rel='edit' type='application/atom+xml' href='http://www.blogger.com/feeds/2372666341371107821/posts/default/8854562380594383778'/><link rel='self' type='application/atom+xml' href='http://www.blogger.com/feeds/2372666341371107821/posts/default/8854562380594383778'/><link rel='alternate' type='text/html' href='http://kurtkoti.blogspot.com/2011/06/blog-post.html' title='ಮರೆಗುಳಿಗೆ'/><author><name>ಗುರುಪ್ರಸಾದ ಕುರ್ತಕೋಟಿ</name><uri>http://www.blogger.com/profile/10861815905653228183</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_e_tOxrsrEcc/SejNhmMPHWI/AAAAAAAAAkA/7fs9a56NqZg/S220/DSCF3720.JPG'/></author><thr:total>5</thr:total></entry><entry><id>tag:blogger.com,1999:blog-2372666341371107821.post-4892684783386351672</id><published>2011-04-22T21:12:00.000-07:00</published><updated>2011-04-22T21:12:57.407-07:00</updated><title type='text'>ಇ(ಹಿ)ಗೋ ಕನ್ನಡ!</title><content type='html'>&lt;div dir="ltr" style="text-align: left;" trbidi="on"&gt;ಅದೊಂದು ಭಾನುವಾರದ ಸುಂದರ ಮುಂಜಾನೆ! ನಾನು ಚಹದ ಲೋಟ ಕೈಗಿಟ್ಟುಕೊಂಡು ಕನ್ನಡ ವೃತ್ತ ಪತ್ರಿಕೆ ಓದುತ್ತಿದ್ದೆ. ನನ್ನ ೩ ವರ್ಷದ ಮಗಳು ತನ್ನ ಮುದ್ದು ಕಂಠದಲ್ಲಿ ಕನ್ನಡದಲ್ಲಿ ಹಾಡು ಹೇಳುತ್ತಿದ್ದಳು. ನನಗದೇ ಸಂಭ್ರಮ! "ಬಾಬಾ ಬ್ಲಾಕ್ ಶೀಪ್ ..." ಹಾಡು ಬಿಟ್ಟು ಕನ್ನಡದ ಹಾಡು ಹೇಳುವುದೆಂದರೇನು ಕಡಿಮೆ ಸಂತಸದ ವಿಷಯವೇ?! ಅವಳ ಶಾಲೆ ಪ್ರವೇಶದ ಸಮಯದಲ್ಲಿ ಅವರ ಹೆಡ್ ಮಿಸ್ (?!) ಗೆ ನಾನು ಖಡಾ ಖಂಡಿತ ವಾಗಿ ಮಗಳಿಗೆ ಕನ್ನಡ ಕಲಿಸಲೇ ಬೇಕು ಅಂತ ತಾಕಿತು ಮಾಡಿದ್ದೆ! ಪಾಪ ಅವರು ಅವಾಗೊಂದು ಇವಾಗೊಂದು ಅಂತ ಕನ್ನಡ ಹಾಡನ್ನಾದರೂ ಹೇಳಿ ಕೊಟ್ಟಿದ್ದಾರೆ. ಅವರಿಗೆ ನಾನು ಚಿರ ಋಣಿ! &lt;br /&gt;&lt;br /&gt;ಮಗಳು ಹಾಡುತ್ತಿದ್ದ ಹಾಡು ಹೀಗಿತ್ತು "ಅಮ್ಮ ಅಮ್ಮ ನಂಗೆ ಹಸಿವೆ ಇಲ್ಲಮ್ಮ, ಮೂರೂ ಮೂರೂ ದೋಸೆ ಅಷ್ಟೇ ಸಾಕಮ್ಮ...", ಆದರೆ ಅವಳ್ಯಾಕೋ ಅದನ್ನ ಬೇರೆ ತರಹ ಹಾಡುತ್ತಿದ್ದಾಳೆ ಅನಿಸಿತು. ಇನ್ನೊಮ್ಮೆ ಲಕ್ಷ್ಯ ಕೊಟ್ಟು ಕೇಳಿದಾಗ ಆಘಾತ ವಾಯಿತು! ಅವಳು ಹೀಗೆ ಹಾಡುತ್ತಿದ್ದಳು "ಹಮ್ಮ ಹಮ್ಮ ನಂಗೆ ಅಸಿವೆ ಇಲ್ಲಮ್ಮ...." ನನಗೆ ಕೆಂಡದಂಥ ಕೋಪ ಬಂತು. ಅವಳಿಗೆ ತಿಳಿಸಿ ಹೇಳಿದೆ "ಹ" ಕಾರಕ್ಕೆ "ಅ" ಕರ ಹಚ್ಚಬೇಡ ಎಂದು. ಅವಳು ಕೂಡಲೇ ತಿದ್ದಿಕೊಂಡಳು. ಮುಂದೆ ಯಾವಾಗಲೋ ಅವಳನ್ನು ಶಾಲೆಗೇ ಬಿಡಲು ಹೋದಾಗ ಅವರ ಹೆಡ್ ಮಿಸ್ ಎದುರು ಈ ವಿಷಯ ಪ್ರಸ್ತಾಪಿಸಿದೆ. ಅವರು ತಾವು ಹಾಗೆಲ್ಲ ಕಲಿಸುವುದಿಲ್ಲ ಬೇರೆ ಮಕ್ಕಳು ಮಾತನಾಡುವುದ ಕೇಳಿ ಹಾಗೆ ಮಾತಾಡ್ತಾರೆ ಅಂದರು. ಇದ್ದರು ಇರಬಹುದು ಅನಿಸಿತು. ಆ ವಿಷಯ ಅಲ್ಲಿಗೆ ಬಿಟ್ಟೆ.&lt;br /&gt;&lt;br /&gt;ಇದಾಗಿ ಕೆಲ ದಿನಗಳ ನಂತರ, ಹೀಗೆ ಒಂದು ದಿನ ನನ್ನ ಮಗಳ ಜೊತೆ ಆಡಲು, ಅವಳಿಗಿಂತ ೨ ವರ್ಷ ದೊಡ್ಡವಳಾದ ನಮ್ಮ ಅಪಾರ್ಟಮೆಂಟ್ ನ ವಾಚ್ ಮ್ಯಾನ್ ಮಗಳು ಭೂಮಿಕ ಮನೆಗೆ ಬಂದಿದ್ದಳು. ಅವಳು ಆಗಾಗ ಬರುತ್ತಿರುತ್ತಾಳೆ. ನಾನು ಕುತೂಹಲಕ್ಕೆ ಅವರ ಆಟವನ್ನು ವೀಕ್ಷಿಸುತ್ತಿದ್ದೆ. ಅವರಾಡುತ್ತಿದ್ದುದು ಅಡುಗೆ ಮಾಡೋ ಆಟ. &lt;br /&gt;&lt;br /&gt;ನನ್ನ ಮಗಳು "ನಂಗೆ ಹಸಿವೆ ಆಗಿದೆ ಊಟ ಕೊಡು" ಅಂದಳು.&lt;br /&gt;&lt;br /&gt;ಭೂಮಿಕ "ಸ್ವಲ್ಪ ತಡಿ ಪುಟ್ಟ, ಹನ್ನ ಮಾಡ್ತಾ ಇದ್ದೀನಿ, ಅಲ್ಲಿವರೆಗೆ ಆಲು ಕುಡಿ" ಅಂದಳು.&lt;br /&gt;&lt;br /&gt;ನನ್ನ ಎದೆ ಧಸಕ್ಕೆಂದಿತು! ನನ್ನ ಮಗಳಿಗೆ "ಹ" ಕಾರಕ್ಕೆ "ಅ" ಕಾರ ಹಾಗು "ಅ" ಕಾರಕ್ಕೆ "ಹ" ಕಾರ ಹಾಕುವುದ ಕಲಿಸಿದವಳು ಇದೆ ಹುಡುಗಿ ಅಂತ ಗೊತ್ತಾಯಿತು. ನಾನು ವಾಚ್ ಮ್ಯಾನ್ ನನ್ನು ಕರೆದು "ಏನಯ್ಯ ನಿನ್ನ ಮಗಳು ಹೀಗೆ ತಪ್ಪು ತಪ್ಪು ಕನ್ನಡ ಮಾತಾಡ್ತಾಳೆ " ಅಂದೆ. &lt;br /&gt;&lt;br /&gt;ಅವನು "ಹೇನ್ ಮಾಡೋದು ಸಾರ್ ನಮ್ಮ ಮನೇಲಿ ಮಾತಾಡೋದೇ ಅಂಗೆ" ಅಂದ! ನನಗೆ ತಲೆ ಸುತ್ತಿದ ಅನುಭವ. ಅವನು ಮುಂದು ವರೆಸಿದ "ನೀವೇ ಏಳಿ ಕೊಡಿ ಹವಳಿಗೆ" ಅಂದ. ಅದೇನೋ ಹೇಳ್ತಾರಲ್ಲ "ಮದುವೆ ಆಗಿದೆಯ ಅಂದ್ರೆ ನೀನೆ ಮದುವೆ ಮಾಡ್ಕೋ " ಅಂದ್ರಂತೆ, ಹಂಗಾಗಿತ್ತು ನನ್ನ ಸ್ಥಿತಿ. ಆದರೂ ಅವನ ಮಗಳನ್ನು ತಿದ್ದುವುದು ನನ್ನ ಕರ್ತವ್ಯ ವಾಗಿತ್ತು. ಅದೂ ಅಲ್ಲದೆ ನನ್ನ ಮಗಳಿಗೆ ಹಾನಿ ಆಗುವುದು ತಪ್ಪಿಸುವುದು ನನ್ನ ಆದ್ಯತೆ ಆಗಿತ್ತು. &lt;br /&gt;&lt;br /&gt;"ಆಗಲಿ, ಸಮಯ ಸಿಕ್ಕಾಗಲೆಲ್ಲ ನಿನ್ನ ಮಗಳಿಗೆ ತಿದ್ದುವೆ" ಅಂತ ಭಾಷೆ ಕೊಟ್ಟೆ. ಅದರಂತೆ ನಡೆದುಕೊಂಡೆ ಕೂಡ! ಆದರೆ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ತುಂಬಾ ಕಷ್ಟ ಪಟ್ಟು ಅವಳಿಗೆ ಕಲಿಸುತ್ತಿದೆ. &lt;br /&gt;&lt;br /&gt;ಸುಮಾರು ದಿನಗಳಾದ ಮೇಲೆ, ಒಂದು ದಿನ ಅವಳು ತನ್ನ ಪಠ್ಯ ಪುಸ್ತಕ ತಂದಿದ್ದಳು. ಅದರಲ್ಲಿನ ಒಂದೊಂದೇ ಕನ್ನಡ ಪದಗಳನ್ನು ಉಚ್ಚರಿಸುತ್ತಿದ್ದಳು, ತಪ್ಪಿದರೆ ನಾನು ತಿದ್ದುತ್ತಿದ್ದೆ. ಹಾಗೆ ಹೇಳುತ್ತಾ ಇದ್ದಾಗ.... "ಹರಸ" ಅಂದಳು. "ಹಾಗಾಲ್ಲಮ್ಮ, ಅರಸ ಅನ್ನು" ಅಂದೆ. ಮತ್ತೆ "ಹರಸ" ಅಂದಳು. ನಾನು ಎಷ್ಟೇ ಸಲ ಹೇಳಿದರೂ ತಪ್ಪಾಗಿಯೇ ಹೇಳಿದಳು, ಅದು ಅಲ್ಲದೆ "ಇಲ್ಲಿ ಹೀಗೆ ಇದೆ" ಅಂತ ವಾದ ಬೇರೆ ಮಾಡತೊಡಗಿದಳು. ನಾನು ಕೋಪದಿಂದ "ಪುಸ್ತಕ ಕೊಡು ಇಲ್ಲಿ" ಅಂದೆ. ನನಗೆ ಹುಚ್ಚು ಹಿಡಿಯುವುದೊಂದೇ ಬಾಕಿ! ಪುಸ್ತಕದಲ್ಲಿ "ಹರಸ" ಅಂತಲೇ ಮುದ್ರಿತವಾಗಿತ್ತು! ಪಕ್ಕಕ್ಕೆ ರಾಜನ ಚಿತ್ರ ಬೇರೆ. ಹಾಗಾಗಿ ಹರಸ ಅಂತ ಬೇರೆ ಯಾವುದೋ ಪದವಿರಬಹುದಾದ ಸಾಧ್ಯತೆಯ ಬಗ್ಗೆ ಯೋಚಿಸುವ ಪ್ರಶ್ನೆಯೇ ಇರಲಿಲ್ಲ! ನಾನು ಪುಸ್ತಕವನ್ನು ಪೂರ್ತಿಯಾಗಿ ಜಾಲಾಡಿಸಿದಾಗ ಇನ್ನು ಅನೇಕ ಕಡೆ ಈ ಥರ ತಪ್ಪು ತಪ್ಪಾಗಿ ಮುದ್ರಿಸಿದ್ದರು! ಪಠ್ಯ ಪುಸ್ತಕವೇ ಹೀಗಿದ್ದರೆ ಅದನ್ನು ಓದಿ ಕಲಿಯುವ ಮಕ್ಕಳ ಗತಿ? ಶಾಲೆಯಲ್ಲಾದರೂ ತಿದ್ದುತ್ತಾರೆಯೇ? ಗೊತ್ತಿಲ್ಲ! ನನ್ನ ಮಗಳ ವಿದ್ಯಾಭ್ಯಾಸದ ಬಗ್ಗೆ ನನಗೆ ನಿಜಕ್ಕೂ ಚಿಂತೆ ಶುರುವಾಗಿದೆ!! &lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2372666341371107821-4892684783386351672?l=kurtkoti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kurtkoti.blogspot.com/feeds/4892684783386351672/comments/default' title='Post Comments'/><link rel='replies' type='text/html' href='http://www.blogger.com/comment.g?blogID=2372666341371107821&amp;postID=4892684783386351672&amp;isPopup=true' title='4 Comments'/><link rel='edit' type='application/atom+xml' href='http://www.blogger.com/feeds/2372666341371107821/posts/default/4892684783386351672'/><link rel='self' type='application/atom+xml' href='http://www.blogger.com/feeds/2372666341371107821/posts/default/4892684783386351672'/><link rel='alternate' type='text/html' href='http://kurtkoti.blogspot.com/2011/04/blog-post.html' title='ಇ(ಹಿ)ಗೋ ಕನ್ನಡ!'/><author><name>ಗುರುಪ್ರಸಾದ ಕುರ್ತಕೋಟಿ</name><uri>http://www.blogger.com/profile/10861815905653228183</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_e_tOxrsrEcc/SejNhmMPHWI/AAAAAAAAAkA/7fs9a56NqZg/S220/DSCF3720.JPG'/></author><thr:total>4</thr:total></entry><entry><id>tag:blogger.com,1999:blog-2372666341371107821.post-1561309640213648510</id><published>2011-03-12T03:07:00.000-08:00</published><updated>2011-03-12T06:47:53.999-08:00</updated><title type='text'>ಖೊಬ್ರಿ ಹೋಳಿಗೆ</title><content type='html'>&lt;div dir="ltr" style="text-align: left;" trbidi="on"&gt;ಸುಮಾರು ಏಳು ವರ್ಷಗಳ ಹಿಂದೆ, ಸಿರಸಿಯ ಬದಿಯ ಚಿಕ್ಕ ಹಳ್ಳಿಯೊಂದರ ಹವ್ಯಕರ ಹುಡುಗಿಯ ಜೊತೆ ನನ್ನ ಮದುವೆ ನಡೆಯಿತು. ನಾನಾಗ ಧಾರವಾಡದಲ್ಲಿದ್ದೆ. ನಾನು ಬಯಲು ಸೀಮೆಯ ಗಂಡು, ಎಲ್ಲಿದೆಲ್ಲಿಯ ಸಂಬಂಧ! ಒಂದೊಂದು ಸರ್ತಿ ವಿಚಿತ್ರ ಅನಿಸುತ್ತೆ. ಅದಕ್ಕೆ ಅಲ್ಲವೇ ಮಾಮರವೆಲ್ಲೋ ಕೋಗಿಲೆ ಎಲ್ಲೊ ಅನ್ನೋದು! ನಿಶ್ಚಯಕ್ಕೆ ನನ್ನ ಆಪ್ತ ಮಿತ್ರರನ್ನು ಕರೆದುಕೊಂಡು ಸಿರಸಿ - ಸಿದ್ಧಾಪುರ ನಡುವೆ ಕಾಡಿನ ಮಧ್ಯೆ ನಾವು ಪಯಣಿಸುತ್ತಿದ್ದರೆ, ನನ್ನ ಬಯಲು ಸೀಮೆಯ ಗೆಳೆಯನೊಬ್ಬ ಭಯಂಕರ ಆಶ್ಚರ್ಯದಿಂದ ಕೇಳಿದ "ಹೆಂಗ ಹುಡಿಕಿದಿಲೆ ಈ ಹುಡುಗೀನ!?". &lt;br /&gt;&lt;br /&gt;ನನಗೂ ಹಳ್ಳಿ, ಝರಿ, ಗಿಡ - ಮರ ಕಂಡರೆ ತುಂಬಾ ಇಷ್ಟ. ಹಾಗಿದ್ದಾಗ, ನಮ್ಮ ಕುಟುಂಬದ ಆಪ್ತರೊಬ್ಬರು ಚೆಂದನೆಯ ಹುಡುಗಿಯ ಫೋಟೋ ಮುಖಕ್ಕೆ ಹಿಡಿದು, ಮಲೆನಾಡ ಹುಡುಗಿನ ಮದುವೆ ಆಗ್ತಿಯ ಅಂದಾಗ, ನಾನು "ಇಲ್ಲ" ಅನ್ನುವ ಚಾನ್ಸೇ ಇರಲಿಲ್ಲ! ಹುಡುಗಿಯ ಮನೆಯ ಹಿಂದುಗಡೆಯೇ ಒಂದು ಫಾಲ್ಸ್ ಇದೆ ಅಂತ ಅವರು ಹೇಳಿದಾಗಲಂತೂ ಸ್ವರ್ಗಕ್ಕೆ ಮೂರೇ ಗೇಣು! ಆದರೆ ಅವರು ಹೇಳಿದ್ದು ಸ್ವಲ್ಪ ಅತಿಶಯೋಕ್ತಿ ಅಂತ ಆಮೇಲೆ ಗೊತ್ತಾಯ್ತು. ಫಾಲ್ಸ್ ಅಷ್ಟು ಹತ್ತಿರದಲ್ಲಿ ಇರಲಿಲ್ಲ. ಆದರೆ ನನ್ನ ಮಾವನ ಮನೆಯ ಸುತ್ತ ಮುತ್ತ ಫಾಲ್ಸ್ ಗಳಿಗೆ ಕೊರತೆಯೂ ಇಲ್ಲ. ಅದೇನೇ ಇರಲಿ ನಾನಂತೂ ಹುಡುಗಿನ ನೋಡಿ "ಫಾಲ್" ಆಗಿದ್ದಾಗಿತ್ತು! &lt;br /&gt;&lt;br /&gt;ಮದುವೆಯಾದ ಮೊದಲ ವರ್ಷ ಆ ಹಬ್ಬ, ಈ ಹಬ್ಬ ಅಂತ ಮಾವನ ಮನೆಗೆ ಹೋಗುವುದು ಇದ್ದೆ ಇರುತ್ತಿತ್ತು. ಅದು ಮಗಳಿಗಿಂತ ನನಗೆ ಸಂಬ್ರಮ! ಯಾಕಂದರೆ ಆ ನೆಪದಲ್ಲಾದರೂ ಹಳ್ಳಿಯ ಸೊಬಗು ಸವಿಯುವ ಸೌಭಾಗ್ಯ ನನ್ನದು. ಆದರೆ ಮಲೆನಾಡ ಕಡೆಯ ಹಳ್ಳಿಗಳು ಕೆಲವು ವಿಷಯದಲ್ಲಿ ನಮ್ಮ ಬಯಲು ಸೀಮೆಯ ಹಳ್ಳಿಗಳಿಗಿಂತ ವಿಭಿನ್ನ ಅನ್ನುವುದು ನಾನು ಕಂಡುಕೊಂಡ ಸತ್ಯ. ಅದೇನೇ ವಿಭಿನ್ನತೆ ಇದ್ದರೂ ಎರಡೂ ಕಡೆಯ ಉಪಚರಿಸುವ ಪರಿ ಒಂದೇ! ಅಲ್ಲದೇ, ಕೈ ದೊಡ್ಡದು. ಹೋದಾಗಲೋಮ್ಮೆ ನನ್ನ ಬಾವ ತಮ್ಮ ಬಳಗದವರ ಮನೆಗೆಲ್ಲ ಕರೆದೊಯ್ಯುತ್ತಿದ್ದ. ಹಾಗೆ ಹೋಗುವುದು ಮೊದ ಮೊದಲು ಮಜವಾಗಿತ್ತಾದರೂ ನಂತರದ ದಿನಗಳಲ್ಲಿ ತುಂಬಾ ಕಿರಿ ಕಿರಿ ಆಗತೊಡಗಿತು. ನಮ್ಮ ಅತ್ತೆ - ಮಾವರ ಬಳಗ ದೊಡ್ಡದು. ಎಲ್ಲರ ಮನೆಗಳು ಅಲ್ಲೇ ಸುತ್ತ ಮುತ್ತ ಹಳ್ಳಿಗಳಲ್ಲಿವೆ. ಅತ್ತೆಯಂದಿರು, ಚಿಕ್ಕಮ್ಮ - ಚಿಕ್ಕಪ್ಪಗಳು, ಸೋದರ ಮಾವಂದಿರು,... ಹೀಗೆ ಎಲ್ಲರ ಮನೆಗೆ ಭೇಟಿ ಕೊಡಲೇಬೇಕು. ಬಾವ ನಾನು ಬರುವುದು ಗೊತ್ತಾದ ಕೂಡಲೇ ಒಂದು ಮಾಸ್ಟರ್ ಪ್ಲಾನ್ ತಯಾರಿಸಿಕೊಂಡು ಬಿಡುತ್ತಿದ್ದ. ದಿನಕ್ಕೆ ಕನಿಷ್ಠ ನಾಲ್ಕು ಮನೆಗಳಿಗೆ ಭೇಟಿ, ಕೊಡುವುದು ಅವನ ಟಾರ್ಗೆಟ್. ಒಂದು ಮನೆಯಲ್ಲಿ ಆಸರಿಗೆ (ಆಸರಿಗೆ ಅಂದರೆ ನಮ್ಮ ಕಡೆ ಚಹಾ-ಚೂಡ ಇದ್ದಂಗೆ), ಇನ್ನೊಂದು ಮನೆಯಲ್ಲಿ ಮದ್ಯಾನ್ಹದ ಊಟ, ಮತ್ತೊಂದು ಮನೆಯಲ್ಲಿ ಮತ್ತೆ ಆಸರಿಗೆ, ಕೊನೆಗೊಂದು ಮನೆಯಲ್ಲಿ ರಾತ್ರಿಯ ಊಟ! ಅದಲ್ಲದೆ ಮಾಸ್ಟರ್ ಪ್ಲಾನ್ ಬಿಟ್ಟು ಬೇರೆ ಭೇಟಿಗಳೂ ಇರುತ್ತಿದ್ದವು. ದಾರಿಯಲ್ಲಿ ಬರುವಾಗ, "ಇದು ನಮ್ಮ ಅಜ್ಜಿಯ ತವರು ಮನೆ" ಅಂತ ಹೇಳಿ ಅವರ ಮನೆಗೆ ಕರೆದೊಯ್ಯುತ್ತಿದ್ದ! ಬಯಲು ಸೀಮೆಯ ಗಂಡು ನಾನಾದ್ದರಿಂದ, ಮಲೆನಾಡಿನ ಮನೆಗಳಲ್ಲಿ ಕೇಜಿಗಟ್ಟಲೆ ಅನ್ನ ತಿಂದು ಹೈರಾಣಾಗತೊಡಗಿದೆ. ಅದೊಂದೇ ಅಲ್ಲ, ಅದರ ಜೊತೆಗೆ ಎಲ್ಲರ ಮನೆಯಲ್ಲೂ ಸಿಹಿ ತಿನಿಸುಗಳು. ನಿಜಕ್ಕೂ ಸಿಹಿ ತಿನ್ನೋದರಲ್ಲಿ ಅವರದು ಎತ್ತಿದ ಕೈ. ಸಿಹಿಯಾದ ಹೋಳಿಗೆಗೆ ಸಕ್ಕರೆ ಪಾಕ ಹಾಕಿಕೊಂಡು ತಿನ್ನುತ್ತಾರೆ! ನನಗೆ ಅದನ್ನು ನೋಡಿಯೇ ಹೊಟ್ಟೆ ತುಂಬುತ್ತಿತ್ತು, ಇನ್ನು ಹಾಗೆ ತಿನ್ನುವುದಂತೂ ದೂರದ ಮಾತು. &lt;br /&gt;&lt;br /&gt;ಅದೂ ಅಲ್ಲದೆ ಯಾರದೇ ಮನೆಯಲ್ಲಿ ಏನಾದರೂ ತಿನ್ನುವುದಿದ್ದರೆ ಅಡಿಗೆ ಮನೆಗೇ ಹೋಗಬೇಕು! ೫ ಫೂಟ್ ಉದ್ದದ ಪ್ರಧಾನ ಬಾಗಿಲಿಗೆ ಎಷ್ಟೋ ಸರ್ತಿ ತಲೆ ಬಡಿಸಿಕೊಂಡದ್ದಿದೆ. ಹಾಗೆ ಬಡಿಸಿಕೊಂಡಾಗಲೊಮ್ಮೆ , ಆ ಮನೆಯ ಯಜಮಾನರು "ತಗ್ಗಿ ಬಗ್ಗಿ ನಡೆಯೋವು ಅಂತ ನಮ್ಮ ಹಿರಿಯರು ಹೀಗೆ ಮಾಡ್ಸಿದ್ದು ನೋಡು ತಮ್ಮಾ" ಅಂತ, ಬುದ್ಧಿ ಹೇಳೋರು. ತಲೆಗೆ ಬಡಿಸಿಕೊಂಡ ನೋವು, ನನಗದು ಕಾಣಲೇ ಇಲ್ಲವಲ್ಲ ಎಂಬ ಅಪಮಾನ, ಅದರ ಮೇಲೆ ಯಜಮಾನರ ಪ್ರವಚನ! ಈ ಥರ ಆದ ಮೇಲೆ ಯಾರ ಮನೆಗೆ ಹೋದರೂ ಮನೆ ತುಂಬಾ ತಲೆ ತಗ್ಗಿಸಿಕೊಂಡೇ ನಡೆಯಲಾರಂಭಿಸಿದೆ! &lt;br /&gt;&lt;br /&gt;ನಾನು ಸುಸ್ತಾಗಿ ಹೋಗಿದ್ದೆ! ಮಾವನ ಮನೆಗೆ ಹೋಗಲೇ ಹೆದರಿಕೆ ಬರುವಂತಾಯ್ತು. ಹೀಗೆ ಒಂದು ಬಾರಿ ಹೋದಾಗ, ಬಾವನ ಬಳಿ ನಿಷ್ಟುರನಾಗಿ ಹೇಳಿ ಬಿಟ್ಟೆ. &lt;br /&gt;&lt;br /&gt;"ನನಗೆ ಈ ಪರಿ ತಿಂದು ಅಭ್ಯಾಸವಿಲ್ಲ, ಸಿಹಿ ತಿನಿಸಂತೂ ನನಗೆ ತಿನ್ನಲು ಆಗದು. ನೀನು ಹೀಗೆ ಎಲ್ಲರ ಮನೆಯಲ್ಲೂ ತಿನ್ನಿಸಿದರೆ ನಾನು ಎಲ್ಲೂ ಬರುವುದಿಲ್ಲ" ಅಂತ. ಬಾವ ಮೀಸೆಯಡಿಯಲ್ಲೇ ಸಣ್ಣಗೆ ನಗುತ್ತಿದ್ದನೋ ಅಥವಾ ಅದೂ ನನ್ನ ಭ್ರಮೆಯೋ ಗೊತ್ತಿಲ್ಲ! &lt;br /&gt;&lt;br /&gt;"ಆಯ್ತು ಬಾವ, ನಾನು ಪ್ರತಿಯೊಬ್ಬರ ಮನೆಗೆ ಭೇಟಿ ಕೊಟ್ಟಾಗ ಈ ರೀತಿ ಅವರಿಗೆ ಹೇಳುವೆ" ಅಂತ ಭಾಷೆ ಕೊಟ್ಟ. &lt;br /&gt;&lt;br /&gt;ಸರಿ ಅಂತ ಮತ್ತೆ ನಮ್ಮ ದಂಡ ಯಾತ್ರೆ ಶುರುವಾಯ್ತು. ಆದರೆ ಬಾವ ಮಾತ್ರ ತಾನು ಕೊಟ್ಟ ಮಾತಿಗೆ ತಪ್ಪಲಿಲ್ಲ! ಮೊದಲೇ ಅಡುಗೆ ಮನೆಗೆ ಹೋಗಿ ಹೇಳಿ ಬಿಡುತ್ತಿದ್ದ. ಹೀಗಾಗಿ ಸಿಹಿ ತಿನ್ನಲು ನನಗಾರು ವತ್ತಾಯ ಮಾಡುತ್ತಿರಲಿಲ್ಲ. ಅದೂ ಅಲ್ಲದೆ, ಊಟದಲ್ಲೂ ಕೆಲವರು ಮಾರ್ಪಾಡು ಮಾಡತೊಡಗಿದರು. ಅನ್ನದ ಬದಲು ಚಪಾತಿ, ಪಲ್ಯ ಇರುತ್ತಿತ್ತು. ಹೀಗೆ ಬಯಲು ಸೀಮೆ ಗಂಡಿನ ಅಳೆಯತನ ಸಾಂಗವಾಗಿ ನಡೆದಿತ್ತು! &lt;br /&gt;&lt;br /&gt;ಅಂಥದರಲ್ಲಿ ಒಂದು ಸರ್ತಿ ಯಾವುದೋ ಹತ್ತಿರದ ಹಳ್ಳಿಯಲ್ಲಿ ಮಾವನ ಸಂಬಂಧಿಯೊಬ್ಬರ ಮನೆಯಲ್ಲಿ ಉಪನಯನವಿತ್ತು. ಬಾವನ ಸಂಗಡ ನಾನು ಹೋಗಿದ್ದೆ. ಊಟಕ್ಕೆ ಪಂಕ್ತಿಯಲ್ಲಿ ಬಾವನೊಂದಿಗೆ ಪವಡಿಸಿದ್ದೆ. ಮತ್ತೆ ಅನ್ನ, ತಂಬಳಿ, ಹಸಿ... ಅದನ್ನು ಬಿಟ್ಟು ಬೇರೆ ಏನು ಇರಲು ಸಾಧ್ಯ?! ನಾನು ನಿರ್ಲಿಪ್ತನಾಗಿದ್ದೆ. ಒಂದೆರಡು ರೌಂಡ್ ಆದ ಮೇಲೆ, ಸಿಹಿ ತಿನಿಸಿನ ಸಮಯ. ನಾನು ಪೂರ್ತಿ ಟೆನ್ಶನ್ ನಲ್ಲಿದ್ದೆ! ಸಿಹಿ ತಿನಿಸು ನನ್ನ ಎಲೆಗೆ ಬೀಳದಂತೆ ತಡೆಯುವದು ನನ್ನ ದೊಡ್ಡ ಚಾಲೆಂಜ್ ಆಗಿತ್ತು! ಅಷ್ಟರಲ್ಲೇ ಯಾರೋ ಬಾವನ ಪರಿಚಯದವರೇ ಸಿಹಿ ಪದಾರ್ಥ ಬಡಸುತ್ತಿದ್ದರು. ಬಡಸುವವರು ನನ್ನ ಎಲೆ ಹತ್ತಿರ ಬಂದ್ರು. "ಕಾಯಿ ಹೋಳಿಗೆ" ಅಂದ್ರು. ಇದು ಯಾವ ಕಾಯಿಯಿಂದ ಮಾಡಿದ್ದೋ ಅಂತ ನಾನು ಅಸಡ್ಡೆಯಿಂದ "ಬೇಡ" ಅಂದೇ. ಆದರೆ ನನಗಿಂತ ಮೊದಲೇ ಬಾವ ನನ್ನ ಎಲೆಗೆ ಕೈ ಅಡ್ಡ ಹಿಡಿದು, "ಅವ್ನು ಸ್ವೀಟ್ ತಿನ್ತ್ನಿಲ್ಲೇ ಅವನಿಗೆ ಹಾಕಡ" ಅಂತ ಹರ ಸಾಹಸ ಮಾಡಿ ಸಿಹಿ ಪದಾರ್ಥ ನನ್ನ ಎಲೆಗೆ ಬೀಳುವುದ ತಪ್ಪಿಸಿದ್ದ! ಏನೋ ಸಾಧಿಸಿದ ಭಾವ ಅವನ ಮುಖದಲ್ಲಿ ಎದ್ದು ಕುಣಿಯುತ್ತಿತ್ತು. ನಾನು ನಿಟ್ಟುಸಿರಿಟ್ಟೆ. ಆದರೆ ಹಾಗೆ ಕುತೂಹಲಕ್ಕೆ "ಕಾಯಿ ಹೋಳಿಗೆ ಅಂದರೆ ಏನು?" ಅಂತ ಕೇಳಿದೆ, "ಖೊಬ್ರೀ ಹಾಕಿ ಮಾಡಿದ ಹೋಳಿಗೆ" ಅಂದ. ನನ್ನ ಎದೆ ಜ್ಹಲ್ ಎಂದಿತ್ತು. ಯಾಕಂದರೆ, ನನಗೆ ಬಹಳಷ್ಟು ಸಿಹಿ ತಿನಿಸುಗಳು ಇಷ್ಟವಿಲ್ಲವಾದರೂ, ಇಷ್ಟವಾಗುವ ಕೆಲವೇ ಕೆಲವುಗಳಲ್ಲಿ ಖೊಬ್ರೀ ಹೋಳಿಗೆಯು ಒಂದು! ನನಗೇನು ಗೊತ್ತು ಖೊಬ್ರೀ ಹೋಳಿಗೆ ಅಂದ್ರೆ ಇಲ್ಲಿ ಕಾಯಿ ಹೋಳಿಗೆ ಅಂತ! ಅಂತು ಇಂತೂ opportunity ಮಿಸ್ ಆಗಿತ್ತು. ವಾಪಸ್ಸು ಕರೆಸಿ ಹಾಕಿಸಿಕೊಳ್ಳೋಕೆ ಸ್ವಾಬಿಮಾನ ಅಡ್ಡ ಬಂತು. ನನಗೆ ಸ್ವೀಟ್ ಸೇರಲ್ಲ ಅಂತ ಬಡಾಯಿ ಕೊಚ್ಚಿಕೊಂಡವನು ನಾನೇ ಅಲ್ವೇ?! &lt;br /&gt;&lt;br /&gt;ಮನೆಗೆ ಬಂದು ಹೆಂಡತಿ ಎದುರು ನನಗಾದ ಫಜೀತಿ ಹಂಚಿಕೊಂಡೆ. ಅವಳು ಬಿದ್ದು ಬಿದ್ದು ನಕ್ಕಳು. ಆದರೆ ಬೆಂಗಳೂರಿಗೆ ಬಂದ ಮೇಲೆ "ಕಾಯಿ ಹೋಳಿಗೆ" ಮಾಡಿ ತಿನ್ನಿಸಿದಳು! ನನ್ನ ಹೆಂಡತಿ ತುಂಬಾ ಒಳ್ಳೆಯವಳು. ಅದಕ್ಕೆ ಅಲ್ವೇ ಅವಳನ್ನ ಮದುವೆಯಾಗಿದ್ದು! &lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2372666341371107821-1561309640213648510?l=kurtkoti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kurtkoti.blogspot.com/feeds/1561309640213648510/comments/default' title='Post Comments'/><link rel='replies' type='text/html' href='http://www.blogger.com/comment.g?blogID=2372666341371107821&amp;postID=1561309640213648510&amp;isPopup=true' title='10 Comments'/><link rel='edit' type='application/atom+xml' href='http://www.blogger.com/feeds/2372666341371107821/posts/default/1561309640213648510'/><link rel='self' type='application/atom+xml' href='http://www.blogger.com/feeds/2372666341371107821/posts/default/1561309640213648510'/><link rel='alternate' type='text/html' href='http://kurtkoti.blogspot.com/2011/03/blog-post_12.html' title='ಖೊಬ್ರಿ ಹೋಳಿಗೆ'/><author><name>ಗುರುಪ್ರಸಾದ ಕುರ್ತಕೋಟಿ</name><uri>http://www.blogger.com/profile/10861815905653228183</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_e_tOxrsrEcc/SejNhmMPHWI/AAAAAAAAAkA/7fs9a56NqZg/S220/DSCF3720.JPG'/></author><thr:total>10</thr:total></entry><entry><id>tag:blogger.com,1999:blog-2372666341371107821.post-2425524338716351256</id><published>2011-03-02T01:07:00.000-08:00</published><updated>2011-03-02T01:07:08.787-08:00</updated><title type='text'>ಹಿಂಗ ಒಂದು ವೀಕೆಂಡು... ( ಭಾಗ ೧)</title><content type='html'>&lt;div dir="ltr" style="text-align: left;" trbidi="on"&gt;ಇವತ್ತ್ಯಾಕೋ ಮುಂಜಾನೆ ಎದ್ದಾಗ ಒಂಥರ ಹುರುಪು. ಅದಕೊಂದು ಕಾರಣ ಇತ್ತು. ಯಾಕಂದ್ರ ಇವತ್ತ ಶುಕ್ರವಾರ! ನಾನು ಮಾಡೋ ಕೆಲಸಾನ ಅಂಥದ್ದು. ಸೋಮವಾರ ಯಾಕರೆ ಬಂತು ಅಂತ ಎಳ್ತೀನಿ, ವೀಕೆಂಡ್ ಎಲ್ಲೆ ಮುಗುದು ಹೋಗತದೋ ಅಂತ ಹಪಹಪಿಯೊಳಗ ಮತ್ತ ಬಾರೋ ಸೋಮವಾರ ಮರಿಲಿಕ್ಕೆ ಪ್ರಯತ್ನ ಮಾಡ್ತೀನಿ. ವಾರದಾಗ ಎರಡು ದಿವ್ಸ ರಜ, ಹಿಂಗ ಬಂದು ಹಿಂಗ ಹೋಗ್ತಾವು ಅದಂತೂ ನಿಜ! &lt;br /&gt;&lt;br /&gt;ಶುಕ್ರವಾರ ಕೆಲಸಕ್ಕ ಹೋಗುದ ಲೇಟು, ಹೋಗುದ್ರಾಗ ಮಧ್ಯಾನ ಊಟದ್ದ ಟೈಮು. ಅವತ್ತ ಯಾವ ಕಾಲ್ ಅಥವಾ ಮೀಟಿಂಗ್ಸ್ ಇರುದಿಲ್ಲ. ಹಿಂಗ ಅಲ್ಲೇ ಇಲ್ಲೇ ಅಡ್ಡಾಡುದ್ರಾಗ ಸಂಜಿ ಆಗಿ ಬಿಡ್ತದ! ಅಮ್ಯಾಲಿನ ಪ್ರೊಗ್ರಾಮ್ ಮೊದಲ ಫಿಕ್ಸ್ ಆಗಿರ್ತದ. ಯಾವಂದೋ ಮನ್ಯಾಗ ಬಾಟಲಿ ವ್ಯವಸ್ಥಾ ಇರತದ. ಹೋಗುದು, ರಾತ್ರಿ ತನಕ ಹೊಟ್ಟಿ ತುಂಬ ಕುಡದು ಮನಿಗೆ ವಾಪಸ್. ಇದೊಂಥರ ಅನ್ನ್ ರಿಟ್ಟನ್ ರೂಲ್! ಒಂದು ಸಲ ರಾಜಾನ ಮನ್ಯಾಗ, ಇನ್ನೊಮ್ಮೆ ವೆಂಕಣ್ಣ ಮತ್ತೊಮ್ಮೆ ಸುಬ್ಬ್ಯ. ನಮ್ಮ ಮನ್ಯಾಗ ಸೇರುದು ಸ್ವಲ್ಪ ಕಷ್ಟ, ಯಾಕಂದ್ರ ನಾನು ಇರೋದು ಅಪ್ಪನ ಜೋಡಿ. ಉಳಕಿದವ್ರಿಗೆಲ್ಲ ಆ ಸಮಸ್ಸೆ ಇರಲಿಲ್ಲ. ಅವರ ಅಪ್ಪಂದ್ರೆಲ್ಲ ಊರಾಗ ಇರ್ತಾರ. ಅದಕ್ಕ ಕಳ್ಳ ನನ ಮಕ್ಳು ಟೈಮ್ ಸಿಕ್ಕಗೊಮ್ಮೆ ಕುಡಿಯೋದ ಕೆಲಸ. ಅವರ ನಸೀಬ್ ನೋಡಿ ನನಗ ಒಂದೊಂದು ಸರ್ತಿ ಹೊಟ್ಟಿ ಕಿಚ್ಚಾಗತಿತ್ತು! ಮುಂದ ನನ್ನ ಲಗ್ನ ಆದ ಮ್ಯಾಲೆ ಇನ್ನೇನು ಗತಿನೋ ಅಂತ ನೆನಿಸಿಕೊಂಡರ ಇನ್ನು ಹೆದರಿಕಿ ಅಗತದ.&lt;br /&gt;&lt;br /&gt;ಆಫೀಸ್ ಬಿಟ್ಟಾಗ ಆಗ್ಲೇ ಸಂಜೆ ಆರಾಗಿತ್ತು. ಎಲ್ಲರು ಕೂಡಿ ವೆಂಕಣ್ಣನ ಕಾರಿನ್ಯಾಗ ಅವನ ಮನಿಗೆ ಹೊಂಟಿವಿ. ಅವಂದು ಹೊಸಾ ಕಾರು. ಹೋದ ತಿಂಗಳನ ತೊಗೊಂಡಾನ. ಅಂವ ತೊಗೊಂಡ ಅಂದ್ಕುಡ್ಲೆ ನನ್ಯಾಕ ಬಿಡ್ಲಿ? ನಂದೂ ಹೊಸಾ ಕಾರು ಬುಕ್ ಮಾಡಿನಿ. ಮುಂದಿನ ವಾರ ಬರ್ತದ. ಮನಷ್ಯನ ಅಸೇನ ಹಂಗ. ಯಾವುದು ಇಲ್ಲ ಅದ ಬೇಕು ಅನಸ್ತದ. ಅದು ಬಂದ ಮ್ಯಾಲೆ ಇನ್ನೇನೋ ಬೇಕು! ಮನಷ್ಯ ಸಾಯು ತನಕ ಆಸೆಗಳು ಸಾಯಂಗೆ ಇಲ್ಲ. ಅಪ್ಪಗ ಒಂದು ಫೋನ್ ಹೊಡದು ನನಗ ಇವತ್ತ ರಾತ್ರಿ ಆಫೀಸ್ನ್ಯಾಗ ಕೆಲಸ ಭಾಳ ಅದ ಲೇಟಾಗಿ ಬರ್ತೀನಿ ಅಂತ ಒಂದು ಹಸಿ ಸುಳ್ಳು ಒಗದೆ. ಪಾಪ ಅಪ್ಪ... ನಾ ಹಿಂಗ ಏನೋ ಒಂದು ಸುಳ್ಳು ಹೇಳಿದಾಗೊಮ್ಮೆ ನಂಬತಾನ. ತನ್ನ ಮಗ ಕುಡುದು ಮನಿಗೆ ಬರ್ತಾನ ಅಂತ ಅವಗ ಒಂದು ಸರ್ತಿನು ಸಂಶಯ ಬಂದಿರಲಿಕ್ಕಿಲ್ಲ ಅಂದ್ರ ಆಶ್ಚರ್ಯ ಅಗತದ. ತನ್ನ ಮಗ ಅಂಥದೆಲ್ಲ ಮಾಡಲಿಕ್ಕೆ ಸಾಧ್ಯನ ಇಲ್ಲ ಅನ್ನೋ ಅಭಿಮಾನನೋ ಅಥವಾ ಕುರುಡು ನಂಬಿಕೆನೋ, ನಂಗೊತ್ತಿಲ್ಲ. &lt;br /&gt;&lt;br /&gt;ನಮ್ಮ ಕಾರ್ಯಕ್ರಮ ಮಸ್ತ ಆಗಿ ನಡದಿತ್ತು. ಹಿಂಗ ಹರಟಿ ಹೊಡಕೋತ ಇದ್ದಾಗ ಕಾರು ಹೊಡಿಯೋದರ ಮ್ಯಾಲೆ ವಾದ ನಡದಿತ್ತು. ವೆಂಕಣ್ಣ ಅಂದ, &lt;br /&gt;&lt;br /&gt;"ನಾನು ನಾರ್ಮಲ್ ಇದ್ದಾಗಿನಕಿಂತ ಕುಡದಾಗ ಕಂಟ್ರೋಲ್ನ್ಯಾಗ ಕಾರ್ ಹೊಡಿತೀನಿ" &lt;br /&gt;&lt;br /&gt;ಇದ್ರೂ ಇರಬಹುದು ಅನಿಸ್ತು ನಂಗ. ಯಾಕಂದ್ರ, ಕುಡದ ಮ್ಯಾಲೆ ಕಾರ್ ಹತ್ರ ಹೋಗುದ್ರಾಗ ಎರಡು ಸಲ ಅರೆ ಕೆಳಗ ಬಿಳತಾನ, ಅದ್ರ ಕಾರ್ ಸ್ಟಾರ್ಟ್ ಮಾಡಿದ ಅಂದ್ರ ಆರಾಮ ಮನಿ ಮುಟ್ಟತಾನ.&lt;br /&gt;&lt;br /&gt;ಅದ್ರ ಸುಬ್ಬ್ಯ ಯಾಕ ಸುಮ್ನ ಇರ್ತಾನ, ಪಟ್ ಅಂತ ಹೇಳಿದ, &lt;br /&gt;&lt;br /&gt;"ದೊಡ್ಡ ಪೋಕಾಕಿ ಮಾತಾಡ್ ಬ್ಯಾಡ್ಲೆ ಮಗನ, ಟೈಮ್ ಸರಿ ಇಲ್ಲ ಅಂದ್ರ ಎಂಥ ಕಂಟ್ರೋಲ್ ನ್ಯಾಗ ಇದ್ರೂ ಸಂಬಂಧ ಇಲ್ಲ...", &lt;br /&gt;&lt;br /&gt;ಸುಬ್ಯನ ಈ ವಾದಾನೂ ನನಗ ಸರಿ ಅನಿಸ್ತು. ಆದರ ಅವರಿಬ್ಬರ ನಡುವ ಘನ ಘೋರ ವಾದ ಅಂತು ಸುರು ಆತು. ಅಂತು ಇಂತು ಇಬ್ಬರ್ನು ಸಮಾಧಾನ ಮಾಡುದ್ರಾಗ ಹನ್ನೆರಡು ಆಗಿತ್ತು. ನಾನು ಮನಿಗೆ ಹೋಗಲಿಕ್ಕೆ ಬೇಕಾಗಿತ್ತು. ನಾನು ಮತ್ತ ಸುಬ್ಯ ಆಟೋ ಮಾಡಿಕೊಂಡು ಮನಿಗೆ ಹೊಂಟಿವಿ.&lt;br /&gt;&lt;br /&gt;&lt;br /&gt;ಮನಿ ಮುಟ್ಟಿದಾಗ ೧.೩೦. ಪಾಪ ಅಪ್ಪ ಬಾಗಲ ತಗದ. ಮಗಾ ಎಷ್ಟೊಂದು ಕೆಲಸ ಮಾಡಿ ಬಂದಾನ ಅನ್ನೋ ಕರುಣಾ ಭಾವ ಅಪ್ಪನ ಮುಖದಾಗ ಎದ್ದು ಕಾಣತಿತ್ತು. ಆದರ ಪಾಪ ಪ್ರಜ್ಞೆ ಒಳಗ ನನ್ನ ಕಣ್ಣು ನೆಲ ನೋಡತಿದ್ವು!&lt;br /&gt;&lt;br /&gt;ಅಂತು ಇಂತೂ ಮಲಕೊಂಡಾಗ ೨. ಯಾವಾಗ ಬೆಳಗಾತೋ ಗೊತ್ತ ಆಗಿಲ್ಲ. ಕುಡಿದಾಗ ಅದೆಂಥ ಮೈ ಮರುವೋ ನಾ ಕಾಣೆ. ಎದ್ದ ಕುಡ್ಲೆ ಮೊಬೈಲ್ ನೋಡಿಲ್ಲ ಅಂದ್ರ ಸಮಾಧಾನ ಇಲ್ಲ. ಒಂಥರಾ ಎದ್ದ ಕೂಡ್ಲೆ ಹೆಂಡ್ತಿ ಮಾರಿ ನೋಡಿದಂಗ! &lt;br /&gt;&lt;br /&gt;'ಅರೆ ಇದೇನಿದು ಇಷ್ಟು ಮಿಸ್ ಕಾಲ್!' ಅದೆಂಥ ದರಿದ್ರ ನಿದ್ದಿ ಬಂದಿತ್ತೋ. ಮೊಬೈಲ್ ರಿಂಗಾಗಿದ್ದು ಗೊತ್ತಾಗಿಲ್ಲ. ಎಲ್ಲ ಕಾಲ್ ಒಂದ ನಂಬರಿಂದ, ಅದು ವೆಂಕಣ್ಣನ ತಮ್ಮ. ಅಂವ ಫೋನ್ ಮಾಡೊದ ಕಡಿಮಿ, ಇವನ್ಯಾಕ ಮಾಡಿದ ಅವರಪ್ಪ ಏನಾದ್ರು ಹೋಗಿಬಿಟ್ರ? ಬರೇ ಕೆಟ್ಟ ವಿಚಾರ ಬರ್ಲಿಖತ್ತಿದ್ವು. ವಾಪಸ್ಸು ಕಾಲ್ ಮಾಡಿದೆ. &lt;br /&gt;&lt;br /&gt;"ಅಣ್ಣ,...... ಅನಾಹುತ ಆಗ್ಯದಪ" ಅಂತ ಒಂದ ಸಮಾನ ಆಳಲಿಕ್ಕೆ ಸುರು ಮಾಡಿದ. ನನಗ ಖಾತ್ರಿ ಆತು ಅಪ್ಪನೋ ಅಮ್ಮನೋ ಹೋಗಿರಬೇಕು ಅಂತ. &lt;br /&gt;&lt;br /&gt;"ಸಮಾಧಾನ ಮಾಡ್ಕೋಪಾ, ಏನಾತು ಹೇಳು " ಅಂದೇ.&lt;br /&gt;&lt;br /&gt;"ಇನ್ನೇನು ಆಗುದು ಉಳದಿಲ್ಲಪ, ವೆಂಕಣ್ಣ ಹೋಗಿ ಬಿಟ್ಟ" ಅಂದ! ನನಗ ಹುಚ್ಚು ಹಿಡಿಯೊದೊಂದ ಬಾಕಿ. ನಿನ್ನೆ ಇನ್ನ ನಂಜೋತಿ ಕುಡಕೋತ ಕುತಂವ ಹೆಂಗ ಸಾಯಲಿಕ್ಕೆ ಸಾಧ್ಯ? ವೆಂಕ್ಯನ ತಮ್ಮಗ ಹುಚ್ಹ ಹಿಡದಿರಬೇಕು, ಸಿಟ್ಟಿಲೆ ಒದರಿದೆ. &lt;br /&gt;&lt;br /&gt;" ಲೇ ಹುಚ್ಹ ಗಿಚ್ಹ ಹಿಡದದೇನು ನಿನಗ!??" &lt;br /&gt;&lt;br /&gt;&lt;strong&gt;&lt;em&gt;&lt;u&gt;(ಕತಿ ಇನ್ನು&amp;nbsp;ಮುಗದಿಲ್ಲ&amp;nbsp;ಮುಂದುವರಸ್ತಿನಿ&amp;nbsp;...&amp;nbsp;ಆದರ ಮುಂದುವರಸ್ಲ್ಯೋ ಬ್ಯಾಡೋ&amp;nbsp;ಅಂತ&amp;nbsp;ನೀವ&amp;nbsp;ಹೇಳಬೇಕು ...)&lt;/u&gt;&lt;/em&gt;&lt;/strong&gt;&lt;br /&gt;&lt;br /&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2372666341371107821-2425524338716351256?l=kurtkoti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kurtkoti.blogspot.com/feeds/2425524338716351256/comments/default' title='Post Comments'/><link rel='replies' type='text/html' href='http://www.blogger.com/comment.g?blogID=2372666341371107821&amp;postID=2425524338716351256&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/2372666341371107821/posts/default/2425524338716351256'/><link rel='self' type='application/atom+xml' href='http://www.blogger.com/feeds/2372666341371107821/posts/default/2425524338716351256'/><link rel='alternate' type='text/html' href='http://kurtkoti.blogspot.com/2011/03/blog-post.html' title='ಹಿಂಗ ಒಂದು ವೀಕೆಂಡು... ( ಭಾಗ ೧)'/><author><name>ಗುರುಪ್ರಸಾದ ಕುರ್ತಕೋಟಿ</name><uri>http://www.blogger.com/profile/10861815905653228183</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_e_tOxrsrEcc/SejNhmMPHWI/AAAAAAAAAkA/7fs9a56NqZg/S220/DSCF3720.JPG'/></author><thr:total>2</thr:total></entry><entry><id>tag:blogger.com,1999:blog-2372666341371107821.post-1015317035238737741</id><published>2010-04-10T17:30:00.000-07:00</published><updated>2010-04-10T17:34:21.457-07:00</updated><title type='text'>ಕನ್ನಡ ಸಾಲಿ, ಪಾಟಿ ಚೀಲಾ ಮತ್ತು ಪೆನಶೆ!</title><content type='html'>&lt;span class="Apple-style-span"   style=" ;font-family:Arial;font-size:small;"&gt;&lt;span class="Apple-style-span"  style="font-size:13px;"&gt;&lt;span class="Apple-style-span"  style="font-family:'Times New Roman';"&gt;&lt;div style="margin-bottom: 0px; margin-left: 0px; margin-right: 0px; margin-top: 0px; text-align: justify;"&gt;&lt;span class="Apple-style-span"  style="font-family:Tunga;"&gt;&lt;span class="Apple-style-span"  style="color:#3366FF;"&gt;&lt;b&gt;&lt;span class="Apple-style-span" style="font-size: large;"&gt;ಆ ದಿನಗಳು, ಎಷ್ಟು ಚೊಲೋ ಇದ್ವು! ನನಗಿನ್ನೂ ನೆನಪಿದೆ, ಇದು ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು...&lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;div style="margin-bottom: 0px; margin-left: 0px; margin-right: 0px; margin-top: 0px; text-align: justify;"&gt;&lt;span class="Apple-style-span"  style="font-family:Tunga;"&gt;&lt;span class="Apple-style-span"  style="color:#3366FF;"&gt;&lt;b&gt;&lt;span class="Apple-style-span" style="font-size: large;"&gt;&lt;br /&gt;&lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;div style="margin-bottom: 0px; margin-left: 0px; margin-right: 0px; margin-top: 0px; text-align: justify;"&gt;&lt;span class="Apple-style-span"  style="font-family:Tunga;"&gt;&lt;span class="Apple-style-span"  style="color:#3366FF;"&gt;&lt;b&gt;&lt;span class="Apple-style-span" style="font-size: large;"&gt;ಅಂದು ನನ್ನ ಮೊದಲನೇ ತರಗತಿಯ ಪರೀಕ್ಷೆ. ನಾನೋ ಆಗ ತಾನೆ ಜ್ವರದಿಂದ ಎದ್ದಿದ್ದೆ. ಅವತ್ತು ಪರೀಕ್ಷೆಗೆ ಅಂತ ಹೆದರುತ್ತಲೇ ಶಾಲೆಗೆ ಹೋದೆ. ನಮ್ಮದು ಮೊದಲೇ ಹಳ್ಳಿ. ಪುರಾತನ ದೇವಾಲಯಗಳ ಬೀಡು! ನಮ್ಮ ಶಾಲೆಗಳು ನಡೆಯುತ್ತಿದ್ದದ್ದು ಅಂಥ ಯಾವುದೊ ಒಂದು ಪಾಳು ಬಿದ್ದ ಗುಡಿಯಲ್ಲಿ. ನಾನು ಒಳಗೆ ಕಾಲು ಇಡಬೇಕು... ಅಷ್ಟರಲ್ಲೇ ನಮ್ಮ ಮಾಸ್ತರು,&lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;div style="margin-bottom: 0px; margin-left: 0px; margin-right: 0px; margin-top: 0px; text-align: justify;"&gt;&lt;span class="Apple-style-span"  style="font-family:Tunga;"&gt;&lt;span class="Apple-style-span"  style="color:#3366FF;"&gt;&lt;b&gt;&lt;span class="Apple-style-span" style="font-size: large;"&gt; &lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;/span&gt;&lt;blockquote class="webkit-indent-blockquote"  style="border-bottom-style: none; border- border-left-style: none; border-right-style: none; border-top-style: none; border-width: initial; margin-bottom: 0px; margin-left: 40px; margin-right: 0px; margin-top: 0px; padding-bottom: 0px; padding-left: 0px; padding-right: 0px; padding-top: 0px;color:initial;"&gt;&lt;span class="Apple-style-span"  style=" line-height: normal;font-family:'Times New Roman';"&gt;&lt;div style="margin-bottom: 0px; margin-left: 0px; margin-right: 0px; margin-top: 0px; text-align: justify;"&gt;&lt;span class="Apple-style-span"  style="font-family:Tunga;"&gt;&lt;span class="Apple-style-span"  style="color:#3366FF;"&gt;&lt;b&gt;&lt;span class="Apple-style-span" style="font-size: large;"&gt;"ನೀನು ಪಾಸಾಗಿದಿ ಹೋಗಪ್ಪ" ಅಂದ್ರು! &lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;div style="margin-bottom: 0px; margin-left: 0px; margin-right: 0px; margin-top: 0px; text-align: justify;"&gt;&lt;span class="Apple-style-span"  style="font-family:Tunga;"&gt;&lt;span class="Apple-style-span"  style="color:#3366FF;"&gt;&lt;b&gt;&lt;span class="Apple-style-span" style="font-size: large;"&gt;&lt;br /&gt;&lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;/span&gt;&lt;/blockquote&gt;&lt;span class="Apple-style-span"  style=" line-height: normal;font-family:'Times New Roman';"&gt;&lt;div style="margin-bottom: 0px; margin-left: 0px; margin-right: 0px; margin-top: 0px; text-align: justify;"&gt;&lt;span class="Apple-style-span"  style="font-family:Tunga;"&gt;&lt;span class="Apple-style-span"  style="color:#3366FF;"&gt;&lt;b&gt;&lt;span class="Apple-style-span" style="font-size: large;"&gt;ನನಗೋ ಖುಷಿ. ಹಾಗೆಯೆ ಓಡಿಕೊಂಡುಮನೆಗೆ ಬಂದಿದ್ದೆ. ಹಾಗಿತ್ತು ನನ್ನ ಜೀವನದ ಮೊದಲನೇ ಪರೀಕ್ಷೆ ಹಾಗು ಅನಿರೀಕ್ಷಿತ ಫಲಿತಾಂಶ! ಅದು ಸರಕಾರೀ ಪ್ರಾಥಮಿಕ ಗಂಡು ಮಕ್ಕಳ ಒಂದನೇ ನಂಬರ್ ಶಾಲೆ. ಅಲ್ಲಿ ಕಲಿಯುವವರೆಲ್ಲ ಬರಿ ಗಂಡು ಮಕ್ಕಳು. ಆಮೇಲೆ ನಾವು ಅದೇ ಊರಲ್ಲಿ, ಮನೆ ಬದಲಾಯಿಸಿ ಬೇರೆ ಕಡೆಗೆ ಹೋದೆವು. ಅಲ್ಲಿ ಎರಡನೇ ನಂಬರ್ ಶಾಲೆಯಲ್ಲಿ ನನ್ನ ಪ್ರವೇಶ. ತಮಾಷೆಯೆಂದರೆ ಅದು ಕೂಡ ಒಂದು ಗುಡಿಯೇ ಆಗಿತ್ತು. ಈಗ ಮಧ್ಯಾನ್ಹದ ಊಟ ಕೊಡುವಂತೆ ಆಗ ಸಂಜೆಗೆ "ಘಾಟೆ" ಅನ್ನುವ ತಿನ್ನುವ ಪದಾರ್ಥ ಕೊಡುತ್ತಿದ್ದರು. ಅದರ ರುಚಿ ನಾನು ಇನ್ನು ಮರೆತಿಲ್ಲ. ವ್ಯವಸ್ಥೆಯ ದೃಷ್ಟಿಯಿಂದ ನೋಡಿದರೆ ಏನೂ ಇಲ್ಲದ ಇಂಥ ಶಾಲೆಗಳಲ್ಲಿನ ಶಿಕ್ಷಕರು ಮತ್ತು ಅವರು ನೀಡುತ್ತಿದ್ದ ಪಾಠಗಳು ಮಾತ್ರ ಅಭಿನಂದನೆಗೆ ಯೋಗ್ಯ. &lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;div style="margin-bottom: 0px; margin-left: 0px; margin-right: 0px; margin-top: 0px; text-align: justify;"&gt;&lt;span class="Apple-style-span"  style="font-family:Tunga;"&gt;&lt;span class="Apple-style-span"  style="color:#3366FF;"&gt;&lt;b&gt;&lt;span class="Apple-style-span" style="font-size: large;"&gt;&lt;br /&gt;&lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;div style="margin-bottom: 0px; margin-left: 0px; margin-right: 0px; margin-top: 0px; text-align: justify;"&gt;&lt;span class="Apple-style-span"  style="font-family:Tunga;"&gt;&lt;span class="Apple-style-span"  style="color:#3366FF;"&gt;&lt;b&gt;&lt;span class="Apple-style-span" style="font-size: large;"&gt;ನಮ್ಮ ಪಾಠಗಳು ನಡೆಯುತ್ತಿದ್ದದ್ದು "ಭರಮಪ್ಪ" ದೇವರ ಗುಡಿಯಲ್ಲಿ. ಭರಮಪ್ಪ ಅಂದ್ರೆ "ಬ್ರಹ್ಮ" ಅಂತ! ಗರ್ಭ ಗುಡಿಯ ಎದುರು ನಾವೆಲ್ಲಾ ಮಕ್ಕಳು ಕುಳಿತಿರುತ್ತಿದ್ದೆವು. ನಮ್ಮ ಮುಂದೆ ಎರಡು ಕರಿಯ ಹಲಗೆಗಳು. ಈ ಶಾಲೆಯಲ್ಲಿ ಹೆಣ್ಣುಮಕ್ಕಳು ಕೂಡ ಇದ್ದರು. ನಮಗೆ ಇಬ್ಬರು ಮಾಸ್ತರರು! ಒಬ್ಬರು ಗಂಡು ಮಕ್ಕಳಿಗೆ ಇನ್ನೊಬ್ಬರು ಹೆಣ್ಣು ಮಕ್ಕಳಿಗೆ ಅಂತ ನೆನಪು . ಒಬ್ಬರ ಹೆಸರು ಶಿವನಗೌಡ ಪಾಟಿಲ್. ಅವರು ಪಾಠದ ಜೊತೆಗೆ ಪುಂಡ ಮಕ್ಕಳಿಗೆ ಶಿಕ್ಷೆ ಕೊಡುವುದರಲ್ಲಿ ಎತ್ತಿದ ಕೈ! ನನಗೆ ಚೆನ್ನಾಗಿ ನೆನಪಿದೆ. ಸರಿಯಾಗಿ ಗರ್ಭ ಗುಡಿಯ ಎದುರಿಗೆ ಒಂದು ಹಗ್ಗ ಇಳಿಬಿಟ್ಟಿದ್ದರು. ಯಾರಾದರು ಗಲಾಟೆ ಮಾಡಿದರೋ, ಸರಿ,&lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;div style="margin-bottom: 0px; margin-left: 0px; margin-right: 0px; margin-top: 0px; text-align: justify;"&gt;&lt;span class="Apple-style-span"  style="font-family:Tunga;"&gt;&lt;span class="Apple-style-span"  style="color:#3366FF;"&gt;&lt;b&gt;&lt;span class="Apple-style-span" style="font-size: large;"&gt;&lt;br /&gt;&lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;div style="margin-bottom: 0px; margin-left: 0px; margin-right: 0px; margin-top: 0px; text-align: justify;"&gt;&lt;span class="Apple-style-span"  style="font-family:Tunga;"&gt;&lt;span class="Apple-style-span"  style="color:#3366FF;"&gt;&lt;b&gt;&lt;span class="Apple-style-span" style="font-size: large;"&gt; "ಬಾ ಮಗನ ಭಾರಮಪ್ಪನ್ನ ತೋರಸ್ತೀನಿ" ಅಂತ, &lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;div style="margin-bottom: 0px; margin-left: 0px; margin-right: 0px; margin-top: 0px; text-align: justify;"&gt;&lt;span class="Apple-style-span"  style="font-family:Tunga;"&gt;&lt;span class="Apple-style-span"  style="color:#3366FF;"&gt;&lt;b&gt;&lt;span class="Apple-style-span" style="font-size: large;"&gt;&lt;br /&gt;&lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;/span&gt;&lt;span class="Apple-style-span"  style=" line-height: normal;font-family:'Times New Roman';"&gt;&lt;div style="margin-bottom: 0px; margin-left: 0px; margin-right: 0px; margin-top: 0px; text-align: justify;"&gt;&lt;span class="Apple-style-span"  style="font-family:Tunga;"&gt;&lt;span class="Apple-style-span"  style="color:#3366FF;"&gt;&lt;b&gt;&lt;span class="Apple-style-span" style="font-size: large;"&gt;ಆ ಹಗ್ಗಕ್ಕೆ ಹುಡುಗನ ಎರಡೂ ಕೈ ಕುಣಿಕೆ ಹಾಕಿ, ಇಳಿಬಿಟ್ಟು ತಮ್ಮ ಕೈಯಿಂದ ಅವನ ಕೈ ವತ್ತುತ್ತಿದ್ದರು. ಹುಡುಗರು ನೋವಿಗೆ ಕಿರಿಚಾಡುತ್ತಿದ್ದರು. ಇನ್ನೊಮ್ಮೆ ತುಂಟತನ ಮಾಡುವ ಮುನ್ನ ಯೋಚಿಸುತ್ತಿದ್ದರು. ಆದರೆ ಇನ್ನೂ ಕೆಲ ಹುಡುಗರಿದ್ದರು. ಅವರು ಭರಮಪ್ಪ ಬಿಟ್ಟು ಅವರಪ್ಪ ಬಂದರೂ ಹೆದರುತ್ತಿರಲಿಲ್ಲ! ಅಂತ ಹುಡುಗರಿಗೆ ದಿನವೂ ಶಿಕ್ಷೆ. ನಮಗೋ ಅದೊಂದು ಮನರಂಜನೆ ಆಗ. ಈ ತರಹದ ಶಿಕ್ಷೆ ಯಿಂದಲೋ ಏನೋ, ಗುರುಗಳ ಬಗ್ಗೆ ಭಯ ಮಿಶ್ರಿತ ಗೌರವ ಭಾವನೆ ಮೂಡುತ್ತಿತ್ತು.&lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;div style="margin-bottom: 0px; margin-left: 0px; margin-right: 0px; margin-top: 0px; text-align: justify;"&gt;&lt;span class="Apple-style-span"  style="font-family:Tunga;"&gt;&lt;span class="Apple-style-span"  style="color:#3366FF;"&gt;&lt;b&gt;&lt;span class="Apple-style-span" style="font-size: large;"&gt;&lt;br /&gt;&lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;div style="margin-bottom: 0px; margin-left: 0px; margin-right: 0px; margin-top: 0px; text-align: justify;"&gt;&lt;span class="Apple-style-span"  style="font-family:Tunga;"&gt;&lt;span class="Apple-style-span"  style="color:#3366FF;"&gt;&lt;b&gt;&lt;span class="Apple-style-span" style="font-size: large;"&gt;ಕನ್ನಡ ಶಾಲೆಯಲ್ಲಿ ನನಗೆ ತುಂಬಾ ನೆನಪು ಬರೋದು "ಬಾಯಿ ಲೆಕ್ಕ"; ದಿನವು ಸಂಜೆ ಅ, ಆ, ಇ , ಈ .. , ಮಗ್ಗಿ ಆದ ಮೇಲೆ ಬಾಯಿ ಲೆಕ್ಕದ ಸರದಿ. ಗುರುಗಳು ಯಾವುದೋ ಒಂದು ಲೆಕ್ಕ ಹೇಳೋರು. ಅದನ್ನು ಮನಸ್ಸಿನಲ್ಲೇ ಕೂಡಿಸಿ, ಗುಣಿಸಿ , ಕಳೆದು ಬಂದ ಉತ್ತರವನ್ನು ನಾವು ಪಾಟಿಯಲ್ಲಿ ಬರೆದು, ಮುಚ್ಚಿ ಇಡಬೇಕು. ಮುಚ್ಚಿಡುವುದು ಯಾಕೆಂದರೆ ಬೇರೆಯವರು ನೋಡಬಾರದೆಂದು! ಆಮೇಲೆ ಗುರುಗಳು ಪ್ರತಿಯೊಬ್ಬರ ಉತ್ತರವನ್ನು ನೋಡಿ, ಶಭಾಶ್ ಅಂತಾ ಮೆಚ್ಚಿಗೆ, ಇಲ್ಲ ಉತ್ತರ ತಪ್ಪಾಗಿದ್ದರೆ ಬೆನ್ನಿಗೊಂದು "ಧಬ್" ಅಂತ ಗುದ್ದೋ ಕೊಡುತ್ತಿದ್ದರು. ಆ ಹೊಡೆತದ ಅನುಭವವೇ ಅದ್ಭುತ! ಕರುಳು ಬಾಯಿಗೆ ಬರೋದು ಅಂದ್ರೆ ಇದೆ ಅಂತ ನಮಗೆ ಅರ್ಥವಾಗಿತ್ತು ಆಗ. ನಮ್ಮ ಮಸ್ತರೊಬ್ಬರು ಹೇಳುತ್ತಿದ್ದರು, &lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;/span&gt;&lt;blockquote class="webkit-indent-blockquote"  style="border-bottom-style: none; border- border-left-style: none; border-right-style: none; border-top-style: none; border-width: initial; margin-bottom: 0px; margin-left: 40px; margin-right: 0px; margin-top: 0px; padding-bottom: 0px; padding-left: 0px; padding-right: 0px; padding-top: 0px;color:initial;"&gt;&lt;span class="Apple-style-span"  style=" line-height: normal;font-family:'Times New Roman';"&gt;&lt;div style="margin-bottom: 0px; margin-left: 0px; margin-right: 0px; margin-top: 0px; text-align: justify;"&gt;&lt;span class="Apple-style-span"  style="font-family:Tunga;"&gt;&lt;span class="Apple-style-span"  style="color:#3366FF;"&gt;&lt;b&gt;&lt;span class="Apple-style-span" style="font-size: large;"&gt;&lt;br /&gt;&lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;div style="margin-bottom: 0px; margin-left: 0px; margin-right: 0px; margin-top: 0px; text-align: justify;"&gt;&lt;span class="Apple-style-span"  style="font-family:Tunga;"&gt;&lt;span class="Apple-style-span"  style="color:#3366FF;"&gt;&lt;b&gt;&lt;span class="Apple-style-span" style="font-size: large;"&gt;"ನಾನು ಒಂದು ಗುದ್ದಿದೆ ಅಂದ್ರ, ಛಡಿ ಛಂ ಛಂ, ವಿದ್ಯಾ ಗೊಂ ಗೊಂ" ಅಂತ. ಮೂಲ ಗಾದೆಯಲ್ಲಿ "... ಘಂ ಘಂ" ಅಂತ ಇದೆ. ಆದರೆ, ಇವರು ಬಿಡುವ ಹೊಡೆತಕ್ಕೆ "...ಗೊಂ ಗೊಂ" ಅಂತ ಹಿಂದೆ ವಾಸನೆ ಬರುತ್ತೆ ಅಂತ, ಅದರರ್ಥ.&lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;/span&gt;&lt;/blockquote&gt;&lt;span class="Apple-style-span"  style=" line-height: normal;font-family:'Times New Roman';"&gt;&lt;div style="margin-bottom: 0px; margin-left: 0px; margin-right: 0px; margin-top: 0px; text-align: justify;"&gt;&lt;span class="Apple-style-span"  style="font-family:Tunga;"&gt;&lt;span class="Apple-style-span"  style="color:#3366FF;"&gt;&lt;b&gt;&lt;span class="Apple-style-span" style="font-size: large;"&gt;&lt;br /&gt;&lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;div style="margin-bottom: 0px; margin-left: 0px; margin-right: 0px; margin-top: 0px; text-align: justify;"&gt;&lt;span class="Apple-style-span"  style="font-family:Tunga;"&gt;&lt;span class="Apple-style-span"  style="color:#3366FF;"&gt;&lt;b&gt;&lt;span class="Apple-style-span" style="font-size: large;"&gt;ಇದೆಲ್ಲ ಯಾಕೆ ನೆನಪು ಬಂತು ಅಂದ್ರೆ, ಮೊನ್ನೆ ನನಗೆ ಕಲಿಸಿದ ಗುರುಗಳೊಬ್ಬರು ತೀರಿಹೋದ ಸುದ್ದಿ ಕೇಳಿದೆ. ಬೇಜಾರಾಯ್ತು, ಮನಸ್ಸು ಒಂದು ಸಲ ಫ್ಲಾಶ್ ಬ್ಯಾಕ್ ಗೆ ಹೋಗಿ ಬಂತು.   &lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;div style="text-align: justify;"&gt;&lt;span class="Apple-style-span"  style="font-family:Tunga;"&gt;&lt;br /&gt;&lt;/span&gt;&lt;/div&gt;&lt;/span&gt;&lt;/span&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2372666341371107821-1015317035238737741?l=kurtkoti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kurtkoti.blogspot.com/feeds/1015317035238737741/comments/default' title='Post Comments'/><link rel='replies' type='text/html' href='http://www.blogger.com/comment.g?blogID=2372666341371107821&amp;postID=1015317035238737741&amp;isPopup=true' title='4 Comments'/><link rel='edit' type='application/atom+xml' href='http://www.blogger.com/feeds/2372666341371107821/posts/default/1015317035238737741'/><link rel='self' type='application/atom+xml' href='http://www.blogger.com/feeds/2372666341371107821/posts/default/1015317035238737741'/><link rel='alternate' type='text/html' href='http://kurtkoti.blogspot.com/2010/04/blog-post.html' title='ಕನ್ನಡ ಸಾಲಿ, ಪಾಟಿ ಚೀಲಾ ಮತ್ತು ಪೆನಶೆ!'/><author><name>ಗುರುಪ್ರಸಾದ ಕುರ್ತಕೋಟಿ</name><uri>http://www.blogger.com/profile/10861815905653228183</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_e_tOxrsrEcc/SejNhmMPHWI/AAAAAAAAAkA/7fs9a56NqZg/S220/DSCF3720.JPG'/></author><thr:total>4</thr:total></entry><entry><id>tag:blogger.com,1999:blog-2372666341371107821.post-9192654280263699672</id><published>2010-02-18T21:50:00.001-08:00</published><updated>2010-02-21T11:42:38.918-08:00</updated><title type='text'>ಹೆಸರಿಡೋರು...!</title><content type='html'>&lt;p class="MsoNormal" style="text-align: justify;"&gt;&lt;span class="Apple-style-span"  style="font-family:'BRH Vijay';"&gt;&lt;span class="Apple-style-span"   style="  line-height: 29px; font-family:Arial, Helvetica, sans-serif;font-size:medium;"&gt;&lt;span class="Apple-style-span"   style=" line-height: 16px; color: rgb(51, 51, 51);  font-family:Verdana, Arial, sans-serif;font-size:13px;"&gt;&lt;/span&gt;&lt;/span&gt;&lt;/span&gt;&lt;/p&gt;&lt;span class="Apple-style-span"  style="font-family:'BRH Vijay';"&gt;&lt;p class="MsoNormal" style="text-align: justify; "&gt;&lt;/p&gt;&lt;p class="MsoNormal" style="text-align: justify; "&gt;ಹೆಸರಿಡೋದೂ ಒಂದು ಕಲೆನಾ? ಹೌದು ಅನ್ಸುತ್ತೆ. ನಾನು ಹೆಳ್ತಿರೋದು ಚಿಕ್ಕ ಮಕ್ಕಳಿಗೆ ಹೆಸರಿಡೋದರ ಬಗ್ಗೆ ಅಲ್ಲ, ದೊಡ್ಡವರಿಗೆ ಇಡೋದರ ಬಗ್ಗೆ! ಕೆಲವರು ಇರ್ತಾರೆ, ಎಲ್ಲರಿಗೂ ಹೆಸರಿಡೋದೇ ಅವರ ಕಾಯಕ. ಬೇರೆಯವರ ಹಾವ ಭಾವ, ಗಾತ್ರ, ಧ್ವನಿ ಹೀಗೆ ಹಲವಾರು ಲಕ್ಷಣಗಳನ್ನು ನಿರಂತರವಾಗಿ ಅಭ್ಯಸಿಸಿ ಒಂದು ಹೆಸರೂ ಅಂತ ಇಟ್ರು ಅಂದ್ರೆ ಮುಗಿತು! ಆ ಮನುಷ್ಯನ ಗತಿ ಅಧೋಗತಿ.&lt;/p&gt;&lt;p class="MsoNormal" style="text-align: justify; "&gt;ನಾವು ಹಾಸ್ಟೇಲಲ್ಲಿದ್ದಾಗ ನಮ್ಮ ಮಿತ್ರನೊಬ್ಬ ಹಾಗೆ ಹೆಸರಿಡೋದರಲ್ಲಿ ನಿಷ್ಣಾತನಾಗಿದ್ದ. ನಮ್ಮ ಸಹಪಾಠಿಯಾಗಿದ್ದ ನಾಗರಾಜ ಆಗಾಗ ನನ್ನ ರೂಮ್ ಗೆ ಭೇಟಿ ನೀಡುತ್ತಿದ್ದ. ಅವನದು ಸ್ವಲ್ಪ ನರಿಬುದ್ಧಿ. ಸರಿ ನಮ್ಮ ಹೆಸರಿಡೊ ಮಿತ್ರ ಅವನಿಗೆ ಒಂದ್ಯಾವುದೋ ಶುಭ ಮುಹುರ್ತದಲ್ಲಿ ನರಿ ಅಂತ ನಾಮಕರಣ ಮಾಡಿಯೆ ಬಿಟ್ಟ ನೋಡಿ! ಆಮೆಲೆ ಇದ್ದು ಬಿದ್ದವರೆಲ್ಲ ಅವನಿಗೆ ನರಿ ಅನ್ನೋದಕ್ಕೆ ಶುರು ಮಾಡಿದ್ರು. ಎಷ್ಟೋಸರ್ತಿ ಹಿಂಗಾಗ್ತಿತ್ತು ಅಂದ್ರೆ, ಗುಂಪಿನಲ್ಲಿದ್ದಾಗ ಯಾವನೋ ಒಬ್ಬ್ನು ನರಿ ಅನ್ನೋನು. ಇನ್ನೊಬ್ನು ಲೇ ನಾಗ್ಯಾ ಇಂವಾ ನಿನಗ ನರಿ ಅಂದ ನೋಡ್ಲೆ ಅನ್ನೊನು. ಮತ್ತೊಬ್ಬ ಲೇ ಮಗನ ನರಿ ಅಂದಾ, ಅಂತ ಹೇಳಿ ನೀನು ಇನ್ ಡೈರೆಕ್ಟ್ ಆಗಿ ನರಿ ಅಂತಿಯೇನಲೆ ಅನ್ನುತ್ತಿದ್ದಾಗಲೇ ಮುಗುದೊಬ್ಬ ನೀಯರೆ ಏನ ಕಡಿಮಿ ಇದ್ದಿ, ಅದನ್ನ ಹೇಳಿದಂಗ ಮಾಡಿ ಎರಡು ಸಲಾ ನರಿ ಅಂದ್ಯಲ್ಲ! ಅಂತ ತನ್ನ ತೀಟೆ ತೀರಿಸಿಕೊಳ್ಳೋನು. ಇದು ನಮಗೆಲ್ಲ ಮಜವಾಗಿರ್ತಿತ್ತು. ಆದರೆ ಪಾಪ ನರಿಗೆ ... ಕ್ಷಮಿಸಿ ನಾಗರಾಜನಿಗೆ ಮಾತ್ರ ಪ್ರಾಣ ಸಂಕಟ. ಅವ್ನು ಮಾತ್ರ ಲೇ ಮಕ್ಳ ನಿಮ್ಮನ್ನ ಕೊಂದು ಹಾಕಿ ಬಿಡ್ತೀನಿ ಅಂತ ಮುಖ ಕೆಂಪಗೆ ಮಾಡ್ಕೊಂಡು ಸಿಟ್ಟು ಮಾಡ್ಕೊಳ್ಳೋನು. ಇವತ್ತಿಗೂ ಯಾರಾದರೂ ಹಳೆಯ ಮಿತ್ರರು ಸೇರಿದರೆ ನಾಗರಾಜ ಅಂತ ಯಾರೂ ದೇವರಾಣೆಗೂ ನೆನೆಸೋದಿಲ್ಲ, ನರಿ ಸಿಕ್ಕಿದ್ನಾ? ಅಂತಾನೇ ಕೇಳೋದು. ಪಾಪ ನರಿ!!&lt;/p&gt;&lt;p class="MsoNormal" style="text-align: justify; "&gt;ಹೆಸರಿಡೋರು ಇಷ್ಟು ಚೆನ್ನಾಗಿ ವಿಶ್ಲೇಷಣೆ ಮಾಡಿರ್ತಾರೆ ಅಂದ್ರೆ, ಅವರಿಟ್ಟ ಹೆಸರು ಅಯಾ ವ್ಯಕ್ತಿಗೆ ಸರಿಯಾಗಿ ಒಪ್ಪಿರುತ್ತೆ. ಕೆಲವರನ್ನ ನೋಡಿದ ಕೂಡಲೆ ಒಂದು ಪ್ರಾಣಿನೋ, ಕಾಯಿ ಪಲ್ಲೆಯೋ ಅಥವಾ ಇನ್ನೂ ಏನೋ ನೋಡಿದಂಗೆ ಅನಿಸುತ್ತಿರುತ್ತದೆ. ನಮ್ಮ ಬಾಲ್ಯದ ಗೆಳೆಯನೊಬ್ಬನಿಗೆ ಗಜ್ಜರಿ ಅಂತಿದ್ರು. ಅವನು ಕೆಂಪಗೆ ಒಂಥರಾ ಗಜ್ಜರಿ ಥರಾನೇ ಇದ್ದ. ಓಂದಿಬ್ಬರು ಇಜ್ಜೋಡಿ (ಇಬ್ಬರೂ ಒಬ್ಬರಿಗೊಬ್ಬರು ಅನುರೂಪವಾಗಿಲ್ಲದಿರುವುದು) ಪ್ರೇಮಿಗಳು ಇದ್ರೆ, ಅವರಿಗೆ "ಒಂದು ಹಸಿದಿದ್ದು ಇನ್ನೊಂದು ಹಳಿಸಿದ್ದು" ಅಂತೆ! ಇನ್ನು ಕೆಲವರು ಇಂಗ್ಲಿಷ್ ನಲ್ಲಿ ಹೆಸರು ಇಡ್ತಾರೆ. ಒಂದು ವೇಳೆ ಹುಡುಗನಿಗೊ, ಹುಡುಗಿಗೊ ಮದುವೆ ವಯಸ್ಸು ಮೀರಿ ಇನ್ನು ಮದುವೆ ಆಗಿಲ್ಲ ಅಂತ ಇಟ್ಕೊಳ್ಳಿ "ಡೇಟ್ ಬಾರ್ ಅರ್ಜೆಂಟ್ ರಿಕ್ವೈರ್ಡ್" ಅಂತೆ!&lt;/p&gt;&lt;p class="MsoNormal" style="text-align: justify; "&gt;&lt;/p&gt;&lt;p class="MsoNormal" style="text-align: justify; "&gt;ಇದು ಬಹಳಷ್ಟು ಸಲ ತಮಾಷೆಯಾಗಿ ಕಂಡ್ರೂ, ಇದರಿಂದ ಯಾರೋ ಒಬ್ಬರಿಗೆ ಹರ್ಟ್ ಆಗಿರುತ್ತೆ. ಹೆಸರಿಡೊರು ಮಾಮುಲಿಯಾಗಿ ವ್ಯಕ್ತಿಯ ಬೆನ್ನ ಹಿಂದೆಯೇ ಆಡಿಕೊಳ್ಳುತ್ತಾರೆ. ಆ ವಿಷಯ ಹೆಸರಿಟ್ಟುಕೊಂಡವನಿಗೆ ಗೊತ್ತಾದಾಗ ಅವನಿಗೆ ಹಿಂಸೆ ಆಗುವುದು ಸಹಜ. ನಮ್ಮ ಗೆಳೆಯ ಸ್ವಲ್ಪ ಜಾಸ್ತಿಯೆ ಕಪ್ಪಗಿದ್ದ (ಅದರಲ್ಲಿ ಅವನದೇನು ತಪ್ಪಿರಲಿಲ್ಲ, ಪಾಪ!). ಅವನಿಗೆ ಕಪ್ಪು ಮೋಡ ಅಂತ ಒಬ್ಬ ಮಹಾಶಯ ಹೆಸರಿಟ್ಟಿದ್ದ. ಅದು ಅವನಿಗೆ ಯಾರೋ ಹೇಳಿ ಅವನು ತುಂಬಾ ಬೇಜಾರೂ ಮಾಡ್ಕೊಂಡಿದ್ದ. ಹಾಗಂತ ಎಲ್ಲ್ರೂ ಆ ಥರ ಇರೋದಿಲ್ಲ. ಕೆಲವರು ಅದನ್ನು ತಮಾಷೆಯಾಗಿಯೆ ಸ್ವೀಕರಿಸುತ್ತಾರೆ. ಅದೇನೆ ಇರಲಿ, ಯಾವುದು ಅತಿಯಾಗಬಾರದು ಅಲ್ವೆ?     &lt;/p&gt;&lt;p class="MsoNormal" style="text-align: justify; "&gt;&lt;br /&gt;&lt;/p&gt;&lt;p&gt;&lt;/p&gt;&lt;p&gt;&lt;/p&gt;&lt;/span&gt;&lt;p&gt;&lt;/p&gt;&lt;div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2372666341371107821-9192654280263699672?l=kurtkoti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kurtkoti.blogspot.com/feeds/9192654280263699672/comments/default' title='Post Comments'/><link rel='replies' type='text/html' href='http://www.blogger.com/comment.g?blogID=2372666341371107821&amp;postID=9192654280263699672&amp;isPopup=true' title='3 Comments'/><link rel='edit' type='application/atom+xml' href='http://www.blogger.com/feeds/2372666341371107821/posts/default/9192654280263699672'/><link rel='self' type='application/atom+xml' href='http://www.blogger.com/feeds/2372666341371107821/posts/default/9192654280263699672'/><link rel='alternate' type='text/html' href='http://kurtkoti.blogspot.com/2010/02/blog-post.html' title='ಹೆಸರಿಡೋರು...!'/><author><name>ಗುರುಪ್ರಸಾದ ಕುರ್ತಕೋಟಿ</name><uri>http://www.blogger.com/profile/10861815905653228183</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_e_tOxrsrEcc/SejNhmMPHWI/AAAAAAAAAkA/7fs9a56NqZg/S220/DSCF3720.JPG'/></author><thr:total>3</thr:total></entry><entry><id>tag:blogger.com,1999:blog-2372666341371107821.post-3506777543179588755</id><published>2009-11-17T22:41:00.000-08:00</published><updated>2009-11-17T22:49:48.108-08:00</updated><title type='text'>ಇ-ಮೋಸ!</title><content type='html'>&lt;div align="justify"&gt;ಮೊದಲೆಲ್ಲ ಪತ್ರ ವ್ಯವಹಾರ ಅಂದ್ರೆ ಒಂದಿಷ್ಟು ದಿನಗಳ ಕಾಲಹರಣವೇ ಆಗಿತ್ತು. ಪತ್ರ ಬರೆದು, ಕಳಿಸಿ ಅದು ಇನ್ನೊಬ್ಬರನ್ನು ತಲುಪಿ (ಅದೃಷ್ಟ ಚೆನ್ನಾಗಿದ್ದಾರೆ!) ಅವರಿಂದ ಉತ್ತರ ಬಂದು ... ಹೀಗೆ ಅದೊಂದು ಎಷ್ಟೋ ದಿನಗಳ ನಿರಂತರ ಪ್ರಕ್ರಿಯೆ! ಈಗೆಲ್ಲ ಪತ್ರಕ್ಕಿಂತ ಇ-ಪತ್ರ (ಅಥವಾ ಇಮೇಲ್) ಗಳದೇ ದರ್ಬಾರು. ಪತ್ರ ಕಳೆಸಿದ ಕ್ಷಣಾರ್ಧದಲ್ಲೇ ಬೇರೆಯವರಿಗೆ ತಲುಪಿ ಮತ್ತೆ ನಿಮಿಷಾರ್ಧದಲ್ಲಿ ಉತ್ತರ ಪಡೆಯುವ ಬಗೆ ಈಗ ಹೊಸದೇನಲ್ಲ. ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಹೆಸರಿಲಿಲ್ಲದಿದ್ರು ಪರವಾಗಿಲ್ಲ ಇಮೇಲ್ ಅಡ್ರೆಸ್ ಇರಬೇಕು ಅಂತಾಗಿದೆ! ಆದರೆ, ಇಮೇಲ್ ನ್ನು ಎಷ್ಟು ಸಮರ್ಪಕವಾಗಿ/ಉಪಯೋಗಕ್ಕಾಗಿ ಬಳಸುವರಿದ್ದಾರೋ ಅಷ್ಟೇ ಕೆಟ್ಟ ಕೆಲಸಕ್ಕಾಗಿ/ಮೋಸಕ್ಕಾಗಿ ಬಳಸುವವರು ಇನ್ನೂ ಜಾಸ್ತಿ ಇದ್ದಾರೆ ಎನ್ನುವದರಲ್ಲಿ ಎರಡು ಮಾತಿಲ್ಲ! ಆ ತರಹದ ದರಿದ್ರ ಇಮೇಲ್ ಗಳಿಗೆ ಜಂಕ್ (ಅಪ್ರಯೋಜಕ) ಇಮೇಲ್ ಅಂತಾನೆ ಹೆಸರು. ಸಾಮಾನ್ಯವಾಗಿ ಆ ತರಹದ ಇಮೇಲ್ ಗಳನ್ನು ತಕ್ಕ ಮಟ್ಟಿಗೆ ಸೋಸಿ ತೆಗೆಯುವ ಕಾರ್ಯವನ್ನು ಎಲ್ಲ ಇಮೇಲ್ ಪ್ರೊಗ್ರಾಮ್ ಗಳು ಮಾಡುತ್ತವೆ. ಆದರೆ ಇನ್ನು ಕೆಲವು ಇಮೇಲ್ ಗಳು ಇರುತ್ತವೆ ಅವು ಈ ತರಹದ ಸೋಸುವಿಕೆಗಷ್ಟೇ ಅಲ್ಲ ಅದನ್ನೋದುವ ಹುಲು ಮಾನವರಿಗೂ ಮೋಸ ಮಾಡುತ್ತವೆ! ಅಂತ ಕೆಲವು "ದರಿದ್ರ ಇಮೇಲ್ ಗಳ" ಒದಿಷ್ಟು ಸ್ಯಾಂಪಲ್ ಗಳು ಇಲ್ಲಿವೆ.&lt;br /&gt;&lt;br /&gt;ಮೋಸ ೧:) ಆಫೀಸ್ ನಲ್ಲಿ ಸೋಮವಾರದ ಒಂದು ಮದ್ಯಾನ್ಹ ಆಕಳಿಸಿಕೊಂಡು, ಇವತ್ತು ಕೆಲ್ಸಾ ಮಾಡ್ಲೆಬೇಕಾ ಅಂತ ಕುತಿರ್ತೀವಿ. ಒಂದು ಇಮೇಲ್ ಟಕ್ ಅಂತ ಬಂದು ಬಡಿದೆಬ್ಬಿಸುತ್ತದೆ.  ಅದು ಕೀನ್ಯಾ ದಿಂದ ಯಾರೋ ಮಹಾಶಯ ಬರೆದಿರುತ್ತಾನೆ. ನಮಗೆ  ೧೦೦ ದಶಲಕ್ಷ್ಯ ಡಾಲರ್ ಹಣ ಬಹುಮಾನ ಬಂದಿದೆ ಅಂತ ಹೇಳಿ ಅದನ್ನು ನಮ್ಮ ಬ್ಯಾಂಕ್ ಅಕೌಂಟ್ ಗೆ ಹಾಕುವುದಾಗಿಯು, ನಮ್ಮ ಅಕೌಂಟ್ ನ  ವಿವರ ಕೇಳುತ್ತಾನೆ. ಅರೆ, ಇದೊಳ್ಳೆ ಅದೃಷ್ಟ ಹುಡುಕಿಕೊಂಡು ಬಂತಲ್ಲ ಅಂತ ನಾವು ಅವನಿಗೆ ಪ್ರತಿಕ್ರಿಯಿಸಲು ತೊಡಗುತ್ತೇವೆ. ಅಲ್ಲಿಗೆ, ನಾವು ಅವನು ಹಾಕಿದ ಬಲೆಗೆ ಬಿದ್ದಂತೆಯೇ! ಅವನು ನಂತರ ಆ ಹಣ ಬೇಕಾದರೆ ಇಂತಿಷ್ಟು ದುಡ್ಡನ್ನು ನಾವೇ ಅವನಿಗೆ ಮೊದಲೇ ಪಾವತಿಸಬೇಕು ಅಂತೆಲ್ಲ ಬೊಗಳೆ ಬಿಟ್ಟು ನಮ್ಮಿಂದ ಸುಮಾರು ಕೊಳ್ಳೆ ಹೊಡೆದುಬಿಡುತ್ತಾನೆ. ಈ ತರಹ ಮೋಸ ಹೋಗುವರು ತುಂಬಾ ಜನ.&lt;br /&gt;&lt;br /&gt;ಮೋಸ ೨:) ಒಂದು ಚಿಕ್ಕ ಹುಡುಗಿಯ ಫೋಟೋ ಇರುವ ಇಮೇಲ್ ಅನ್ನು ಗೆಳೆಯನೊಬ್ಬ ಕಲಿಸಿರುತ್ತಾನೆ (ಅವನಿಗೆ ಇನ್ನ್ಯಾರೋ ಕಳಿಸಿರುತ್ತಾರೆ!). ಆ ಚಿಕ್ಕ ಹುಡುಗಿಗೆ ಯಾವುದೋ ಮಾರಕ ಕಾಯಿಲೆ ಇರುವುದೆಂದು, ಅವಳು ಹಾಸ್ಪಿಟಲ್ ನಲ್ಲಿ ಜೀವಕ್ಕಾಗಿ ಹೋರಾಡು ತ್ತಿರುವು ದಾಗಿಯು, ಅವಳಿಗೆ ಸಹಾಯ ಮಾಡಬೇಕೆಂದು ಯಾವನೋ ಒಬ್ಬ ದುಡ್ಡಿನ ಸಹಾಯ  ಯಾಚಿಸಿರುತ್ತಾನೆ. ನಾವು ಮರುಗಿ ಸಹಾಯ ಮಾಡುತ್ತೇವೆ. ನಮ್ಮಂತೆ ಎಷ್ಟೋ ಜನರು ಮಾಡಿರುತ್ತಾರೆ. ಆದರೆ ವಾಸ್ತು ಸ್ಥಿತಿ ಬೇರೆಯಾಗಿರುತ್ತದೆ! ಆ ಹುಡುಗಿ ನಿಜಕ್ಕೂ ಇರುವುದೇ ಇಲ್ಲ. ಅವಳು ಸರಿ ಸುಮಾರು ೮೦೦೦ ಸಲ ಆಸ್ಪತ್ರೆಯಲ್ಲಿ ಸಾವಿನ ಜೊತೆ ಹೋರಾಟ ನಡೆಸಿರುತ್ತಾಳೆ! ೧೯೯೦ ನೆ ಇಸವಿಯಿಂದ ಇಲ್ಲಿಯವರೆಗೆ, ಅವಳಿಗಿನ್ನೂ ೭ ವರ್ಷ ವಯಸ್ಸು ಮಾತ್ರವೇ ಆಗಿರುತ್ತದೇ. ಅಂದರೆ ಅದೇ ಇಮೇಲ್ ಅಷ್ಟು ವರ್ಷಗಳಿಂದ ಇಲ್ಲಿಯೇ ನಮ್ಮ ನಡುವೆ ಗಿರಕಿ ಹೊಡೆಯುತ್ತಿರುತ್ತದೆ.&lt;br /&gt;&lt;br /&gt;ಮೋಸ ೩:) ಇನ್ನು ಒಂದು ತರಹ ಇಮೇಲ್ ಬರುತ್ತೆ, ಅದನ್ನ ೪೦ ಜನರಿಗೆ ಕಲಿಸಿದರೆ ಯಾವುದೋ ದೊಡ್ಡ ಬ್ರಾಂಡ್ ನ ಮೊಬೈಲ್ ಉಚಿತವಾಗಿ ಸಿಗುತ್ತದೆ ಅಂತ ಅದು ಸಾರಿ ಹೇಳುತ್ತದೆ! ಉಚಿತವಾಗಿ ಸಿಗುವುದಾದರೆ ಯಾಕಾಗಬಾರದು ಅಂತ ಎಲ್ಲರಿಗು ಇಮೇಲ್ ಕಳಿಸಿ ನಿಶ್ಚಿಂತ ರಾಗುವರು ಎಷ್ಟೋ ಜನ! ಮಜಾ ಅಂದ್ರೆ, ಆ ಮಾಡೆಲ್ ನ ಮೊಬೈಲ್ ಎಷ್ಟೋ ವರ್ಷಗಳ ಮುಂಚೆಯೇ ನಿಂತು ಹೋಗಿರುತ್ತದೆ!&lt;br /&gt;&lt;br /&gt;ಮೋಸ ೪:) ಇನ್ನು ಕೆಲವು ಇಮೇಲ್ ಗಳು ದೇವರುಗಳ ಚಿತ್ರಗಳ ಜೊತೆಗೆ ಬರುತ್ತವೆ. ಅವನ್ನು ಎಷ್ಟೋ ಜನರಿಗೆ ತಲುಪಿಸಿದರೆ ಒಳ್ಳೆದಾಗುತ್ತೆ ಅಂತ ಹೇಳುತ್ತವೆ! ಅದನ್ನು ನಿಷ್ಠೆಯಿಂದ ನೂರಾರು ಜನರಿಗೆ ತಲುಪಿಸಿದ ಭೂಪ ಮಾತ್ರ ಅದೇ ಕಂಪನಿಲಿ ಇನ್ನು ಅಷ್ಟೇ ಸಂಬಳ ತೆಗೆದುಕೊಳ್ಳುತ್ತಿರುತ್ತಾನೆ.   &lt;br /&gt;&lt;br /&gt;ಈ ತರಹದ ಮೋಸಗಳು ಹಲವಾರು. ಇಂಥ ಇಮೇಲ್ ಗಳು ಒಂಥರ ವೈರಸ್ ಇದ್ದಂತೆ. ಆದರೆ ನಾವು ಅದನ್ನ ಮುಂದೆ ಹೋಗದಂತೆ ತಡೆಯ ಬಹುದು. ಯಾರಾದರು ಈ ರೀತಿ ಕಳಿಸಿದರೆ ದಯವಿಟ್ಟು ಅದನ್ನು ನಿಮ್ಮಲ್ಲಿಗೇ ಕೊನೆಯಾಗಿಸಿರಿ. ಕಳಿಸಿದವರು ನಿಮ್ಮ ಮಿತ್ರರಾಗಿದ್ದರೆ, ಅವರಿಗೆ ಆ ತರಹದ ಇಮೇಲ್ ಕಳಿಸದಿರಲು ಎಚ್ಚರಿಸಿ, ಬುದ್ಧಿ ಹೇಳಿ!  &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2372666341371107821-3506777543179588755?l=kurtkoti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kurtkoti.blogspot.com/feeds/3506777543179588755/comments/default' title='Post Comments'/><link rel='replies' type='text/html' href='http://www.blogger.com/comment.g?blogID=2372666341371107821&amp;postID=3506777543179588755&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/2372666341371107821/posts/default/3506777543179588755'/><link rel='self' type='application/atom+xml' href='http://www.blogger.com/feeds/2372666341371107821/posts/default/3506777543179588755'/><link rel='alternate' type='text/html' href='http://kurtkoti.blogspot.com/2009/11/blog-post.html' title='ಇ-ಮೋಸ!'/><author><name>ಗುರುಪ್ರಸಾದ ಕುರ್ತಕೋಟಿ</name><uri>http://www.blogger.com/profile/10861815905653228183</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_e_tOxrsrEcc/SejNhmMPHWI/AAAAAAAAAkA/7fs9a56NqZg/S220/DSCF3720.JPG'/></author><thr:total>2</thr:total></entry><entry><id>tag:blogger.com,1999:blog-2372666341371107821.post-2294698788173756846</id><published>2009-07-04T11:58:00.000-07:00</published><updated>2010-11-28T04:31:40.207-08:00</updated><title type='text'>ಇದು ನ್ಯಾಯಾನಾ?</title><content type='html'>&lt;div align="justify"&gt;&lt;span style="color:#6633ff;"&gt;ಇದು ಒಬ್ಬ ಮುಪ್ಪಾನು ಮುದುಕನ ಕತೆ ಅಥವಾ ವ್ಯಥೆ! ಅವರ ಹೆಸರು ಮಾಧವ ರಾಯರು ಅಂತ ಇಟ್ಕೊಳ್ಳೋಣ ಒಂದು ಊರಲ್ಲಿ ಅವರದೊಂದು ಹಳೆಯ ಮನೆ ಇದೆ. ಅದು ನೂರು ವರ್ಷಕ್ಕಿಂತ ಹಳೆಯದು. ಅವರ ಅಜ್ಜ ಕಟ್ಟಿಸಿದ್ದು. ರಾಯರು, ತಮ್ಮ ದುಡಿಮೆಯ ಕಾಲದಲ್ಲಿ ಒಂದಿಷ್ಟು ಉಳಿತಾಯದ ದುಡ್ಡು ಹಾಗು ಸಾಲ ಸೋಲ ಮಾಡಿ, ತಮಗೆ ವ್ರುಧಾಪ್ಯಕ್ಕೆಇರಲಿ ಅಂತ ಈ ಮನೆಯನ್ನ ತಮ್ಮ ಹೆಸರಿಗೆ ಮಾಡಿಕೊಂಡರು. ಉಳಿದ ಅಣ್ಣ ತಮ್ಮಂದಿರು ಮಾರಿಬಿಡೋಣ ಅಂದರೂ ತನಗೇ ಬೇಕು ಅಂತ ಆ ಮನೆಯನ್ನ ತಮ್ಮ ಹೆಸರಿಗೆ ಮಾಡಿಕೊಂಡರು. ಅವರ ವೃತ್ತಿ ಬೇರೆ ಊರಲ್ಲಿದ್ದ ಕಾರಣ, ನಿವೃತ್ತಿಯ ವರೆಗೂ ಆ ಮನೆಯಲ್ಲಿ ವಾಸಿಸುವ ಭಾಗ್ಯ ಅವರಿಗೆ ಕೂಡಿ ಬರಲಿಲ್ಲ. ನಿವೃತ್ತರಾದ ಮೇಲೆ ಅವರ ಮಕ್ಕಳು ಬೇರೆ ಊರಿನಲ್ಲಿ ತಳ ಊರಿದ ಕಾರಣ, ಮಕ್ಕಳ ಜೊತೆಗೆ ಅವರೂಇರುವ ಹಾಗಾಯ್ತು. ಅಷ್ಟೊತ್ತಿಗೆ ರಾಯರ ಹೆಂಡತಿಯು ದೈವಾಧೀನರಾದರಿಂದ ಅವರೊಬ್ಬರನ್ನೇ ಆ ಮನೆಯಲ್ಲಿ ಬಿಡುವ ತಪ್ಪು ಮಕ್ಕಳಾದರೂ ಹೇಗೆ ಮಾಡಿಯಾರು?&lt;br /&gt;ಸರಿ, ಮನೆಯನ್ನು ಖಾಲಿ ಇಡುವುದೇ? ಯಾರಿಗಾದರು ಬಾಡಿಗೆ ಕೊಡೋಣ ಅಂತ ಒಬ್ಬನಿಗೆ ಬಾಡಿಗೆ ಅಂತ ಕೊಟ್ಟರು. ಆ ಬಾಡಿಗೆದಾರನ ಹೆಸರು ಶೇಷಗಿರಿ ಅಂತ ಇರಲಿ. ಶೇಷಗಿರಿಯನ್ನು ಪರಿಚಯಿಸಿದವರು ರಾಯರ ಪರಮ ಮಿತ್ರರೇ. ಅಲ್ಲಿಗೆ ರಾಯರಿಗೆ ನಿಶ್ಚಿಂತೆ. ಶೇಷ ಮನೆಯನ್ನು ಚೆನ್ನಾಗಿಯೇ ನೋಡಿಕೊಳ್ಳ ತೊಡಗಿದ. ಬಾಡಿಗೆ ಸರಿಯಾಗಿ ಪಾವತಿ ಮಾಡುತ್ತಿದ್ದ. ರಾಯರು ಯಾವಾಗಲಾದರು ಹೋದರೆ ತುಂಬ ಆದರ - ಅತಿಥ್ಯ ಮಾಡುತ್ತಿದ್ದ. ರಾಯರಿಗೂ ಅವನ ಕಂಡರೆ ತುಂಬ ಪ್ರೀತಿ. ವರುಷಗಳು ಕಳೆದಂತೆ, ರಾಯರಿಗೂ ವಯಸ್ಸಾಗುತ್ತ ಬಂತು. ಮನೆಯ ಬಗ್ಗೆ ಮೊದಲಿನ ಉತ್ಸಾಹ ಕಡಿಮೆಯಾಯ್ತು. ಅದು ಅಲ್ಲದೆ ಮನೆಯ ಕಡೆ ದೂರ ಪ್ರಯಾಣ ಮಾಡಿಕೊಂಡು ಹೋಗಿ ಮುತುವರ್ಜಿ ವಹಿಸುವ ಕೆಲಸ ವೃದ್ಧರಾದ ರಾಯರಿಗೆ ಕಷ್ಟವೆನಿಸತೊಡಗಿತು. ಮಕ್ಕಳು ಕೂಡ ತಮ್ಮ ತಮ್ಮ ವೃತ್ತಿಯಲ್ಲಿ ಮಗ್ನರಾದ ಕಾರಣ ಅವರೂ ಕೂಡ ಮನೆಯ ಕಡೆ ಹಾಯಲಿಲ್ಲ. ಅಲ್ಲಿಗೆ ರಾಯರು ಆ ಮನೆಯಯನ್ನು ಮಾರಿ ಬಿಡುವ ನಿರ್ಧಾರ ಮಾಡಿಬಿಟ್ಟರು.&lt;br /&gt;ಅಷ್ಟರಲ್ಲಿ ಏಳು ವರ್ಷಗಳಿಂದ ಅಲ್ಲೇ ತಳ ಊರಿದ ಶೇಷನಿಗೆ ಆ ಮನೆಯ ಮೇಲೆ ವಿಶೇಷ ವ್ಯಾಮೋಹ ಏರ್ಪಟ್ಟಿತು. ಅದು ಅಲ್ಲದೆ, ಆ ಮನೆಗೆ ಬಂದ ಮೇಲೆ ಉದ್ದಾರ ಆಗಿದ್ದ ಆತ ಮನೆಯ ಮೇಲೆ ಒಂದು ಕಣ್ಣು ಹಾಕಿದ್ದ. ಮನೆ ಮಾರುವ ವಿಚಾರ ರಾಯರು ಅವನಿಗೆ ಹೇಳಿದ್ದೆ ತಡ, ಮನೆಯ ಬಗ್ಗೆ ಇಲ್ಲ ಸಲ್ಲದ ಪುಕಾರು ಹೇಳತೊಡಗಿದ. ಆ ಮನೆ ವಾಸಿಸಲು ಯೋಗ್ಯವೇ ಇಲ್ಲವೆಂದು, ತುಂಬಾ ಹಳೆಯದಾಗಿರುವ ಅದು ಯಾವಾಗ ಬೀಳುವುದೋ ನಾನರಿಯೆ ಅಂತ ರಾಯರ ತಲೆ ಕೆಡಿಸಿ ಬಿಟ್ಟ. ಪಾಪ, ಆ ಊರಿನ ಸಂಪರ್ಕವೇ ತಪ್ಪಿಸಿಕೊಂಡಿದ್ದ ರಾಯರಿಗೆ ಇವನ ಮಾತು ಕೇಳಿ ಹೇಗಾಗಿರಬೇಡ?! ಆದರೆ ಮುಗ್ಧ ಮನಸಿನ ರಾಯರಿಗೆ ಶೇಷ ನ ನರಿ ಬುದ್ಧಿ ಅರ್ಥವಾಗಲಿಲ್ಲ. ಶೇಷ ನ ಲೆಕ್ಕಾಚಾರ ಹೇಗಿತ್ತು ಅಂದರೆ, ರಾಯರು ಈ ಮಾತುಗಳಿಂದ ತತ್ತರಿಸಿ ಅತಿ ಕಡಿಮೆ ಬೆಲೆಗೆ ತನಗೇ ಮಾರಿ ಬಿಡಲಿ ಅನ್ನೋದು ಅವನ ದುರುದ್ದೇಶ! ಕೊನೆಗೆ ಅದು ಹಾಗೆ ಆಗುವ ಸಮಯ ಬಂತು! ರಾಯರು ಕಡಿಮೆ ಬೆಲೆಗೆ ಹಚ್ಚಿ ಹಚ್ಚಿ ಕೊಡುತ್ತೇನೆ ಅಂತ ಶೇಷನಿಗೆ ಮಾತು ಕೊಟ್ಟರು. ಆದರು ನನ್ನ ಮಕ್ಕಳ ಸಮಕ್ಷಮ ಮಾತುಕತೆ ಯಾಗಲಿ ಅಂತ ಬಯಸಿದರು. ಶೇಷನು ತನ್ನ ಉಪಾಯ ಫಲಿಸಿದ್ದಕ್ಕೆ ಮನದೊಳಗೆ ಖುಷಿ ಪಡುತ್ತ ರಾಯರಿದ್ದ ಊರಿಗೆ ಒಂದಿಷ್ಟು ಜನ ರನ್ನು ಕರೆದೊಯ್ದ. ರಾಯರು ಹೇಳಿದರ ಅರ್ಧಕ್ಕಿಂತ ಕಡಿಮೆ ಮೌಲ್ಯಕ್ಕೆ ಮನೆಯನ್ನು ೨೫ ವರ್ಷ ಕಬ್ಜಾ ವತ್ತಿ ಬರೆದು ಕೊಡಬೇಕು ಅಂತ ಕೇಳಿದ! ರಾಯರು ಮುಗ್ಧರಾದರೆ ಅವರ ಮಕ್ಕಳೂ ಮುಗ್ಧರೆ? ಅಪ್ಪ ಮಕ್ಕಳು ಸೇರಿ ಅದು ಆಗದು ಅಂತ ನಿರ್ಧರಿಸಿದರು. ಶೇಷನಿಗೆ ಸ್ವಲ್ಪ ದಂತ ಭಗ್ನ ವಾಯ್ತು; ಅಸಮಾಧಾನದ ಕಿಡಿ ಹತ್ತಿಕೊಂಡಿತು. ಆತ ತನ್ನ ಕಂತ್ರಿ ಕೆಲಸ ಶುರು ಮಾಡಿದ . ಬೇರೆ ಯಾರಾದರು ಮನೆ ಕೊಂಡುಕೊಳ್ಳಲು ಬಂದರೆ ಅವರಿಗೆ ಏನೋ ಕತೆ ಹೇಳಿ ವಾಪಸ್ಸು ಕಲಿಸತೊಡಗಿದ. &lt;span style="font-family:Tunga;"&gt;ಅದೆಲ್ಲದರ ಪರಿವೆಯೇ ಇಲ್ಲದ ರಾಯರು, ಯಾರದರೂ ಆ ಮನೆಯನ್ನು ಸೂಕ್ತ ಬೆಲೆಗೆ ಕೊಂಡರೆ ಸಾಕೆಂದು ಕಾಯತೊಡಗಿದರು. ವರ್ಷಗಳು ಕಳೆದರೂ ಯಾವನೊಬ್ಬ ಮುಂದೆ ಬರಲಿಲ್ಲ. ಶೇಷನೆಂಬ ನರಿ ಬುದ್ಧಿಯವನು ಅಲ್ಲಿರುವಾಗ ಯಾರು ತಾನೆ ಮುಂದುವರಿದಾರು? ಕೊನೆಗೆ ಎಷ್ಟೊ ವರ್ಷಗಳ ನಂತರ ಒಬ್ಬ ಪುಣ್ಯಾತ್ಮ ಮುಂದೆ ಬಂದ. ರಾಯರ ಜೊತೆ ಮಾತುಕತೆಆದಿ ಆ ಮನೆಯನ್ನು ಒಂದು ಒಳ್ಳೆ ಬೆಲೆಗೆ ಕೊಂಡ, ಅದಕ್ಕೆ ಅಂತ ಒಂದಿಷ್ಟು ಮುಂಗಡ ಕೊಟ್ಟು ಇಂತಿಷ್ಟು ತಿಂಗಳುಗಳ ನಂತರ ಬಾಕಿ ಹಣ ಕೊಟ್ಟು ಮನೆ ಖರೀದಿ ಮಾಡಿಕೊಳ್ಳುವುದಾಗಿ ಕಗದ ಪತ್ರಗಳಾದವು. ರಾಯರು ನಿಟ್ಟುಸಿರು ಬಿಟ್ಟರು. ಶೇಷನಿಗೆ ತಿಳಿಸಿದರು. ಒಳಗೊಳಗೆ ಸಂಕಟ ಪಟ್ಟ ಶೇಷ ಹೊರಗೆ ಚೆಂದದ ಮಾತುಗಳನ್ನಾಡಿದ. ನಿಮಗೆ ಒಳ್ಳೆ ಬೆಲೆಯೆ ಸಿಕ್ಕಿದೆಯೆಂದೂ, ತನಗೆ ಅದು ತನ್ನ ಕೈಲಾಗದಾಗಿತ್ತೆಮ್ದೂ ಹೇಳಿದ. ಖರೀದಿ ಆಗುವದರೊಳಗಾಗಿ ಮನೆ ಖಾಲಿ ಮಾಡುವೆನೆಂದು ಭರವಸೆಯನ್ನೂ ಕೊಟ್ಟ. ಮುಗ್ಧ ರಾಯರು ಅವನ ಮಾತು ನಂಬಿ ನಿಷ್ಚಿಂತೆಯಾಗಿದ್ದರು. ನಂಬಿಕೆಯ ಮೇಲೆ ಕೊಟ್ಟ ಮನೆಯಾದ್ದರಿಂದ, ಮನೆ ಖಾಲಿ ಮಾಡಲು ನೋಟಿಸು ಕಳಿಸುವುದು ರಾಯರಿಗೆ ಸರಿ ಕಾಣಲಿಲ್ಲ. ಪಾಪ ಅವರಿಗೇನು ಗೊತ್ತು, ಅದೇ ಅವರಿಗೆ ಮುಂದೆ ಮುಳುವಾಗುವದೆಂದು!! &lt;/span&gt;&lt;span style="font-family:Tunga;"&gt;ಹೀಗೆ ಒಂದೆರಡು ತಿಂಗಳು ಕಳೆದವು. ಒಂದು ದಿನ ರಾಯರು ಊಟ ಮುಗಿಸಿ ಇನ್ನೇನು ಮಲಗಬೇಕು, ಅಷ್ಟರಲ್ಲಿ ಯಾರೊ ಬಾಗಿಲು ತಟ್ಟಿದರು. ಬಾಗಿಲು ತೆಗೆದು ನೋಡಿದರೆ, ಕೋರ್ಟಿನಿಂದ ಚೆಂದನೆಯ ನೋಟಿಸು ಬಂದಿತ್ತು. ಅದನ್ನ ಶೇಷ ಕಳಿಸಿದ್ದು ಅಂತ ಗೊತ್ತಾಗಲು ಜಾಸ್ತಿ ಸಮಯ ಹಿಡಿಯಲಿಲ್ಲ. ಶೇಷ ರಾಯರ ಮೇಲೆಯೇ ಕೇಸು ಹಾಕಿದ್ದ! ಏನು ಅಂದರೆ, ರಾಯರು ಯಾರಿಗೊ ಹೆಚ್ಚಿನ ಬೆಲೆಗೆ ಮನೆ ಮಾರುತ್ತಿದ್ದಾರೆ, ತನಗೆ ಕೊಡುತ್ತೇನೆ ಎಂದು ಹೇಳಿದ್ದರೂ ಕೂಡ ಬೇರೆ ಯಾವನಿಗೋ ಕೊಡುತ್ತಿದ್ದಾರೆ. ಅದೂ ಅಲ್ಲದೆ ನನ್ನನ್ನು ಮನೆಯಿಂದ ಹೊರಗೆ ಹಾಕಲು ರೌಡಿಗಳನ್ನು ಕಳಿಸಿ ನನಗೆ ದಿನವೂ ಕಿರುಕೂಳ ನೀಡುತ್ತಿದ್ದಾರೆ ಇತ್ಯಾದಿ ಇತ್ಯಾದಿಯಾಗಿ ಇಲ್ಲ ಸಲ್ಲದ ಆರೋಪ ಗಳ ಪಟ್ಟೀಯನ್ನೇ ಹಾಕಿದ್ದ! ಎಂದೂ ಒಬ್ಬರ ಮೇಲೆ ಕೈ ಮಾಡಿಯು ಗೊತ್ತಿರದ ರಾಯರಿಗೆ, ಜೀವನದಲ್ಲೆ ಮೊದಲ ಬಾರಿಗೆ ಕೋರ್ಟ್ ನಿಂದ ಈ ಥರದ ನೋಟಿಸು ಬಂದಿತ್ತು. ಅವರು ತತ್ತರಿಸಿ ಹೋದರು. ನೀವು ನಮ್ಮ ತಂದೆಯ ಸಮ ಎಂದು ಮಾತಾಡುತ್ತಿದ್ದ ಶೇಷ ಈ ರೀತಿ ಮಾಡುವನೆಂದು ಅವರೆಂದು ಕನಸಿನಲ್ಲೂ ಯೋಚಿಸಿರಲಿಲ್ಲ. ಮುಂದೆ ಶೇಷನಿಗೆ ಹೋಗಿ ಹೀಗೆಕೆ ಮಾಡಿದೆ ಅಂದರೆ ಬಾಯಿಗೆ ಬಂದಂತೆ ಬೈದು ರಾಯರಿಗೆ ಬೇಸರ ಮೂಡಿಸಿದ. ಅದೆ ಬೆಲೆಗೆ ಕೊಟ್ಟರೆ ಕೇಸು ವಾಪಸ್ಸು ತೆಗೆದುಕೊಳ್ಳುವದಾಗಿ ಬ್ಲ್ಯಾಕ್ ಮೈಲ್ ಮಾಡಿದ. ಈಗಾಗಲೆ ಬೆರೆಯವರ ಬಳಿ ಮುಂಗಡ ತೆಗೆದುಕೊಂಡ ರಾಯರು ಮಧ್ಯದಲ್ಲಿ ಸಿಕ್ಕಿಕೊಂಡರು... &lt;/span&gt;&lt;/span&gt;&lt;/div&gt;&lt;p style="TEXT-ALIGN: left; MARGIN: 0pt" align="justify"&gt;&lt;span style="font-family:Tunga;color:#6633ff;"&gt;&lt;/span&gt;&lt;/p&gt;&lt;p style="TEXT-ALIGN: left; MARGIN: 0pt" align="justify"&gt;&lt;span style="font-family:Tunga;color:#6633ff;"&gt;...ಈಗಾಗಲೆ ಒಂದು ವರುಷವಾಗಿದೆ. ಕೇಸು ಹಾಗೆ ನಡೆಯುತ್ತಿದೆ. ಖರಿದಿ ಮಾಡಿಕೊಳ್ಳಲು ಬಂದವನು ತನ್ನ ಹಣ ವಾಪಸ್ಸು ಪಡೆದು ಕೇಸು ಮುಗಿದ ಮೇಲೆ ಮನೆಯನ್ನು ತನಗೆ ಕೊಡಬೇಕು ಅಂತ ಹೇಳಿ ಹೋಗಿದ್ದಾನೆ. ರಾಯರು ಆಟ ಆತ ಅಲೆದಾಡುತ್ತಿದ್ದಾರೆ. &lt;/span&gt;&lt;/p&gt;&lt;br /&gt;&lt;p style="TEXT-ALIGN: left; MARGIN: 0pt" align="justify"&gt;&lt;span style="font-family:Tunga;"&gt;&lt;span style="color:#6633ff;"&gt;ಇದು ನ್ಯಾಯನಾ? ನ್ಯಾಯಾಲಯವನ್ನು ಈ ಥರ ಕೆಟ್ಟದಾಗಿ ಬಳಸಿಕೊಳ್ಳುವುದು ತಪ್ಪಲ್ಲವೇ? ಶೇಷನ ಉದ್ದೇಷವೇ ಅದು! ಕೋರ್ಟ್ ನಲ್ಲಿ ಕೇಸು ನಡಿಯುತ್ತಿರಬೇಕು, ಬೇರೆ ಯಾರೂ ಆ ಮನೆಯನ್ನು ಕೊಂಡುಕೊಳ್ಳಬಾರದು, ತಾನು ಆರಾಮವಾಗಿ ಅಲ್ಲೆ ಝಂಡಾ ಊರುವುದು. ಇದಕ್ಕೆ ಪರಿಹಾರವೇನು? ರಾಯರಿಗೆ ಅಥವ ಈ ಥರ ಮೋಸ ಹೊಗುವ ಎಷ್ಟೊ ಜನರಿಗೆ ಈ ಪ್ರಶ್ಣೆಯ&lt;br /&gt;ಉತ್ತರ ಸಿಕ್ಕಿಲ್ಲ. ನಿಮಗೆ ಗೊತ್ತಿದ್ದರೆ ಹೇಳಿ! &lt;/span&gt;&lt;/span&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2372666341371107821-2294698788173756846?l=kurtkoti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kurtkoti.blogspot.com/feeds/2294698788173756846/comments/default' title='Post Comments'/><link rel='replies' type='text/html' href='http://www.blogger.com/comment.g?blogID=2372666341371107821&amp;postID=2294698788173756846&amp;isPopup=true' title='3 Comments'/><link rel='edit' type='application/atom+xml' href='http://www.blogger.com/feeds/2372666341371107821/posts/default/2294698788173756846'/><link rel='self' type='application/atom+xml' href='http://www.blogger.com/feeds/2372666341371107821/posts/default/2294698788173756846'/><link rel='alternate' type='text/html' href='http://kurtkoti.blogspot.com/2009/07/blog-post.html' title='ಇದು ನ್ಯಾಯಾನಾ?'/><author><name>ಗುರುಪ್ರಸಾದ ಕುರ್ತಕೋಟಿ</name><uri>http://www.blogger.com/profile/10861815905653228183</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_e_tOxrsrEcc/SejNhmMPHWI/AAAAAAAAAkA/7fs9a56NqZg/S220/DSCF3720.JPG'/></author><thr:total>3</thr:total></entry><entry><id>tag:blogger.com,1999:blog-2372666341371107821.post-5909005837420376388</id><published>2009-04-15T11:58:00.000-07:00</published><updated>2009-04-15T12:00:56.185-07:00</updated><title type='text'>ಆದರ್ಶಗಳ ಕೊಲೆ!</title><content type='html'>&lt;div align="justify"&gt;ಮದುವೆಗಿಂತ ಮೊದಲು ನಾನು ಅಂದುಕೊಳ್ಳುತ್ತಿದ್ದೆ, ನನ್ನ ಮದುವೆ ಆದರ್ಶ ಮದುವೆ ಅಗಬೇಕು. ಹುಚ್ಚಾ ಪಟ್ಟೆ ಖರ್ಚು ಆಗಬಾರ್ದು, ರೆಜಿಸ್ಟರ್ ಮ್ಯಾರೇಜ್ ಆಗ್ಬೇಕು! ಇತ್ಯಾದಿ ಇತ್ಯಾದಿ. ಡೊಡ್ಡ ದೊಡ್ಡ ಆದರ್ಶಗಳು. ಆದರೆ ಆದದ್ದೇ ಬೇರೆ! ರೆಜಿಸ್ಟರ್ ಮ್ಯಾರೇಜ್ ಆಗ್ಲಿಲ್ಲಾ. ಒಳ್ಳೆ ಅದ್ಧೂರಿಯಾಗಿ ಮದುವೆಯಾಯ್ತು. ಅಂದುಕೊಂಡದ್ದಕ್ಕಿಂತ ಜಾಸ್ತಿ ಖರ್ಚು ಆಯ್ತು! ಅದಕ್ಕೆಲ್ಲಾ ಕಾರಣಗಳು ಇದ್ವು ಅಥವ ಅದಕ್ಕೆ ನಾನೇ ಕಾರಣ ಹುಡುಕಿದ್ದಿರಬೆಕು. ಆದರೆ ಒಂದು ಮಾತ್ರಾ ನಿಜ ಏನೇ ಆದರ್ಶಗಳನ್ನು ಇಟ್ಟುಕೊಂಡ್ರೂ ಅದನ್ನು ಪಾಲಿಸೋ ಜನ ತುಂಬಾ ಕಡಿಮೆ. ಯಾಕೆ ಹೀಗಾಗುತ್ತೆ ಅಂತ? ಪರಿಸ್ಥಿತಿ ಹಾಗೆ ಬರುತ್ತೆಯೆ? ಅಥವಾ ಸಮಾಜದಲ್ಲಿದ್ದು ಬೇರೆ ರೀತಿಯಲ್ಲಿ ಯೋಚನೆ ಮಾಡೊಕೆ ಭಯವೆ?ಮಕ್ಕಳೆ ಬೇಡ ಅಂತೀವಿ. ಯಾವುದಾದರು ಅನಾಥ ಮಗುವನ್ನು ದತ್ತು ತೊಗೊಂಡು ಸಾಕ್ತಿನಿ ಅಂತೀವಿ! ಆದರೆ ಗೆಳೆಯನೊಬ್ಬ ಅಪ್ಪ ಆಗ್ತಿರೊ ವಿಷಯ ಕೇಳಿ ಅಸೂಯೆಯಿಂದ ಕರುಬಿ ನಾನು ಅಪ್ಪ ಆಗ್ಲೇಬೇಕು ಅನ್ನೊ ಹಠ ತೊಡ್ತಿವಿ. ಯಾಕೆಂದರೆ ಸಮಾಜಕ್ಕೆ ತಾನು ಗಂಡಸು ಅನ್ನೊದನ್ನ ಪ್ರಮಾಣಿಸಿ ತೋರಿಸಬೆಕಲ್ಲಾ. ಇಲ್ಲದಿದ್ರೆ, ಮಿತ್ರರು, ಸಂಬಂಧಿಗಳು ಆಡೊ ಕುಹಕದ ಮಾತು ಸಹಿಸಬೇಕು! ನನ್ನ ಗೆಳೆಯನೊಬ್ಬನಿಗೆ ಅಪ್ಪನಾಗೊ ಸಡಗರ ಒದಗಿ ಬಂತು. ಆತ ನನಗೆ ಫೋನ್ ಮಾಡಿದಾಗಲೆಲ್ಲ ಕೇಳೋನು "ನಿಮ್ದು ಯಾವಾಗರಿ ಸುದ್ದಿ ? ಏನೂ ವಿಶೇಷ ಇಲ್ಲೇನು", ಅರೇ ಇದಾವ ಲೆಕ್ಕ? ಅವನದು ವಿಶೇಷ ಆಗಿದ್ದೆ ತಡ, ಹಿಂಗಾಡೊದಾ? ಹಿಂಗಾದಾಗ ಮೊದಲು ಒಂದು ಮಗು ಆಗ್ಲಿ ಆಮೇಲೆ ನೋಡಿದ್ರಾಯ್ತು ಅಂತ ಶುರು ಹಚ್ಕೋತೀವಿ. ಇದೆ ಅಲ್ವೆ ಆದರ್ಶಗಳ ಕೊಲೆ?ಕಡಿಮೆ ಪಗಾರ ಬರ್ತಿದ್ದಾಗ, ಇದಕ್ಕಿಂತ ಇನ್ನೂ ಹತ್ತು ಸಾವಿರ ಜಾಸ್ತಿಯಾದ್ರೂ ಸರಿ ಸಮಾಜ ಸೇವೆ ಮಾಡೇ ತೀರುವೆ ಅಂತ ಶಪಥ ಮಾಡ್ತೀವಿ. ಹತ್ತು ಸಾವಿರ ಜಾಸ್ತಿ ಆಗುತ್ತೆ ಆದ್ರೆ ಅದಕ್ಕೆ ತಕ್ಕ ಹಾಗೆ ಬೇರೆ ಖಯಾಲಿಗಳು ಬೆಳೆದಿರುತ್ತವೆ. ಶಪಥ ಮರೆತು ಹೋಗಿರುತ್ತದೆ!ಮೇಲಿನ ಎಲ್ಲ ಉದಾಹರಣೆಗಳಲ್ಲಿ ಸಾಮಾನ್ಯವಾದುದೆಂದರೆ, ನಮ್ಮ ಸುತ್ತಲಿರುವವರ ಪ್ರಭಾವ, ಅವರು ಯಾರೇ ಆಗಿರಬಹುದು. ಅಪ್ಪ, ಅಮ್ಮಾ, ಬಂಧು ಅಥವಾ ಗೆಳೆಯಾ. ರೆಜಿಸ್ಟರ್ ಮದುವೆ ಆಗ್ತೀನಿ ಅಂದಾಗ ಅಪ್ಪ ಅಂತಾನೆ "ನೀನು ಹಿಂಗೆಲ್ಲಾ ಅಂದ್ರ ಹೆಂಗ? ನಮ್ಮ ಮನಿತನಕ್ಕ ತಕ್ಕಂಗ ಲಗ್ನಾ ಆಗ್ಬೇಕು. ಇಲ್ಲಾ ಅಂದ್ರ ಎಲ್ಲಾರು ಎನು ತಿಳ್ಕೋತಾರ?" "ಇದ್ದೊಬ್ಬ ಮಗಂದು ಲಗ್ನಾ ಚೆಂದಾಗಿ ನೋಡೂದು ನನ್ನ ನಸೀಬದಾಗ ಇಲ್ಲಾ ಅಂತ ಕಾಣ್ತದ" ಅಂತ ಅಮ್ಮ ಕಣ್ಣೀರು ಹಾಕ್ತಾಳೆ. ಇದನ್ನೆಲ್ಲ ವಿರೋಧಿಸಿ ತಮ್ಮ ಆದರ್ಶ ಮೆರೆಯುವವರೂ ಇದ್ದಾರೆ. ಆದರೆ ಅವರ ಭಾವನೆಗಳಿಗೆ ಸ್ಪಂಧಿಸಿ ತಮ್ಮ ಆದರ್ಶಗಳನ್ನು ಕೊಲೆ ಮಾಡುವವರೂ ಇನೂ ಜಾಸ್ತಿ ಇದ್ದಾರೆ. ಇದೊಂದು ಸಣ್ಣ ಉದಾಹರಣೆ ಅಷ್ಟೇ. ಆದರೆ ಯಾವುದು ಸರಿ, ಯಾವುದು ತಪ್ಪು ಅಂತ ಮನಸ್ಸು ಯೋಚಿಸಲು ತೊಡಗುತ್ತದೆ...ಆದರ್ಶಗಳನ್ನು ಪಾಲಿಸಿದರೆ ಬೇರೆಯವರಿಗೆ ಬೇಜಾರು, ಪಾಲಿಸದಿದ್ದರೆ ತನ್ನ ಮನಸ್ಸಾಕ್ಷಿಗೆ ದ್ರೋಹ ಬಗೆದಂತೆ! ಇದಕ್ಕೆ ಪರಿಹಾರವೇನು? &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2372666341371107821-5909005837420376388?l=kurtkoti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kurtkoti.blogspot.com/feeds/5909005837420376388/comments/default' title='Post Comments'/><link rel='replies' type='text/html' href='http://www.blogger.com/comment.g?blogID=2372666341371107821&amp;postID=5909005837420376388&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/2372666341371107821/posts/default/5909005837420376388'/><link rel='self' type='application/atom+xml' href='http://www.blogger.com/feeds/2372666341371107821/posts/default/5909005837420376388'/><link rel='alternate' type='text/html' href='http://kurtkoti.blogspot.com/2009/04/blog-post.html' title='ಆದರ್ಶಗಳ ಕೊಲೆ!'/><author><name>ಗುರುಪ್ರಸಾದ ಕುರ್ತಕೋಟಿ</name><uri>http://www.blogger.com/profile/10861815905653228183</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_e_tOxrsrEcc/SejNhmMPHWI/AAAAAAAAAkA/7fs9a56NqZg/S220/DSCF3720.JPG'/></author><thr:total>2</thr:total></entry><entry><id>tag:blogger.com,1999:blog-2372666341371107821.post-6375464344039361272</id><published>2009-04-07T11:12:00.000-07:00</published><updated>2009-04-17T12:50:34.577-07:00</updated><title type='text'>ನನ್ನ ಮನದಂಗಳದಲಿ ಸಾಹಿತ್ಯದ ಬೀಜ ಬಿತ್ತಿದವರು...</title><content type='html'>&lt;div align="justify"&gt;ಒಂದು ಪ್ರಶ್ನೆ ಯಾವಾಗಲೂ ದಿಗಿಲು ಹುಟ್ಟಿಸುತ್ತದೆ! ಯಾರಾದರೂ ಹೊಸಬರು ನಿಮ್ಮ ಊರು ಯಾವ್ದು? ಅಂತ ಕೇಳಿದಾಗ! ಯಾಕಂದ್ರೆ, ನಮ್ಮ ಬೇರುಗಳು ಇರೋದು ಕುರ್ತಕೋಟಿಯಲ್ಲಿ. ನಾನು ಹುಟ್ಟಿದ್ದು ಗದಗದಲ್ಲಿ. ಬೆಳೆದಿದ್ದು ಲಕ್ಷ್ಮೇಶ್ವರದಲ್ಲಿ. ಹೆಚ್ಚಿನ ವಿದ್ಯಾಭ್ಯಾಸ ಮಾಡಿದ್ದು ಧಾರವಾಡ ಹಾಗೂ ಬಾಗಲಕೋಟೆಯಲ್ಲಿ. ಸಧ್ಯದ ವಾಸ್ತವ್ಯ ಬೆಂಗಳೂರಲ್ಲಿ! ಹೀಗೆ, ನನ್ನದು ಯಾವ ಊರು ಅನ್ನೋ ದ್ವಂದ್ವ ನನ್ನದು, ಇರಲಿ. &lt;/div&gt;&lt;div align="justify"&gt;&lt;br /&gt;ನಾನು ಯಾರಿಗಾದರೂ, ನನ್ನ ಕುರ್ತಕೋಟಿ ಬೇರುಗಳ ಬಗ್ಗೆ ಪ್ರಸ್ತಾಪ ಮಾಡಿದ ಕೂಡಲೆ, ಒಂದು ಪ್ರಶ್ನೆಯನ್ನು ನಿರೀಕ್ಷಿಸುತ್ತೇನೆ "ಅರೇ, ಕೀರ್ತಿನಾಥ ಕುರ್ತಕೋಟಿ ಅವರು ನಿನಗೆ ಸಂಬಂಧಾನಾ?" ಈ ಪ್ರಶ್ನೆ ನನಗೆ ಯಾವಾಗಲೂ ಖುಷಿ ಕೊಡುತ್ತೆ. ಹೌದು, ಅವರು ನನ್ನ ಸ್ವಂತ ದೊಡ್ಡಪ್ಪ! ಅಥವ ಅವರ ಖಾಸ್ ತಮ್ಮನ (ಶಶಿಕಾಂತ ಕುರ್ತಕೋಟಿ) ಮಗನಾಗಿ ಹುಟ್ಟಿದ್ದು ನನ್ನ ಅದೃಷ್ಟ. ಅವರ ಬಗ್ಗೆ ವಿವರವಾಗಿ ಬರೆಯುವಷ್ಟು ಪ್ರತಿಭೆ ಅಥವ ತಾಕತ್ತು ಎರಡೂ ನನ್ನಲ್ಲಿ ಇಲ್ಲ ಬಿಡಿ. ಅವರು ಕನ್ನಡದ ಅತೀ ಶ್ರೇಷ್ಠ ವಿಮರ್ಶಕರಲ್ಲೊಬ್ಬರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ನಾನು ಅವರ ಜೊತೆ ಕಳೆದ ಕೆಲವು ಅಮೂಲ್ಯ ಕ್ಷಣಗಳ ಬಗ್ಗೆ ಬರೆಯಲು ನನಗೆ ಖುಷಿ. ನಾವು ಧಾರವಾಡದಲ್ಲಿ ಇದ್ದಾಗ, ದೊಡ್ಡಪ್ಪನ ಮನೆಗೆ ಆಗಾಗ ಹೋಗುತ್ತಿದ್ದೆ. ದೊಡ್ಡಪ್ಪನನ್ನು ಏಕವಚನದಲ್ಲಿ ಕರಿಯುತ್ತಿದೆ ಅನ್ನೋದು ನನಗೆ ಒಂಥರ ಪ್ರತಿಷ್ಠೆಯ ಸಂಗತಿ!. ನಾನು ಹೋದಾಗಲೆಲ್ಲ ಅವರು ಏನೋ ಒಂದು ಬರೀತಾ ಕೂತಿರೋರು ಅಥವ ಯಾರೋ ಸಾಹಿತ್ಯಾಸಕ್ತರ ಜೊತೆ ಹರಟೆ ಹೊಡಿತಾ ಕೂತಿರೋರು. ನನಗೆ ಅವರು ಒಬ್ಬರೇ ಸಿಗುವುದು ಅಪರೂಪ, ಅದರೆ ಸಿಕ್ಕರೇ ನನ್ನ ಅದೃಷ್ಟ. "ಏನೋ ಬರಿಲಿಖತ್ತಿಯಲ್ಲಪ್ಪಾ" ಅಂತ ಶುರು ಮಾಡುತ್ತಿದ್ದೆ (ಹಾಗೆ ಕೇಳುವಷ್ಟು ಸಲಗೆ ಅವರ ಮೇಲೆ ನನಗಿತ್ತು). ನಾನು ಅಷ್ಟು ಕೇಳುತ್ತಲೆ ಬಾಯಲ್ಲಿ ಸದಾ ಇರುವ ತಾಂಬೂಲವನ್ನು ಉಗಿದು ಬರುತ್ತಿದ್ದರು "ಯಾಕ್ಲೇ ಭಾಳ ದಿವ್ಸದ ಮ್ಯಾಲೆ ಬಂದ್ಯಲ್ಲ" ಅಂತ ಅಕ್ಕರೆಯಿಂದ ಕೇಳುತ್ತಿದ್ದರು. ಅಲ್ಲಿಗೆ ನಮ್ಮ ಸಂಭಾಷಣೆ ಶುರು! ಅವರಿಗೆ ಹರಟೆ ಪ್ರಿಯ ಅನ್ನುವ ಅವರ ದುರ್ಬಲತೆಯನ್ನು (?) ನಾನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದೆ. ವಿಧ ವಿಧವಾದ ವಿಷಯಗಳ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದರು. ರಾಜಕೀಯದಿಂದ ಹಿಡಿದು ಕುಮಾರವ್ಯಾಸನ ವರೆಗೂ. ಅವರು ನಿಜಕ್ಕು ಒಬ್ಬ ಓಡಾಡುವ ಅಥವ ಮಾತನಾಡುವ ನಿಘಂಟು ಅಂದ್ರೆ ತಪ್ಪಾಗಲಾರದು. ಅವರು ಒಮ್ಮೆ ಹೇಳಿದ್ದು ನೆನಪಿದೆ. ಕುಮಾರವ್ಯಾಸ (ಗದುಗಿನ ನಾರಾಣಪ್ಪ) ನಮ್ಮ, ಅಂದರೆ ಕುರ್ತಕೋಟಿ ಮನೆತನದವನಂತೆ! ನನಗೆ ನಿಜಕ್ಕೂ ಹೆಮ್ಮೆಯ ವಿಷಯ. ಅದಕ್ಕೆ ಇರಬೇಕು ನನ್ನ ದೊಡ್ಡಪ್ಪನ ಬಾಯಲ್ಲಿ ಕುಮಾರವ್ಯಾಸ ಭಾರತ ಪೂರ್ತಿಯಗಿ ನಲಿದಾಡುತ್ತಿತ್ತು. ನಾನು ಎಷ್ಟೋ ಸಾರಿ ಅವರ ಜೊತೆ ಅವರ ಪ್ರವಚನಕ್ಕೆ ಹೋಗಿದ್ದಿದೆ. ಅಂದು ನನಗೆ ನಿಜಕ್ಕೂ ರಸದೌತಣ! ನಾನು ಆಗಾಗ ಮಯೂರ ಮತ್ತು ಕಸ್ತೂರಿಯಲ್ಲಿ ಕೆಲವು ಚಿಕ್ಕ ಪುಟ್ಟ ಲೇಖನ ಅಥವ ಚುಟುಕು ಬರೆಯುತ್ತಿದ್ದೆ. ಅವು ಪ್ರಕಟವಾದಾಗ ಅದನ್ನೊಯ್ದು ದೊಡ್ಡಪ್ಪನ ಮುಂದೆ ಹಿಡಿಯುತ್ತಿದ್ದೆ. ನನ್ನದು ಹುಂಬು ಧೈರ್ಯ! ಅಂಥ ದೊಡ್ಡ ವಿಮರ್ಶಕನೆದುರು ನನ್ನ ಪುಟಗೋಸಿ ಲೇಖನ ತೋರಿಸುವುದೆಂದರೆ ಹುಂಬ ಧೈರ್ಯವಲ್ಲದೆ ಮತ್ತೇನು?. ಒಂದು ಸಾರಿ ನಾನು ಉಪಯೋಗಿಸಿದ ಭಾಷೆ ಬಗ್ಗೆ ಸ್ವಲ್ಪ ತಕರಾರು ತಗೇದ ದೊಡ್ಡಪ್ಪ ನನ್ನನ್ನು ತರಾಟೆಗೆ  ತೆಗೆದುಕೊಂಡರು. ಮುಂದೆ ಸ್ವಲ್ಪ ಮಟ್ಟಿಗೆ ಅದನ್ನು ತಿದ್ದಿಕೊಂಡು ಇನ್ನೊಂದು ಲೇಖನ ಬರೆದು ಅವರಿಂದ ಶಭಾಸ್ ಗಿರಿ ತೊಗೊಂಡ ಮೇಲೆಯೇ ನನಗೆ ಸಮಾಧಾನವಾಗಿದ್ದು! ನಂತರ ದೊಡ್ಡಪ್ಪ ವಿಧಿವಶವಾದರೂ, ಹೀಗೆ ಅವರ ಜೊತೆ ಕಳೆದ ಹಲವಾರು ನೆನಪುಗಳು ನನ್ನಲ್ಲಿ ಇನ್ನೂ ಜೀವಂತವಾಗಿವೆ... &lt;/div&gt;&lt;div align="justify"&gt;&lt;br /&gt;ಇನ್ನು ನನ್ನ ಅಮ್ಮನ (ಪರಿಮಳ ಕುರ್ತಕೋಟಿ) ಬಗ್ಗೆ ಒಂದು ದೊಡ್ಡ ಪುಸ್ತಕ ಬರೆಯುವಷ್ಟು ನನ್ನ ಹತ್ರ ಸಾಮಗ್ರಿ ಇದೆ, ಒಂದು ದಿನ ಬರೆದೇನು ಎನ್ನುವ ಆತ್ಮ ವಿಶ್ವಾಸವು ಇದೆ. ನಾನ್ನಲ್ಲಿ ತುಂಬ ಪ್ರಭಾವವನ್ನು ಬೀರಿದ ಮೊದಲ ವ್ಯಕ್ತಿ ನನ್ನಮ್ಮ. ನನಗೆ ತಿಳುವಳಿಕೆ ಬಂದ ಮೇಲೆ ನನ್ನ ವ್ಯಕ್ತಿತ್ವ ರೂಪಿಸುವಲ್ಲಿ ಅವಳದು ದೊಡ್ಡ ಸ್ಥಾನ. ಅವಳು ಪ್ರಭುದ್ಧ ಲೇಖಕಿ. ಅವಳು ಬರೆದ ಎಷ್ಟೋ ಲೇಖನಗಳು ಹಾಗು ಸಣ್ಣ ಕತೆಗಳು ನಾಡಿನ ಹಲವಾರು ಪ್ರಸಿದ್ಧ ಪತ್ರಿಕೆಗಳಾದ ತರಂಗ, ತುಷಾರ, ಸುಧಾ, ಮಯೂರ, ವನಿತಾ, ಮತ್ತು ಪ್ರಜಾವಾಣಿಯಲ್ಲಿ ಪ್ರಕಟವಾಗಿವೆ. ಅವಳ ಸಣ್ಣ ಕತೆಗಳ ಸಂಗ್ರಹವಾದ "ತುಳಸಿ" ಪುಸ್ತಕವೂ ಬಿಡುಗಡೆಯಾಗಿದೆ. ಮೊದಲಿನಿಂದಲೂ ಅಮ್ಮ ನಾಸ್ತಿಕಳು. ಹಾಗು ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ಅವಳೆಂದೂ ಸಹಿಸುತ್ತಿರಲಿಲ್ಲ. ಇವೇ ಅವಳ ಕಥಾ ವಸ್ತುಗಳು ಕೂಡ ಆಗಿರುತ್ತಿದ್ದವು. ಆಗ ನಮ್ಮ ತಂದೆಗೆ ಲಕ್ಷ್ಮೇಶ್ವರದಲ್ಲಿ ಉದ್ಯೋಗ. ನನ್ನ ತಂದೆಯು ಅಮ್ಮನಿಗೆ ತುಂಬ ಪ್ರೋತ್ಸಾಹ ನೀಡುತ್ತಿದ್ದರು. ಲಕ್ಷ್ಮೇಶ್ವರ ಒಂದು ಐತಿಹಾಸಿಕ ಸ್ಥಳ (ಅದರ ಬಗ್ಗೆ ಮತ್ತೊಮ್ಮೆ ಬರೆದೇನು). ಆ ಊರಲ್ಲಿ ನನಗೆ ತಿಳಿದ ಮಟ್ಟಿಗೆ ಪ್ರಥಮ ಮಹಿಳಾ ಸಂಘವನ್ನು ನನ್ನಮ್ಮನೇ ಶುರು ಮಾಡಿದ್ದು. ಅಮ್ಮನ ಎಷ್ಟೋ ಬರಹಗಳು ದೊಡ್ಡ ಸಂಚಲನವನ್ನೇ ಉಂಟು ಮಾಡಿದ್ದವು. ನನಗೆ ಚೆನ್ನಾಗಿ ನೆನಪಿದೆ, ಒಂದು ಸಲ ಅವಳು ಬರೆದ ಲೇಖನ ಎಷ್ಟು ವಾರಗಳ ವರೆಗೆ ಚರ್ಚೆಯಾಯ್ತೆಂದರೆ, ಕೊನೆಗೆ ಸಂಪಾದಕರು ವಿನಂತಿ ಮಾಡಿಕೊಂಡು ಆ ಚರ್ಚೆಗೆ ಮಂಗಳ ಹಾಡಬೇಕಾಯಿತು! ಇಂಥ ಉದಾಹರಣೆಗಳು ಹಲವಾರು. ಈಗಿದ್ದಿದ್ದರೆ ಅವಳ ಎಷ್ಟು ಪುಸ್ತಕಗಳು ಪ್ರಕಟವಾಗಿರುತ್ತಿದ್ದವೋ ಏನೊ. ಅನಾರೋಗ್ಯದ ಕಾರಣ ಅವಳಿಗೆ ತನ್ನನ್ನು ತಾನು ಪೂರ್ತಿಯಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲಾಗಲಿಲ್ಲ. ತನ್ನ ೪೯ ನೆ ವಯಸ್ಸಿಗೆ ನಮ್ಮನ್ನೆಲ್ಲ ಬಿಟ್ಟು ನಡೆದುಬಿಟ್ಟಳು :( ... &lt;/div&gt;&lt;div align="justify"&gt;&lt;br /&gt;ಅದೇ ಸಮಯದಲ್ಲಿ ನನ್ನಲ್ಲಿ ಪ್ರಭಾವ ಬೀರಿದ ಇನ್ನೊಬ್ಬ ವ್ಯಕ್ತಿಯೆಂದರೆ ನನ್ನ ಸೋದರ ಮಾವ. ಆತ ನನ್ನಮ್ಮನ ಖಾಸ್ ತಮ್ಮ. ಹೆಸರು ರಾಘವೇಂದ್ರ ಹುಯಿಲಗೋಳ. ಅತೀ ಚಿಕ್ಕ ವಯಸ್ಸಿನಲ್ಲೆ ೩೦ ರೇಡಿಯೊ ನಾಟಕಗಳನ್ನು ಆತ ಬರೆದಿದ್ದ. ಎಲ್ಲವೂ ಹಾಸ್ಯಮಯವೇ. ನನ್ನಲ್ಲಿ ಹಾಸ್ಯ ರಸವನ್ನು ತುಂಬಿದಾತ. ಅವನ ಜೊತೆ ಮಾತನಾಡುವುದೆ ಒಂದು ಮಜ! ಅವನ ಮಾತಿನಲ್ಲಿ ಅಷ್ಟು ಹಾಸ್ಯ ತುಂಬಿರುತ್ತಿತ್ತು. &lt;/div&gt;&lt;div align="justify"&gt;&lt;br /&gt;ಇವರೆಲ್ಲರ ಪ್ರಭಾವದಿಂದಲೋ ಏನೊ ನಾನೂ ಕತೆ, ಕಾದಂಬರಿ ಓದಲು ಶುರು ಮಾಡಿದೆ. ನನಗೆ ತುಂಬ ಪ್ರೀಯವಾದ ಪುಸ್ತಕವೆಂದರೆ ಬೀಚಿ ಯವರ ಭಯಾಗ್ರಫಿ. ಓದುವುದರ ಜೊತೆಗೆ ಬರೆಯುವ ಗೀಳು ಹತ್ತಿತು. ಮೊದಮೊದಲು ನನ್ನ ಬರಹಗಳು ಸಣ್ಣ ಚುಟುಕುಗಳಿಗೆ ಸೀಮೀತವಾಗಿದ್ದವು. ಆಗ ಇನ್ನು ಹೊಸತು ನನ್ನದೊಂದು ನಗೆ ಹನಿ ಮಯೂರದಲ್ಲಿ ಪ್ರಕಟವಾಗಿತ್ತು. ನನಗೋ ಸಂಭ್ರಮ. ಗೆಳೆಯರಿಗೆಲ್ಲ ತೋರಿಸಿದೆ. ಬಹಳಷ್ಟು ಹುಡುಗರು ಮೆಚ್ಚುತ್ತಿದ್ದರು ಆದರೂ ಸಹಿಸಲಾರದವರೂ ಇರ್ತಾರಲ್ಲ? ಒಬ್ಬ ಕುಹಕವಾಡಿದ "ಕುರ್ತಕೋಟಿ ಅಂತ ನಿನ್ನ ಅಡ್ಡಹೆಸರು ನೋಡಿ ಪ್ರಕಟ ಮಾಡ್ತಾರ, ಇಲ್ಲ ಅಂದ್ರ ಕಷ್ಟ" ಅಂದ! ನನಗೆ ಇರಬಹುದೇ ಅಂತ ಸಂಶಯವಾಯ್ತು. ಕೂಡಲೇ ಮತ್ತೋಂದು ಲೇಖನ ರೆಡಿ ಮಾಡ್ದೆ. ಈ ಸಲ "ಪರಶುರಾಮ" ಅಂತ ಕಾವ್ಯ ನಾಮ ಇಟ್ಕೋಂಡು ಕಳಿಸಿದೆ. ಅದೂ ಪ್ರಕಟ ಆಯ್ತು. ಅದನ್ನು ನನ್ನ ಆ ಗೆಳೆಯನಿಗೆ ತೋರಿಸಲು ಮರೆಯಲಿಲ್ಲ. ಆತನ ಮುಖ ನೋಡುವಂಗಿತ್ತು. ಆದರೆ ಒಂದು ತಮಾಶೆಯಾಗಿತ್ತು. ನನ್ನ ಲೇಖನದ ಗೌರವಧನ ಮನಿ ಒರ್ಡರ್ ಮೂಲಕ ಬಂದಿತ್ತು. ನಾನಾಗ ಮನೆಲಿರಲಿಲ್ಲ. ಪೋಸ್ಟ್ ಮನ್, ನನ್ನ ತಂದೆಗೆ, ಪರಶುರಾಮ ಅನ್ನೋರು ಇದಾರಾ ಅಂತ ಕೇಳಿದ್ನಂತೆ. ಅಪ್ಪನಿಗೆ ತನ್ನ ಮಗ ಪರಶುರಾಮ ಆಗಿರೊ ಸಂಗತಿ ಗೊತ್ತಿರಲಿಲ್ಲವಾದರಿಂದ, ಆ ಹೆಸರಿನವರು ತಮ್ಮ ಮನೇಲಿ ಯಾರೂ ಇಲ್ಲ ಅಂತ ಅವನ್ನ ವಾಪಸ್ಸು ಕಳಿಸಿದ್ರಂತೆ! ಆಮೇಲೆ ಆ ಪೋಸ್ಟ್ ಮನ್ ಗೆ ತಿಳಿಸಿ ಹೇಳೊದ್ರಲ್ಲಿ ನನಗೆ ಸಾಕು ಬೇಕಾಗಿ ಹೋಯಿತು. ಆಮೇಲೆ ಎಂದೂ ನಾನು ಕಾವ್ಯನಾಮ ಇಟ್ಟುಕೊಳ್ಳುವ ಗೋಜಿಗೆ ಹೊಗಲಿಲ್ಲ ಬಿಡಿ! ಆಮೇಲೆ ಸಣ್ಣ ಲೇಖನ ಗಳನ್ನು ಬರೆಯಲು ಶುರು ಮಾಡಿದೆ. ಆದರೂ ನನಗೆ ತುಂಬ ಪ್ರಿಯವಾದ ಪ್ರಕಾರ ಎಂದ್ರೆ "ಹಾಸ್ಯ" ಸಧ್ಯಕ್ಕೆ ಹಾಸ್ಯ ಬರಹಗಳ ಕಡೆಗೆ ಒಲವು ಜಾಸ್ತಿ. ಈಗೆಲ್ಲ ನನ್ನ ಲೇಖನಗಳನ್ನ ಅಂತರ್ ಜಾಲದಲ್ಲೇ ಪ್ರಾಕಟಮಾಡ್ತೀನಿ. ಯಾಕಂದ್ರೆ ಇಲ್ಲಿ ನನ್ನ ಲೇಖನಗಳನ್ನು ಯಾರೂ ಕಸದಬುಟ್ಟಿಗೆ ಹಾಕುವುದಿಲ್ಲವೆಂಬ ವಿಶ್ವಾಸ :). ನಂತರ ವೃತ್ತಿಯಲ್ಲಿ ತೊಡಗಿಸಿಕೊಂಡ ಮೇಲೆ, ಸ್ವಲ್ಪ ಮಟ್ಟಿಗೆ ನನ್ನ ಸಾಹಿತ್ಯ ಕೃಷಿ ನಿಂತು ಹೋಗಿತ್ತು. ಈ ನಡುವೆ ನನ್ನ ಬಾಸ್ (ಕೃಷ್ಣ ರಾಜ್) ನನಗೆ ತುಂಬಾ ಪ್ರೋತ್ಸಾಹಿಸಿ ಮತ್ತೆ ಬರೆಯುವಂತೆ ಪ್ರೇರೇಪಿಸುತ್ತಿದ್ದಾರೆ. ಅವರಿಗೆ ನನ್ನ ಚಿರಋಣಿ. &lt;/div&gt;&lt;div align="justify"&gt;&lt;br /&gt;ಮುಂದೆ ಏನೇನೋ ಯೋಜನೆಗಳಿವೆ. ಅಮ್ಮನ ಅಪ್ರಕಟಿತ ಕಾದಂಬರಿ (ವಡ್ಡಾರಾಧನೆ) ಪ್ರಕಟಿಸಬೇಕು. ಅಮ್ಮನ ಕನಸಾದ ವೃಧ್ಧಾಶ್ರಮವೊಂದನ್ನು ನಡೆಸಬೇಕು. ಕುರ್ತಕೋಟಿ ವೆಬ್ ಸೈಟು, ಸಿಕ್ಕಾಪಟ್ಟೆ ಓದಬೇಕು ಮತ್ತು ಬರೀಬೇಕು, ಓಳ್ಳೆ ಸಿನಿಮಾವೊಂದು ನಿರ್ಮಿಸಬೇಕು... ಹೀಗೆ ಹಲವಾರು ಕನಸುಗಳು. ಎಲ್ಲವನ್ನೂ ಮಾಡುವ ಹಂಬಲವೇನೋ ಇದೆ, ಆದರೆ ಮಾಡೇ ತೀರುವೆನೆಂಬ ಛಲದ ಕೊರತೆ ಇದೆ ಏನೋ ಎನ್ನುವ ಸಂಶಯವೂ ಇದೆ. ನೋಡೋಣ ... ನಮಸ್ಕಾರ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2372666341371107821-6375464344039361272?l=kurtkoti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kurtkoti.blogspot.com/feeds/6375464344039361272/comments/default' title='Post Comments'/><link rel='replies' type='text/html' href='http://www.blogger.com/comment.g?blogID=2372666341371107821&amp;postID=6375464344039361272&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/2372666341371107821/posts/default/6375464344039361272'/><link rel='self' type='application/atom+xml' href='http://www.blogger.com/feeds/2372666341371107821/posts/default/6375464344039361272'/><link rel='alternate' type='text/html' href='http://kurtkoti.blogspot.com/2009/04/blog-post_07.html' title='ನನ್ನ ಮನದಂಗಳದಲಿ ಸಾಹಿತ್ಯದ ಬೀಜ ಬಿತ್ತಿದವರು...'/><author><name>ಗುರುಪ್ರಸಾದ ಕುರ್ತಕೋಟಿ</name><uri>http://www.blogger.com/profile/10861815905653228183</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_e_tOxrsrEcc/SejNhmMPHWI/AAAAAAAAAkA/7fs9a56NqZg/S220/DSCF3720.JPG'/></author><thr:total>1</thr:total></entry><entry><id>tag:blogger.com,1999:blog-2372666341371107821.post-4975079153938472466</id><published>2009-03-08T11:30:00.000-07:00</published><updated>2009-04-07T11:32:53.923-07:00</updated><title type='text'>ನಾಯಿ ಪಾಡು!</title><content type='html'>&lt;div align="justify"&gt;ನಾನು ಬೆಳಿಗ್ಗೆ ವಾಕಿಂಗ್ ಅಥವಾ ಜಾಗಿಂಗ ಮಾಡದೆ ಇರುವುದಕ್ಕೆ ಹಲವಾರು ಕಾರಣಗಳುಂಟು, ಅದರಲ್ಲೊಂದು, "ನಾಯಿ" ಅನ್ನೊ ಅದ್ಭುತ ಪ್ರಾಣಿ! ಹೌದು ಬೆಳಿಗ್ಗೆ ಎಷ್ಟೋ ಜನ ತಮ್ಮ ನಾಯಿಗೋಸ್ಕರವೇ ಜಾಗಿಂಗ ಮಾಡ್ತಾರೆ. ಅವು ತಮ್ಮೆಜಮಾನರ ಜೊತೆ ಒಳ್ಳೆ ಠೀವಿಯಿಂದ ಬಾಲ ಅಲುಗಾಡಿಸಿಕೊಂಡು, ಕಂಬ, ಮರ-ಗಿಡಗಳಾದಿಗಳಡಿಯಲ್ಲಿ ವಿಶ್ರಮಿಸುತ್ತ ಸಂಬ್ರಮಿಸುವ ಪರಿ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ! ಯಾರಿಗೆ? ಅವುಗಳ ಯಜಮಾನರಿಗೆ, ನಮ್ಮಂಥ ಬಡಪಾಯಿಗಳಿಗಲ್ಲ! ಎಷ್ಟೋ ಜನ ತಮ್ಮ ನಾಯಿಗಳಿಗೆ ಕೊರಳ ಪಟ್ಟೀನೂ ಕಟ್ಟಿರುವುದಿಲ್ಲ. ಅವು ನಮ್ಮನ್ನು ನೋಡಿ ಹತ್ತಿರಕ್ಕೆ ಬಂದು, ಇಷ್ಟುದ್ದ ನಾಲಿಗೆ ತೋರಿಸುತ್ತ, ಮೂಸಿ ನೋಡುತ್ತಿದ್ದರೆ ನಮಗೆ ಹೃದಯ ಬಾಯಿಗೆ ಬಂದಿರುತ್ತದೆ. ಅಷ್ತರಲ್ಲೆ, ಅದ್ರ ಯಜಮಾನ ನಮ್ಮ ಮೇಲೆ ಕರುಣೆ ತೋರಿ, "ಹೇ ಟಾಮೀ, ಕಮಾನ್" ಅಂತ ಗದರಿಸುತ್ತಲೆ ತಡ ಆ ಅದ್ಭುತ ಪ್ರಾಣಿ ಚಂಗನೆ ಜಿಗಿದು ಅವರ ಬಳಿ ವಾಪಸ್ಸಾಗುತ್ತೆ. ಹಾಗೆಯೆ ನಮ್ಮ ಹ್ರುದಯದ ಬಡಿತವೂ ವಾಪಸ್ಸಾಗುತ್ತೆ! ಆದ್ರೆ ನನಗೆ ಆಶ್ಚರ್ಯ ಆಗೋ ವಿಷಯ ಅಂದ್ರೆ ನಾಯಿಗೆ ಯಾಕೆ ಬರಿ ಇಂಗ್ಲಿಶೇ ಅರ್ಥ ಆಗೋದು ಅಂತ!? ನಾಯಿಗೆ ಬಾರೊ ಇಲ್ಲಿ ಅಂತ ಕನ್ನಡದಲ್ಲಿ ಕರಿಯೊದು ತುಂಬ ಕಡಿಮೆ. ನಮ್ಮ ಹಳ್ಳಿಗಳಲ್ಲಿ ಕರೀತಾರೆ. ನಮ್ಮ ಊರಲ್ಲಿ ಒಬ್ಬ ಸಾವಜಿ ಇದ್ದ. ಅವನದೊಂದು ಹೋಟೆಲ್ಲು. ಅವ್ನ ಬಳಿ ಒಂದು ಭಯಂಕರವಾದ ನಾಯಿ ಇತ್ತು. ಅದನ್ನು ಬೆಳಿಗ್ಗೆ ಕಟ್ಟಿರುತ್ತಿದ್ದನಾದರೂ ನಮಗೋ ಭಯ. ಯಾಕಂದರೆ ಅದು ಒಮ್ಮೆ ಬಾಯಿ ಹಾಕಿದರೆ ನನ್ನ ಇಡೀ ಕಾಲನ್ನೆ ತಿಂದು ತೇಗಿಬಿಡುತ್ತಿತ್ತು. ಆತ ಮಾತ್ರ ತನ್ನ ನಾಯಿಯನ್ನು ಸ್ವಂತ ಮಗನ ಥರ ನೊಡಿಕೊಳ್ಳುತ್ತಿದ್ದ. ನಾವು ಹೆದರೋದ ನೋಡಿ ಆತ ನಗುತ್ತಿದ್ದ. "ಅವಾ ಏನು ಮಾಡಂಗಿಲ್ಲ ಬರ್ರೀ ಸರ್ರ... " ಅನ್ನುತ್ತಲೇ "ಲೇ ರಾಜಾ ಸುಮ್ಕಿರಲೆ ಕಳ್ಳ ಸೂ... ಮಗನೆ" ಅಂತ ಬಯ್ತಿದ್ದ. ನಮಗೋ ನಗು!&lt;br /&gt;ನನಗೆ ಮೊದಲಿನಿಂದಲೂ ನಾಯಿ ಕಂಡರೆ ಅಷ್ಟಕ್ಕಷ್ಟೆ; ಮತ್ತೆ ನಾಯಿಗಳಿಗೂ ನನ್ನನ್ನ ಕಂಡರೆ ಅಷ್ಟೆ ಪಂಚಪ್ರಾಣ! ಈಗಲೂ ಅಷ್ಟೆ, ನಾನು ನಾಯಿವಂತರ (ಅಲಿಯಾಸ್ ನಾಯಿ ಸಾಕಿದವರು ಅಥವಾ ನಾಯಿ ಇದೆ ಎಚ್ಚರಿಕೆ ಅಂತ ಬೋರ್ಡ ಹಾಕಿದವರು) ಮನೆಗೆ ಹೋಗುವುದು ತೀರಾ ಅಪರೂಪ. ಅಥವ ಅವರೂ ನನ್ನಂಥವರನ್ನು ತಪ್ಪಿಸಲೆಂದೆ ನಾಯಿ ಸಾಕುವರೋ ಗೊತ್ತಿಲ್ಲ. ಇರಲಿ.. ವಿಷಯ ಹೀಗಿರುವಾಗ ಒಂದು ಸಲ ಎನಾಯ್ತು ಅಂದ್ರೆ...&lt;br /&gt;ನಮ್ಮ ಪಕ್ಕದ ಮನೆಗೆ ಹೊಸದಾಗಿ ಜೋಡಿಯೊಂದು ವಾಸವಾಗಲಿಕ್ಕೆ ಬಂದರು. ಇಬ್ಬರೇ ಬಂದರಾ? ಇಲ್ಲ ಜೊತೆಗೊಂದು ನಾಯಿಯನ್ನು ಕರೆ ತಂದರು., ಆ ಜೋಡಿ ಮನೆಲಿರುವುದೇ ಅಪರೂಪ. ಇಬ್ಬರಿಗೂ ರಾತ್ರಿ ಪಾಳಿ ಕೆಲಸ. ದಿನವೆಲ್ಲಾ ನಿದ್ದೆ, ರಾತ್ರಿಯೆಲ್ಲ ಕೆಲಸ. ಅದೇ ಅಲ್ಲವೇ ಈಗಿನ ಬಹಳಷ್ಟು ಯುವ ಜನತೆ ಮಾಡ್ತಿರೊದು! ಅವರಿಬ್ಬರ ಊಟವಂತು ಹೆಚ್ಚು ಕಡಿಮೆ ಹೊರಗೆಯೇ. ಅಡಿಗೆ ಮಡುತ್ತಿರವೆಂದಲ್ಲ, ಮಾಡುತ್ತಿದ್ದರು.. ಮುದ್ದಿನ ನಾಯಿಗೊಸ್ಕರ. ದಿನವೆಲ್ಲಾ ತೆಪ್ಪಗೆ ಬಿದ್ದಿರುತ್ತಿದ್ದ ಆ ನಾಯಿ, ರಾತ್ರಿ ಮಾತ್ರ ಹೋ ಅಂತ ಕಿರುಚುತ್ತಿತ್ತು (ಪಾಪ ಅದರದು ರಾತ್ರಿ ಪಾಳಿ ಕೆಲಸವಲ್ವೆ!). ಆದರೆ ನಮ್ಮದು ನಾಯಿ ಪಾಡು; ರಾತ್ರಿಯೂ ನಿದ್ದೆ ಇಲ್ಲ ಆದರೆ ಬೆಳಿಗ್ಗೆ ನಿದ್ದೆ ಮಾಡುವಂತಿಲ್ಲ. ಅದರ ಜೊತೆಗೆ ಇನ್ನೂ ತುಂಬಾ ಸಮಸ್ಸೆಗಳು ಶುರುವಾದವು. ನಮಗೆ ಹೊರಗೆ ಅಡ್ಡಾಡುವುದೇ ದುಸ್ತರವಾಯಿತು. ನಾನು ಅತ್ತಿತ್ತ ನೋಡಿಕೊಂಡು ಅವರ ಮನೆ ದಾಟುವ ಪರಿಸ್ಥಿತಿ, ಅದನ್ನು ನೋಡಿ ಅವರು ನಗುವರೇನೋ ಎಂದು ಒಳಗೊಳಗೆ ಅಳುಕು!&lt;br /&gt;ನಾನಂತೂ ನಿರ್ಧಾರ ಮಾಡಿಬಿಟ್ಟೆ. ಅವರಿಗೆ ಹೋಗಿ ಹೇಳುವುದೆಂದು. ಏನಂತ ಹೇಳುವುದು? ಗೊತ್ತಿಲ್ಲ! ಒಟ್ಟಿನಲ್ಲಿ ನಾನು ಅವನ ಭೇಟಿಯಾಗುವ ನಿರ್ಧಾರ ಮಾಡಿಯಾಗಿತ್ತು. ಆದರೆ ಅವರ ಮನೆಗೆ ಹೋಗುವುದೆ ಒಂದು ದೊಡ್ಡ ಸಮಸ್ಯೆ. ಮನೆಗೆ ಹೋಗಿ ಭೇಟಿಯಾಗುವುದೆಂದರೆ ಅವರ ನಾಯಿ ಇದ್ದೇ ಇರುತ್ತದೆ. ಅವರು ಹೊರಗೆ ಎಲ್ಲಾದರೂ ಕಾಣುವರೋ ಎಂದರೆ, ಅವರು ಕಾಣುವುದೆ ಅಪರೂಪ. ಆ ಪುಣ್ಯಾತ್ಮ ವಾಕಿಂಗ್ ಹೋಗುವುದು ನಾಯಿ ಜೊತೆಗೆ. ಹೀಗಾಗಿ ನಾನು ಮನೆ ಯಜಮಾನನನ್ನು ಭೇಟಿಯಾಗುವುದೇ ಕಷ್ಟ ಸಾಧ್ಯವಾಗಿ ಹೊಯಿತು. ನಾನು ಅವನಿಗಾಗಿ ಹೊಂಚು ಹಾಕಿ ಕುಳಿತಿದ್ದೆ. ಆ ದಿನ ಬಂದೇ ಬಿಟ್ಟಿತು! ಆತ ಒಬ್ಬನೇ ನಿಂತಿದ್ದು ಕಾಣಿಸಿತು. ಆದರೂ, ಹತ್ತಿರದಲ್ಲಿ ಎಲ್ಲಾದರೂ ನಾಯಿ ಇರಬಹುದಾದ ಸಾಧ್ಯತೆಗಳು ಇಲ್ಲದಿರಲಿಲ್ಲ. ನಾನೂ ಎಲ್ಲ ದಿಕ್ಕಿನಲ್ಲು ಒಂದು ಕಣ್ಣು ಹಾಯಿಸಿದೆ. ಎಲ್ಲೂ ಅದರ ಇರುವು ಕಾಣಲಿಲ್ಲ. ಯಾಕೆಂದರೆ ಅಲ್ಲೆ ಪಕ್ಕದಲ್ಲೆ ಇರುವ ಖಾಲಿ ಸೈಟು ಅದಕ್ಕೆ ಪಂಚ ಪ್ರಾಣ. ಅದು ಹೊರಗೆ ಬಂದ ತಕ್ಷಣ ಅಲ್ಲೆ ಬಹಿರ್ದೆಶೆಗೆ ಹೋಗೋದು. ಅಲ್ಲೆಲ್ಲಾದರೂ ಅಡ್ಡಡಿಕೊಂಡಿದೆಯೊ ಅಂತ ನೋಡಿದೆ. ಸರಿ, ಅವನಿರುವ ಕಡೆಗೆ ಧೈರ್ಯದಿಂದ ಮುನ್ನುಗ್ಗಿದೆ. ಅರೇ ಇದೇನಿದು? ಅವ ಒಬ್ಬನೆ ತನ್ನಷ್ಟಕ್ಕೆ ತಾನೇ ಮಾತಾಡ್ತಿದ್ದ! ನಾಯಿ ಜೊತೆ ಸಂಭಾಷಿಸಿ ಈ ತರಹ ರೂಡಿಯಾಯ್ತೆ ಪಾಪ, ಅನ್ಕೊತಿದ್ದ ಹಾಗೆ ಸ್ವಲ್ಪ ಹತ್ತಿರದಿಂದ ಗಮನಿಸಿ ನೋಡ್ದಾಗ, ಓಲೆ ತರಹ ಕಿವಿಗೆ ಬ್ಲೂ ಟೂಥ್ ಹೆಡ್ ಸೆಟ್ ಹಾಕಿದ್ದು ಕಾಣಿಸ್ತು. ಫೋನಲ್ಲಿ ಮಾತಾಡ್ತಿದ್ದ ಪಾಪ!. ಈಗಿನ ತಾಂತ್ರಿಕ ಯುಗದಲ್ಲಿ ಯಾರು ಎನು ಮಾಡ್ತಿರ್ತಾರೆ ಅಂತ ಹೇಳೊದು ತುಂಬ ಕಷ್ಟ. ಇರಲಿ, ಹಾಗೆ ಸ್ವಲ್ಪ ಹೊತ್ತು ಕಾಯ್ದೆ. ಆಸಾಮಿ ಕೊರಿಯೊದು ಮುಗಿಸೊ ಲಕ್ಷಣ ಕಾಣ್ತಿಲ್ಲ. ನನಗೆ ಅಷ್ಟರಲ್ಲೆ ನಾಯಿ ಬಂದ್ಬಿಟ್ರೆ ಅಂತ ಭಯ. ಅಂತೂ ಸ್ವಲ್ಪ ಹೊತ್ತಿಗೆ ಮುಗಿಸಿದ. ನಾನು ಪರಿಚಯದ ನಗೆ ನಕ್ಕೆ. ಅದಕ್ಕವನು ನಗಲಿಲ್ಲ ಹುಬ್ಬೇರಿಸಿ ಏನು ಎಂಬಂತೆ ನೋಡಿದ! ಅವನು ನನಗೆ ಗೊತ್ತು ಆದರೆ ಅವನಿಗೆ ನಾನು ಗೊತ್ತಿಲ್ಲವಲ್ಲ. ಹಾಳಾಗಿ ಹೊಗಲಿ, ನನಗೇನು ಅವನ ಜೊತೆ ದೋಸ್ತಿ ಮಾಡೊದಿದೆಯೆ? "ನಾನು ನಿಮ್ಮ ಪಕ್ಕದ ಮನೆಲಿದ್ದೀನಿ" ಅಂದೆ. "ಅದಕ್ಕೇನಿವಾಗ?" ಅನ್ನುವಂತಿತ್ತು ಅವನ ನೋಟ. ನಾನೇ ಮುಂದುವರಿಸಿ, "ನಿಮ್ಮ ನಾಯಿಯಿಂದ ತುಂಬಾ ದಿಸ್ಟರ್ಬ್ ಆಗ್ತಿದೆ. ರಾತ್ರಿಯೆಲ್ಲ ಬೊಗಳತ್ತೆ, ನಮಗೆ ನಿದ್ದೆನೇ ಇಲ್ಲ..." ಅಂತ ಬಡ ಬಡಿಸಿದೆ. ಅವನಿಗೆ ಕೋಪ ಬಂತು ಅಂತ ಕಾಣುತ್ತೆ. ಬರದೆ ಇರುತ್ತದೆಯೆ ಮತ್ತೆ? "ನಾಯಿ ಅಂದ್ಮೇಲೆ ಬೊಗಳೊದೆ ಅಲ್ವ?!" ಅಂದ. ಅರೆ ನನಗಿದು ಗೊತ್ತೆ ಇರಲಿಲ್ಲ! ಈಗ ನನಗೂ ಕೋಪ ಬಂತು. ನಾನು ಕಂಪ್ಲೇಂಟ ಮಾಡ್ತೇನೆ ಅಂದೆ! ಅದಕ್ಕೇನು ಆತ ಜಗ್ಗೊ ತರ ಕಾಣಲಿಲ್ಲ. ಎಲ್ಲ ವಾದ ವಿವಾದಗಳು ಆದರೂ ಕೊನೆಗೂ ಒಂದು ಒಪ್ಪಂದಕ್ಕೆ ಬರೋ ಲಕ್ಷಣಗಳು ಕಾಣಲಿಲ್ಲ. ನಾನು ಹ್ಯಾಪು ಮೋರೆಯೊಂದಿಗೆ ಮನೆಗೆ ಬಂದೆ.&lt;br /&gt;ಇದಕ್ಕೇನು ಪರಿಹಾರ ಅಂತ ರಾತ್ರಿಯೆಲ್ಲ ಯೋಚಿಸಿದೆ. ಬೇರೆ ಮನೆ ನೋಡಲೆ? ಆದರೆ ಅದು ಶಾಶ್ವತ ಪರಿಹಾರವಲ್ಲ. ಬೆಳಿಗ್ಗೆ ಹೊತ್ತಿಗೆ ಒಂದು ನಿರ್ಧರಕ್ಕೆ ಬಂದಿದ್ದೆ! ಸ್ನಾನ ಮುಗಿಸಿ ಲಗು ಬಗೆಯಲ್ಲಿ ತಿಂಡಿ ಮುಗಿಸಿ ಹೊರಟೆ. ಹೆಂಡತಿ ಕೇಳಿದ್ಲು "ಎಲ್ಲಿಗೆ ಹೋಗ್ತಿದ್ದಿರ?" ಅಂತ. "ಕಾದು ನೋಡು, ಸಂಜೆಗೆ ಒಬ್ರನ್ನ ಮನೆಗೆ ಕರ್ಕೊಂಡು ಬರ್ತೇನೆ" ಅಂದೆ...&lt;br /&gt;ಸಂಜೆ ಮನೆಗೆ ಬಂದೆ, ಜೊತೆಗೊಂದು "ನಾಯಿಯನ್ನು" ಕರ್ಕೊಂಡು ಬಂದೆ. ಹೀಗೆ ನಾನು ಕೂಡ "ನಾಯಿವಂತನಾದೆ"! ಬೆಳಿಗ್ಗೆ ಅದರ ಜೊತೆಗೆ ವಾಕಿಂಗು ಹೋಗ್ತೇನೆ. ಅದರ ನೆಪದಿಂದಾದರೂ ವಾಕಿಂಗ್ ಮಾಡ್ತಾನೆ ಅಂತ ನನ್ನ ಹೆಂಡತಿಗೂ ಖುಷಿ! ಅದಕ್ಕೆ ನಾಮಕರಣವೂ ಆಗಿದೆ. ನನ್ನ ಬಾಸ್ ಹೆಸರನ್ನೆ ಅದಕ್ಕಿಟ್ಟಿದ್ದೇನೆ. ಪಕ್ಕದ ಮನೆ ನಾಯಿ ಬೊಗಳಿದಾಗೆಲ್ಲ ನಮ್ಮ "ಬಾಸ್" ಕೂಗ್ತಾನೆ. ಅದೊಂಥರ ಜುಗಲ್ ಬಂದಿ. ಮನೆಗೆ ಬರುವವರ ಸಂಖೆ ಗಣನೀಯವಾಗಿ ಇಳಿದಿದೆ. ಹೆಂಡತಿ ತವರಿಗೆ ಹೋಗೋಣವೆಂದರೆ, ನಾಯಿಯ ನೆಪ ಹೇಳಿ ನಾನಿಲ್ಲೆ ಉಳಿದುಕೊಳ್ಳುತ್ತೇನೆ. ಈಗ ಆರಾಮವಾಗಿ ನಿದ್ದೆ ಮಾಡುತ್ತೆನೆ. ನಾಯಿ ಬೊಗಳಿಲ್ಲ ಅಂದ್ರೆ ನಿದ್ದೆಯೆ ಬರದಂಥ ಪರಿಸ್ಥಿತಿ ಈಗ! ಹೊರಗೆ "ನಾಯಿ ಇದೆ.." ಬೋರ್ಡು ನೇತಾಡ್ತಿದೆ. ಬಾಸ್ ಗೆ ಕನ್ನಡವನ್ನು ಕಲಿಸಿದ್ದೇನೆ. ಬಾಸ್ ಕುತ್ಗೊ ಅಂದ್ರೆ ಕುತ್ಗೊಳ್ಳತ್ತೆ ನಿಂತ್ಗೊ ಅಂದ್ರೆ ನಿಂತ್ಗೊಳತ್ತೆ (ನಮ್ಮ ಆಫಿಸ್ ಬಾಸ್ ಗಳೆಲ್ಲ ಹೀಗೆ ಇದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ)...&lt;br /&gt;ಅಂತೂ, ನಾಯಿ ಸಾಕೋದರಿಂದ ಇಷ್ಟೆಲ್ಲ ಅನುಕೂಲಗಳಿವೆ ಅಂತ ನನಗೆ ದೇವರಾಣೆಗೂ ಗೊತ್ತಿರಲಿಲ್ಲ ಬಿಡಿ!&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2372666341371107821-4975079153938472466?l=kurtkoti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kurtkoti.blogspot.com/feeds/4975079153938472466/comments/default' title='Post Comments'/><link rel='replies' type='text/html' href='http://www.blogger.com/comment.g?blogID=2372666341371107821&amp;postID=4975079153938472466&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/2372666341371107821/posts/default/4975079153938472466'/><link rel='self' type='application/atom+xml' href='http://www.blogger.com/feeds/2372666341371107821/posts/default/4975079153938472466'/><link rel='alternate' type='text/html' href='http://kurtkoti.blogspot.com/2009/03/blog-post.html' title='ನಾಯಿ ಪಾಡು!'/><author><name>ಗುರುಪ್ರಸಾದ ಕುರ್ತಕೋಟಿ</name><uri>http://www.blogger.com/profile/10861815905653228183</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_e_tOxrsrEcc/SejNhmMPHWI/AAAAAAAAAkA/7fs9a56NqZg/S220/DSCF3720.JPG'/></author><thr:total>0</thr:total></entry><entry><id>tag:blogger.com,1999:blog-2372666341371107821.post-5698045213386522761</id><published>2008-01-19T05:59:00.000-08:00</published><updated>2009-04-07T11:34:16.807-07:00</updated><title type='text'>"ಶೌಚ"ನೀಯ ಕತೆ</title><content type='html'>&lt;div align="justify"&gt;ಓದುಗರು ದಯವಿಟ್ಟು ಬೇಸರಿಸಬಾರದು, ನನಗೆ ಇದಕ್ಕಿಂತ ಒಳ್ಳೆಯ ತಲೆಬರಹ ಹೊಳೆಯಲಿಲ್ಲ. ಅಂದ ಹಾಗೆ, ಇದು ಶೌಚದ ಬಗ್ಗೆ ಇರುವ ಮೋಜಿನ ಬರಹ. ಶೌಚಕ್ಕೆ ಅವಸರವಾದಾಗ ಅದು ಶೋಚನೀಯ ಪರಿಸ್ಠಿತಿಯೇ ಎಂಬುದು ನನ್ನ ಅನುಭವಕ್ಕೆ ಬಂದ ಸಂಗತಿ; ಅದೂ ಆ ವೇಳೆಗೆ ಸರಿಯಾದ ವ್ಯವಸ್ಠೆ ಇಲ್ಲದಿದ್ದರೆ..? ಅಧೋಗತಿಯೇ! ಅಂತಹ ಕೆಲವು ಅನುಭವಗಳ ಕಂತೆಯೇ ಈ ಶೌಚನೀಯ ಕತೆ.&lt;br /&gt;ನಾನು ಚಿಕ್ಕವನಿದ್ದಾಗಿನ ಸಂಗತಿ. ನಾವು ಆಗಾಗ, ನಮ್ಮೂರಿನ ಹತ್ತಿರದಲ್ಲೇ ಇರುವ, ನನ್ನ ಅತ್ತೆಯ ಊರಾದ ದೊಡ್ಡೊರಿಗೆ ಹೊಗುತ್ತಿದ್ದೆವು. ವಿಪರ್ಯಾಸವೆಂದರೆ, ಅದೊಂದು ಕುಗ್ರಾಮ, ಆದರೂ ಅದರ ಹೆಸರು ಮಾತ್ರ ದೊಡ್ಡೂರು! ಬಹುಶಃ ಹಿಂದಿನ ಕಾಲದಲ್ಲಿ ಆ ಪ್ರದೇಶದಲ್ಲಿ ಇದೇ ದೊಡ್ಡ ಊರಾಗಿದ್ದಿರಬಹುದು, ಇರಲಿ. ನಾನು ಅಲ್ಲಿಗೆ ಹೊಗುತ್ತಿದ್ದುದೇ ಅವಲಕ್ಕಿ ಆಸೆಗೆ! ಯಾಕೆಂದರೆ, ಹೋದ ತಕ್ಷಣ ಅತ್ತಿಗೆ, ಹಚ್ಚಿದ ಅವಲಕ್ಕಿ ತಿನ್ನಲು ಕೊಡುತ್ತಿದ್ದಳು. ಜೊತೆಗೆ ಕೆನೆ ಕೆನೆ ಮೊಸರು, ಕೇಳಬೆಕೆ? ಓಂದು ರೌಂಡು ಮುಗಿಸಿ ಇನ್ನೊಂದಕ್ಕೆ ಅಣಿಯಾಗುತ್ತಿದ್ದೆ. ಆದರೆ ಅಮ್ಮನ ಮುಖ ಮಾತ್ರ ತಪ್ಪಿಸುತ್ತಿದ್ದೆ. ಯಾಕೆಂದರೆ, ನಾನು ಆ ಪರಿ ತಿನ್ನುವುದು ಅವಳಿಗೆ ಇಷ್ಟವಿರಲಿಲ್ಲ. ಈಗ ಅದು ನನ್ನ ಹೆಂಡತಿಗೆ ಇಷ್ಟವಿಲ್ಲ. ಗಂಡಸಿನ ಪರಿಸ್ಠಿತಿಯೇ ಹಾಗೆ, ಚಿಕ್ಕವನಿದ್ದಾಗ ಅಮ್ಮನಿಗೆ ಹೆದರಬೇಕು; ದೊಡ್ಡವನಾದಾಗ ಹೆಂಡತಿಗೆ! ಆದರೆ ಒಂದು ಮಾತ್ರ ನಿಜ, ನಾನು ಆ ಪರಿಯಾಗಿ ತಿಂದ ಮೇಲೆ ಏನಾಗುವುದೆಂದು ಅಮ್ಮನಿಗೆ ಚೆನ್ನಾಗಿ ಗೊತ್ತಿತ್ತು. (ಈಗ ಅದು ನನ್ನ ಹೆಂಡತಿಗೂ ಗೊತ್ತಿದೆ!) ನನಗೆ ಗೊತ್ತಿರಲಿಲ್ಲವೆ? ಗೊತ್ತಿತ್ತು ಆದರೂ ಆಸೆ! ಅವಲಕ್ಕಿ ಅಂದ ಮೇಲೆ ಒಂದೇ ರೌಂಡು ತಿನ್ನುವುದೆ? ಆಮೇಲೆ ಏನಾಗುತ್ತೋ ನೋಡೋಣ ಎನ್ನುವ ಭಂಡ ಧೈರ್ಯ. ಶುರುವಾಯ್ತು ನೋಡಿ, ಹೊಟ್ಟೆಯಲ್ಲಿ, ಗಡ ಗಡ ಶಬ್ದ! ಜೊತೆಗೆ ನಡುಕ ಕೂಡ! ಯಾಕೆಂದರೆ, ದೊಡ್ಡೂರಿನಲ್ಲಿದ್ದುದೊಂದು ಅದ್ಭುತವಾದ ಶೌಚಾಲಯ! ಅದನ್ನು ನೆನೆಸಿಕೊಂಡರೆನೇ ಭಯವಾಗುತ್ತಿತ್ತು. ಅದು ಇದ್ದುದೇ ಹಾಗೆ. ಹಳೇ ಕಾಲದ ಭೂತ ಬಂಗ್ಲೇ ನೆನಪಿಸುವಂತಹ, ಕಲ್ಲಿನಲ್ಲಿ ಕಟ್ಟಿದ ಗೋಡೆಗಳು. ಮೇಲ್ಗಡೆ ಸೂರಂತೂ ಇಲ್ಲವೇ ಇಲ್ಲ. ಮೇಲಿನಿಂದ ಹಕ್ಕಿಗಳು ಹಿಕ್ಕಿ ಹಾಕಿದರೆ, ಒಳಗೆ ಕುಳಿತವರ ಮೇಲೇ ಡ್ಯೆರೆಕ್ಟಾಗಿ ಬೀಳುತ್ತಿತ್ತು. ಕಟ್ಟಿಗೆಯ ಬಾಗಿಲುಗಳು. ಸ್ವಲ್ಪ ಕೂಲಂಕುಷ್ವವಾಗಿ ವೀಕ್ಷಿಸಿದರೆ ,ಒಳಗೆ ಕುಳಿತವರು ಯಾರು ಅಂತ ಸ್ಪಷ್ಟವಾಗಿ ಹೇಳಬಹುದಿತ್ತು! ಇದೆಲ್ಲದರ ಹೊರತಾಗಿ ಅದು ಇದ್ದುದು ಮನೆಯಿಂದ ಸ್ವಲ್ಪ ದೂರದಲ್ಲಿ. ಆದ್ದರಿಂದ, ನಾನೊಬ್ಬನೆ ಅಲ್ಲಿಗೆ ಹೋಗುವ ಧೈರ್ಯ ಆಗ ನನ್ನಲ್ಲಿರುತ್ತಿರಲಿಲ್ಲ. ಅಂತೂ ಹರ ಸಾಹಸ ಮಾಡಿ, ಉದರ ಬೇನೆಯನ್ನು ಪರಿಹರಿಸಿಕೊಂಡು ಬರುತ್ತಿದ್ದೆ. ಆಮೇಲೆ ಅಮ್ಮನಿಂದ ಭರ್ತಿ ಬೈಗಳು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ಕೆಳಿದ್ಯಾ, ಆ ಪರಿ ತಿನ್ನಬ್ಯಾಡಾ ಅಂದ್ರ! ಬೊರೊಬ್ಬರಿ ಆತು, ಹಿಂಗ ಆಗಬೇಕು ನಿನಗಅಂತ ಒಂದೇ ಸಮನೆ ಬೈಯುತ್ತಿದ್ದಳು. ನಾನು ಇನ್ನು ಮೇಲೆ ಅವಲಕ್ಕಿ ತಿನ್ನಬಾರದು ಅಂತ ನಿರ್ಧಾರ ಮಾಡುತ್ತಿದ್ದೆ. ಈಗಲೂ ಆಗಾಗ ಆ ನಿರ್ಧಾರ ತೆಗೆದುಕೊಳ್ಳುತ್ತಿರುತ್ತೇನೆ!&lt;br /&gt;ಹೀಗೆ ನಾನು ಅನುಭವಿಸಿದ ಸಂಕಟಗಳು ಹಲವಾರು. ಬಸ್ಸಿನಲ್ಲಿ ಪ್ರಯಾಣಿಸುವಾಗಲೂ, ಸಂಕಟ ಅನುಭವಿಸಿದ್ದಿದೆ. ಒಂದು ಸಲ ಬಸ್ಸಿನಲ್ಲಿ ಮೈಸೂರಿಗೆ ಪ್ರಯಾಣಿಸುತ್ತಿದ್ದೆ. ಬೆಳಿಗ್ಗೆ ೬ ಗಂಟೆಗೆ ಬಸ್ಸು ಮೈಸೂರು ತಲುಪುವ ನಿರೀಕ್ಷೆ ಇತ್ತು. ನನಗೋ ೫ ಗಂಟೆಗೇ ಅವಸರ ಶುರುವಾಯ್ತು. ಹಾಗೂ ಹೀಗು ಮೈಸೂರು ತಲುಪುವವರೆಗೆ ಸಾಕುಬೇಕಾಗಿ ಹೊಯ್ತು. ಆ ವೇಳೆಗೆ ಸಹಪ್ರಯಾಣಿಕರ ಪರಿಸ್ಥಿತಿ ಏನಾಗಿರಬೇಕೆಂದು ಗಮನಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ. ಅಂತೂ ಬಸ್ಸು ಇಳಿದ ತಕ್ಷಣ ಅವಸರ ಜಾಸ್ತಿ ಆಯ್ತು. ನನ್ನ ಗ್ರಹಚಾರಕ್ಕೆ ಅವತ್ತೇ ಹೊಸವರ್ಷ ಬೇರೆ, ಅಟೋದವರು ಎಷ್ಟು ಕೆಳುತ್ತಾರೊ ಅಷ್ಟು ಕೊಡಬೆಕು! ಚೌಕಾಷಿ ಮಾಡಲು ಅವಕಾಶವೇ ಇಲ್ಲ. ಅದಿರಲಿ, ನನಗದಕ್ಕೆ ಪುರುಸೊತ್ತೂ ಇರಲಿಲ್ಲ ಬಿಡಿ! ಬೇಗ ಲಾಡ್ಜ ಓಂದಕ್ಕೆ ಒಯ್ದು ವಗಿ ಎಂದು ಆಟೊದವನಿಗೆ ಬೇಡಿಕೊಂಡೆ. ಅವನಿಗೆ ನನ್ನ ಪರಿಸ್ಥಿತಿ ಅರ್ಥವಾಗಿರಬೆಕು. ಅವನು ಅಲ್ಲೆ ಪಕ್ಕದಲ್ಲೆ ಇದ್ದ ಅದ್ಭುತವಾದ ಲಾಡ್ಜ ಒಂದಕ್ಕೆ ವಯ್ದು ವಗೆದ. ಅವನು ಕೆಳಿದಷ್ಟು ಹಣ ತೆತ್ತು ಲಾಡ್ಜು ಸೇರಿಕೊಂಡು ನಿಟ್ಟುಸಿರಿಟ್ಟೆ! ಆದರೆ ಅದೊಂದು ಕಚಡಾ ಹೋಟೇಲ್ ಆಗಿದ್ದರಿಂದ ಬೇರೆ ಕಡೆಗೆ ಹೋಗಬೆಕಾಯ್ತು. ಹೊಸವರ್ಷದ ಬೋನಸ್! ಅದಕ್ಕೆ ನಾನು ರಾತ್ರಿ ಪ್ರಯಾಣವಿದ್ದರೆ ಊಟವನ್ನೇ ಮಾಡುವುದಿಲ್ಲ!&lt;br /&gt;ಇನ್ನೂ ಕೆಲವರನ್ನು ನೋಡಿದ್ದೇನೆ. ಅವರು ಶೌಚಸಮಾಧಿಗೆ ಹೋದರೆಂದರೆ ಹೊರಗೆ ಬರುವುದು ಒಂದೆರಡು ಗಂಟೆಗಳ ಬಳಿಕ. ಅಷ್ಟರವರೆಗೆ ಬೇರೆಯವರ ಗತಿ ಅಧೋಗತಿ! ಅದಕ್ಕೆ ಅಂಥವರು ಮನೆಲಿದ್ದರೆ ಬೇರೆಯವರು, ಬೇಗ ಎದ್ದು ತಮ್ಮ ಕಾರ್ಯ ಮುಗಿಸುವುದು ಒಳ್ಳೆಯದು. ನನ್ನ ಸಂಬಂಧಿಯೊಬ್ಬ ಇದೇ ಜಾತಿಗೆ ಸೇರಿದವನು. ಅವನು ಬೆಳಗಿನ ಪೇಪರ್ ಓದುವುದು ಅಲ್ಲಿಯೇ! ಪೇಪರ್ ಒಂದೇ ಅಲ್ಲ, ಕತೆ, ಕಾದಂಬರಿ ಏನೇ ಆದರೂ ಸರಿ ಅದನ್ನೊಯ್ದು ಶೌಚ ಸಮಾಧಿಯಲ್ಲಿ ಕೂತನೆಂದರೆ ಪೂರ್ತಿ ಕತೆ ಮುಗಿದಾದ ಮೇಲೆಯೇ ಹೊರಗೆ ಬರುವುದು. ಆದರೆ ಆಮೇಲೆ ಪೇಪರಗಳು, ಪುಸ್ತಕಗಳು ಮಾತ್ರ ಬೆರೆಯವರು ಓದುವ ಸ್ಥಿತಿಯಲ್ಲಿ ಇರುವುದಿಲ್ಲ. ಎಲ್ಲ ಹಸಿ ಹಸಿ! ಆದಕ್ಕೆ ಅವನು ನಮ್ಮ ಮನೆಗೆ ಬರುತ್ತಾನೆಂದರೆ, ನನ್ನ ನೆಚ್ಚಿನ ಪುಸ್ತಕಗಳನ್ನೆಲ್ಲ ಮುಚ್ಚಿ ಇಡುತ್ತೇನೆ.&lt;br /&gt;ನಾನು ಚಿಕ್ಕವನಿದ್ದಾಗ ನಡೆದ ಒಂದು ಘಟನೆಯಂತೂ ತುಂಬಾ ಮೋಜಿನದಾಗಿದೆ. ನಾವು ಮಕ್ಕಳಾಗಿದ್ದಾಗ ಈಗಿನ ತರಹ ಕಂಪ್ಯೂಟರು, ವೀಡಿಯೋ ಗೇಮ್ಸು ಇರಲಿಲ್ಲ ನೋಡಿ. ಆಗೆಲ್ಲ ಚಿನ್ನಿ ದಾಂಡು, ಗೋಲಿ ಇಂಥವೇ ಹಲವು ಬಗೆಯ ಆಟಗಳು. ಆದರೆ ನಮಗೆ ಇಷ್ಟಕ್ಕೆ ತೃಪ್ತಿ ಇರಲಿಲ್ಲ. ಹೊಸಾ ಆಟಗಳನ್ನು ಸೃಷ್ಟಿ ಮಾಡ್ತಿದ್ವಿ. ಒಂದು ಸಲ ಹೀಗೇ ಯಾವುದೊ ಹಬ್ಬ ಇತ್ತು. ಎಲ್ಲರ ಮನೆಯಲ್ಲೂ ಒಳ್ಳೆ ಭೂರೀ ಭೊಜನ! ಊಟವಾದ ಮೇಲೆ ಆಟ! ಎಲ್ಲರೂ ಒಂದೆಡೆಗೆ ಸೇರಿದೆವು. ಇವತ್ತು ಯಾವ ಆಟ ಆಡೊದು? ಇದೇ ನಮ್ಮೆಲ್ಲರ ಮುಂದಿದ್ದ ದೊಡ್ಡ ಸಮಸ್ಯೆಯಾಗಿತ್ತು, ಆಗ. ಅಷ್ಟರಲ್ಲೆ ನಮ್ಮಲ್ಲೊಬ್ಬ ಭಯಂಕರವಾಗಿ ಶಬ್ದ ಮಾಡಿದ! ಶಬ್ದ ಎಲ್ಲಿಂದ ಬಂತು ಅನ್ನೊದು ನಿಮ್ಮ ಊಹೆಗೆ ಬಿಟ್ಟ ವಿಷಯ! ಆ ಪರಿ ಹಬ್ಬದ ಊಟವಾದ ಮೇಲೆ ಶಬ್ದ ಎಲ್ಲಿಂದ ತಾನೆ ಬರಲು ಸಾಧ್ಯ! ಎಲ್ಲರೂ ಮೂಗು ಮುಚ್ಚಿಕೊಂಡೆವು, ಸಹಿಸಲಸಾಧ್ಯವಾದ ದುರ್ಗಂಧ! ಇಷ್ಟಕ್ಕೆ ಮುಗಿದಿದ್ದರೆ ಚೆನ್ನಾಗಿತ್ತು. ಆದರೆ ಮತ್ತ್ಯಾವನೋ ಅದೇ ತರಹದ ಶಬ್ದ ಮಾಡಿದ. ಕೇಳಬೇಕೆ, ಅವರಿಬ್ಬರ ಮಧ್ಯೆ ಸ್ಪರ್ಧೆಯೇ ಶುರುವಾಯ್ತು. ಉಳಿದವರೆಲ್ಲ ಇಬ್ಬರಿಗೂ ಹುರಿದುಂಬಿಸಲು ತೊಡಗಿದರು (ಮೂಗು ಮುಚ್ಚಿಕೊಂಡು!). ಹತ್ತು ಆಯಿತು, ಇಪ್ಪತ್ತು ಆಯಿತು, ಊಹುಂ ಇಬ್ಬರಲ್ಲಿ ಯಾರೂ ಸೋಲುವ ಲಕ್ಷಣ ಕಾಣಲಿಲ್ಲ! ಹಾಗೆ ಆಟ ಮುಂದುವರಿಯಿತು. ಸಂಜೆ ಆಗೋಕೆ ಬಂತು. ಇನ್ನೆನು ಆಟದಲ್ಲಿ ಯಾರು ಸೋಲುವರಿಲ್ಲ ಅಂದಾಗ ಇಬ್ಬರಿಗೂ ರಾಜಿ ಮಾಡುವರಿದ್ದೆವು. ಕೊನೆಯದಾಗಿ ಎಂಬಂತೆ ಒಬ್ಬ ಪ್ರಯತ್ನ ನಡೆಸಿದ್ದ. ಅವನ ಪ್ರಯತ್ನ ಸ್ವಲ್ಪ ಜಾಸ್ತಿಯೇ ಅಯ್ತೇನೊ! ಚಣ್ಣದಲ್ಲಿ ಅದರ ಫಲಿತಾಂಶ ಹೊರಬಿತ್ತು. ಮುಂದೆಂದು ಆ ಆಟವನ್ನು ಆಡುವ ಸಾಹಸಕ್ಕೆ ನಾವ್ಯಾರೂ ಹೊಗಲಿಲ್ಲ!&lt;br /&gt;ಈ ತರಹದ ಶಬ್ದ ಮಾಲಿನ್ಯದ (ವಾಯು ಮಾಲಿನ್ಯವೂ ಹೌದು!) ಮೇಲೆ ನಮ್ಮ ಹಿರಿಯರು, ಓಂದು ಶ್ಲೋಕವನ್ನೆ ಸೃಷ್ಟಿ ಮಾಡಿದ್ದಾರೆ!ಭರ್ರಂ ಭುರ್ರಂ ಭಯಂ ನಾಸ್ತಿ!ಟುಸ್ಸಾಕಾರಂ ಘೋರ ಸಂಕಟಂ!ನಿಶ್ಯಬ್ಧಂ ಪ್ರಾಣ ಸಂಕಟಂ!ಈ ಶ್ಲೋಕಕ್ಕೆ ವಿವರಣೆಯ ಅಗತ್ತ್ಯವಿಲ್ಲವೆಂದು ನಂಬಿದ್ದೆನೆ. ಹೀಗೆ ಮೋಜಿನ ಸಂಗತಿಗಳು ಹಲವಾರು. ಸಧ್ಯಕ್ಕಿಷ್ಟು ಸಾಕು ಅನಿಸುತ್ತದೆ. ನೀವೆನಂತೀರಾ?&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2372666341371107821-5698045213386522761?l=kurtkoti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kurtkoti.blogspot.com/feeds/5698045213386522761/comments/default' title='Post Comments'/><link rel='replies' type='text/html' href='http://www.blogger.com/comment.g?blogID=2372666341371107821&amp;postID=5698045213386522761&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/2372666341371107821/posts/default/5698045213386522761'/><link rel='self' type='application/atom+xml' href='http://www.blogger.com/feeds/2372666341371107821/posts/default/5698045213386522761'/><link rel='alternate' type='text/html' href='http://kurtkoti.blogspot.com/2008/01/blog-post.html' title='&quot;ಶೌಚ&quot;ನೀಯ ಕತೆ'/><author><name>ಗುರುಪ್ರಸಾದ ಕುರ್ತಕೋಟಿ</name><uri>http://www.blogger.com/profile/10861815905653228183</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_e_tOxrsrEcc/SejNhmMPHWI/AAAAAAAAAkA/7fs9a56NqZg/S220/DSCF3720.JPG'/></author><thr:total>2</thr:total></entry><entry><id>tag:blogger.com,1999:blog-2372666341371107821.post-5439535638956736557</id><published>2007-05-01T20:50:00.000-07:00</published><updated>2009-04-07T11:36:25.616-07:00</updated><title type='text'>ಕನ್ನಡ ಎಲ್ಲಿದೆ... ಕನ್ನಡ ಎಲ್ಲಿದೆ?</title><content type='html'>&lt;div align="justify"&gt;"ಸೀ ಯಾ, ನೋ ಡಾ... ಕಮಿಂಗ್ ಡಾ.... " ಇದೇ ನಾವಾಡುವ ನುಡಿ! ಇದೇ ಸ್ವಾಮಿ ನಮ್ಮ ಗಂಧದ ಗುಡಿಯ ಪಾಡು! ಇಂಗ್ಲೀಷು ನಮ್ಮನ್ನ ಯಾವ ಪರಿ ಆಳ್ತಾ ಇದೆಯೋ ನೋಡಿ. ನಮ್ಮ ಪಕ್ಕದಲ್ಲೇ ಜನರನ್ನು ನೋಡ್ತಾ ಇರ್ತೀವಿ, ತಮ್ಮ ಮಕ್ಕಳ ಜೊತೆ, ಇಂಗ್ಲಿಷಲ್ಲೇ ಅವರ ಸಂಭಾಷಣೆ. ಮೊನ್ನೆ ಒಬ್ಬ ತಾಯಿ ಮಗನಿಗೆ ಕರೀತಾ ಇದ್ದ್ಲು "ಕಮ್ ಫಾಸ್ಟ್". ಎಂಥ ವಿಪರ್ಯಾಸ ನೋಡಿ. ಮಾತೃ ಭಾಷೆ ಅನ್ನೋದಕ್ಕೆ ಅರ್ಥವೇ ಇಲ್ಲದಂತಾಗಿದೆ! ಕನ್ನಡದಲ್ಲಿ "ಬೇಗ ಬಾ ಮಗು" ಅಂತ ಕರದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವೆ? ನಾನು ಇಂಗ್ಲಿಷ್ ಭಾಷೆಯನ್ನು ವಿರೋಧಿಸ್ತಾ ಇಲ್ಲ; ಇಂಗ್ಲಿಷ್ ಮಾತಾಡೋರನ್ನೂ ಅಲ್ಲ. ನಾನು ಹೇಳ್ತಾ ಇರೋದು ಇಂಗ್ಲಿಷ್ ಮಾತಾಡೊ ಸಂದರ್ಭದ ಬಗ್ಗೆ. ನನ್ನ ಒಬ್ನು ಗೆಳೆಯ ಇದ್ದಾನೆ. ಅವ್ನು ಮತ್ತು ಅವನ ಹೆಂಡತಿ ಇಬ್ಬರ ಸಂಭಾಷಣೆ ಯಾವಾಗ್ಲೂ ಇಂಗ್ಲಿಷಲ್ಲೇ! ಮಜಾ ಅಂದ್ರೆ ಅವರಿಬ್ಬರ ಮಾತೃ ಬಾಷೆನೂ ಕನ್ನಡವೇ! ಇಂಥ ಎಷ್ಟೋ ಜನ ಇದ್ದಾರೆ. ಹಾಗೆ ಮಾತಾಡೊದ್ರಲ್ಲಿ ಅವರಿಗೇನೊ ಒಂಥರ ಖುಷಿ. ತಾವು ಶ್ರೇಷ್ಠರು (!) ಅನ್ನುವ ಸಮಾಧಾನ.&lt;br /&gt;ಇಂಗ್ಲಿಷ್ ಬಗೆಗಿನ ಈ ವ್ಯಾಮೋಹ ಇವತ್ತಿನದಲ್ಲ. ಇದು ಬ್ರಿಟಿಷರು ಇಲ್ಲಿ ಬಂದು ತಳ ಊರಿದಾಗಿನಿಂದ ಇದೆ. ಅವರು ಹೋದರು, ಆದರೆ ಇಂಗ್ಲಿಷು ಮಾತ್ರ ಇಲ್ಲಿ ಬೇರು ಬಿಟ್ಟಿತು. ಅದನ್ನು ಮಾತಾಡೊದು ಖಂಡಿತವಾಗಿಯು ತಪ್ಪಲ್ಲ. ಅದು ಅಂತರ್ ರಾಷ್ಟ್ರೀಯ ಭಾಷೆ. ಆದರೆ ಹೆಂಡತಿ, ಮಕ್ಕಳ ಜೊತೆನೂ ಇಂಗ್ಲಿಷೇ ಆಗಬೇಕೆ? ಚೊಕ್ಕವಾಗಿ ಕನ್ನಡದಲ್ಲೇ ಮಾತಾಡಬಾರದೆ? ನಾ ಯಾಕೆ "ಕನ್ನಡಿಗರನ್ನ" ಇಲ್ಲಿ ಎತ್ತಿ ತೋರಸ್ತಾ ಇದಿನಿ ಅಂದ್ರೆ; ಕನ್ನಡಿಗರಲ್ಲೆ ಅಭಿಮಾನ ಶೂನ್ಯತೆ ಜಾಸ್ತಿ ಅನ್ನೊದು ನನ್ನ ಅಭಿಪ್ರಾಯ (ಈ ಅಭಿಪ್ರಾಯ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ!) ನಮ್ಮ ಕನ್ನಡ ಇಷ್ಟು ಕುಲೂಷಿತವಾಗಿದೆ ಅಂದ್ರೆ. ಅದಕ್ಕೊಂದು ಉದಾಹರಣೆಯಾಗಿ ಒಂದು ಘಟಣೆ ನಡೆಯಿತು. ನಮ್ಮ ಕಛೇರಿಗೆ ಸ್ಪೇನದಿಂದ ಒಬ್ಬ ಸಹೋದ್ಯೋಗಿ ಬಂದಿದ್ದ. ಅವನನ್ನು ಒಂದು ಕಡೆ ಊಟಕ್ಕೆ ಕರೆದೊಯ್ಯುತ್ತಿದ್ದೆವು. ಎಫ್ ಎಮ್ ರೇಡಿಯೋದಲ್ಲಿ ಒಬ್ಬಳು ತನ್ನ ಸುಮಧುರವಾದ ಕಂಠದಲ್ಲಿ ಅದು ಕನ್ನಡದಲ್ಲಿ (?!) ಎನೋ ಕಥೆ ಶುರು ಮಾಡಿದ್ಲು. ನಿಮಗೆ ಗೊತ್ತಲ್ಲ ಎಫ್ ಎಮ್ ನ ಕನ್ನಡದಲ್ಲಿ ಇಂಗ್ಲಿಷ್ ಶಬ್ಧಗಳೇ ಜಾಸ್ತಿ. ನಮ್ಮ ಸ್ಪೇನ್ ಗೆಳೆಯ ಹೇಳಿದ "ನಿಮ್ಮ ಭಾಷೆ ಹೆಚ್ಚು ಕಡಿಮೆ ಇಂಗ್ಲಿಷ್ ಇದ್ದ ಹಾಗೆ ಇದೆಯಲ್ಲ!" ನಮ್ಮೆಲ್ಲರ ಮುಖ ಇಂಗು ತಿಂದ ಮಂಗನಂತಾಗಿತ್ತು. ಬೇರೆ ದೇಶದವರನ್ನು ಬಿಡಿ, ನಮ್ಮ ಸಹೋದ್ಯೋಗಿಗಳಲ್ಲೇ ಕೆಲವು ಜನ ತಮಿಳರು, ಕೆರಳದವರು ಇದ್ದಾರೆ. ಅವರಿಗೆಲ್ಲ ಕನ್ನಡ ಕಲಿಸುವ ವ್ಯರ್ಥ ಸಾಹಸ ನಾನು ಆಗಾಗ ಮಾಡ್ತಾ ಇರ್ತೀನಿ (ಅವರಾಗೆ ಕನ್ನಡ ಕಲಿಯುವ ಗೋಜಿಗೆ ಅವರೆಂದೂ ಹೋಗೊದಿಲ್ಲ ಬಿಡಿ. ನಾವೇ ಅವರ ಭಾಷೆಯಲ್ಲಿ ನಿಚ್ಛಳವಾಗಿ ಮಾತಾಡಸ್ತಿವಲ್ಲ!) ಅದರಲ್ಲಿ ಒಬ್ಬ "ಕನ್ನಡ ತುಂಬಾ ಸುಲಭ, ನನಗೆ ಕೆಲವು ಶಬ್ಧಗಳು ಗೊತ್ತು ಅಂದ! ನನಗೋ ಖುಷಿ. ಹೇಳಪ್ಪ ಏನೇನು ಗೊತ್ತು ಅಂದೆ. ಆತ ಹೇಳಿದ "ಎಂಜಾಯ್ ಮಾಡಿ!..... ಲಂಚ್ ಆಯ್ತಾ... " ಇಂಥವೆ ಕೆಲವು ಅಣಿ ಮುತ್ತುಗಳು. ಅಲ್ವೆ ಮತ್ತೆ? ಕನ್ನಡದಷ್ಟು ಸುಲಭದ ಭಾಷೆ ಬೇರೆಲ್ಲಾದರೂ ಉಂಟೆ?! ಹೀಗೆ ಮುಂದುವರಿದರೆ ಇನ್ನು ಕೆಲವು ವರ್ಷಗಳಲ್ಲಿ ಕನ್ನಡದ ಅಸ್ತಿತ್ವವೆ ಇಲ್ಲವಾಗುತ್ತೇನೋ ಅನ್ನೋ ಭಯ ಶುರುವಾಗಿದೆ.ಬನ್ನಿ ನಮ್ಮ ಭಾಷೆಯನ್ನ ಉಳಿಸಿಕೊಳ್ಳೋಣ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2372666341371107821-5439535638956736557?l=kurtkoti.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kurtkoti.blogspot.com/feeds/5439535638956736557/comments/default' title='Post Comments'/><link rel='replies' type='text/html' href='http://www.blogger.com/comment.g?blogID=2372666341371107821&amp;postID=5439535638956736557&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/2372666341371107821/posts/default/5439535638956736557'/><link rel='self' type='application/atom+xml' href='http://www.blogger.com/feeds/2372666341371107821/posts/default/5439535638956736557'/><link rel='alternate' type='text/html' href='http://kurtkoti.blogspot.com/2007/05/blog-post.html' title='ಕನ್ನಡ ಎಲ್ಲಿದೆ... ಕನ್ನಡ ಎಲ್ಲಿದೆ?'/><author><name>ಗುರುಪ್ರಸಾದ ಕುರ್ತಕೋಟಿ</name><uri>http://www.blogger.com/profile/10861815905653228183</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_e_tOxrsrEcc/SejNhmMPHWI/AAAAAAAAAkA/7fs9a56NqZg/S220/DSCF3720.JPG'/></author><thr:total>0</thr:total></entry><entry><id>tag:blogger.com,1999:blog-2372666341371107821.post-8445623405022103862</id><published>2007-04-24T08:28:00.000-07:00</published><updated>2009-04-07T11:37:08.019-07:00</updated><title type='text'>ಮಾತಾಡು ಮಂಗಣ್ಣಾ!</title><content type='html'>&lt;div align="justify"&gt;ಒಂದು ಸಲ ಒಬ್ಬನಿಗೆ ಒಂದು ಮಂಗ ಸಿಕ್ತು. ಅರೇ ಅದರಲ್ಲೇನು ವಿಶೇಷ ಅಂತೀರಾ? ಆ ಮಂಗಕ್ಕೆ ಮಾತಾಡೊಕೆ ಬರ್ತಿತ್ತು! ಕನ್ನಡದಲ್ಲಿ ನಿಛ್ಛಳವಾಗಿ ಮಾತಾಡ್ತಿತ್ತು. ಆತ ಮನಸ್ಸಿನಲ್ಲೆ ಮಂಡಿಗಿ ತಿಂದ! ಇದನ್ನ ಇಟ್ಕೊಂಡು ಎಷ್ಟೊಂದು ದುಡ್ಡು ಮಾಡ್ಬಹುದು ಅಂತ ಲೆಕ್ಕ ಹಾಕಿದ. ಎಷ್ಟಂದ್ರು ಹುಲು ಮಾನವನಲ್ವೆ?! ಆ ಮಂಗಣ್ಣನ್ನ ಮನೆಗೆ ಕರ್ಕೊಂಡು ಬಂದ. ಇಡೀ ರಾತ್ರಿಯೆಲ್ಲ ಅದ್ರ ಜೊತೆ ಮಾತಾಡೊದ್ರಲ್ಲೆ ಕಳೆದ...&lt;br /&gt;ಮರುದಿನ ಆಫೀಸಿಗೆ ಹೋಗಿ, ಸಹೋದ್ಯೊಗಿಗಳಿಗೆ ಮಂಗಣ್ಣನ ಸುದ್ದಿ ಹೇಳಿದ. ಅದರ ಸುದ್ದಿ ಕೇಳಿ, ಗೆಳೆಯರೆಲ್ಲ ಬಿದ್ದು ಬಿದ್ದು ನಕ್ಕರು. ಅವನಿಗೆ ಹುಚ್ಚು ಹಿಡಿದಿರುವುದು ಅವರಿಗೆ ಖಾತ್ರಿಯಾಯ್ತು. ಆದರೆ, ಅವನು ಅಷ್ಟಕ್ಕೆ ಬಿಡಲಿಲ್ಲ. ಬೆಕಾದರೆ ಬೆಟ್ ಕಟ್ಟಿ ಅಂದ. ಆಯ್ತು ಅಂತ ಎಲ್ಲರು ಮಾತಾಡೊ ಮಂಗಣ್ಣನ ಮೇಲೆ ಬೆಟ್ ಕಟ್ಟಿದ್ರು.&lt;br /&gt;ಆಫೀಸು ಮಗಿದ ಕೂಡಲೇ ಎಲ್ರು ಅವನ ಮನೆಗೆ ಹೊಗಿ ಮಂಗಣ್ಣನ್ನ ಮಾತಾದ್ಸೊದು, ಒಂದು ವೇಳೆ ಅದು ಮಾತಾಡಿಲ್ಲ ಅಂದ್ರೆ ಅವ್ರು ಕಟ್ಟಿರೊ ದುಡ್ಡು ಅವನು ವಾಪಸ್ಸು ಕೊಡಬೇಕು ಅಂತ ನಿರ್ಧಾರ ಆಯ್ತು. ಅವ್ರಿಗೆಲ್ಲ ಗೆದ್ದೇ ಗೆಲ್ತಿವಿ ಅಂತ ಗೊತ್ತಿತ್ತು. ಅವನಿಗೂ ಅಷ್ಟೆ!ಎಲ್ರು ಸಂಜೆ ಅವನ ಮನೆಗೆ ಬಂದ್ರು. ಅವನು ಮಂಗಣ್ಣನ ಬಳಿಗೆ ಹೋಗಿ, ಅದಕ್ಕೆ ಎಲ್ಲ ವಿಷಯ ಹೆಳ್ದ. ಮಾತಾಡಿ ನನ್ನ ಮರ್ಯಾದೆ ಉಳಿಸು ಅಂತ ಕೆಳ್ಕೊಂಡ. ಮಂಗಣ್ಣ ಅವನೆಡೆಗೆ ಒಂದು ಸಲ ತುಂಟ ನಗೆಯ ನೋಟ ಬೀರಿತು. ಆದರೆ ಏನೂ ಮಾತಾಡಲೆ ಇಲ್ಲ! ಇವನಿಗೆ ಗಂಟಲು ಆರಿದಂತಾಯಿತು. ನಿನ್ನೆಯೆಲ್ಲಾ ವಟ ವಟನೆ ಮಾತಾಡಿದ ಮಂಗಣ್ಣನಿಗೆ ಈಗೆನಾಯಿತು ಅಂತ ಅವನಿಗಾದರೂ ಹೇಗೆ ಅರ್ಥವಾದೀತು. ಅದರ ಮುಂದೆ ಗೋಗರೆದ, ಕಣ್ಣೀರಿಟ್ಟ. ಊಹುಂ, ಮಂಗಣ್ಣನಿಗೆ ಮಾತ್ರ ಅವನ ಮೇಲೆ ಕರುಣೆ ಬಂದಂತೆ ತೋರಲಿಲ್ಲ. ಒಂದು ಶಬ್ದವನ್ನು ಮಾತಾಡಲಿಲ್ಲ. ಗೆಳೆಯರೆಲ್ಲ ಅವನಿಗೆ ಬುದ್ಧಿ ಹೆಳಿ, ಇನ್ನಾದರು ಇಂಥ ಹುಚ್ಚಾಟ ಮಾಡದಿರುವಂತೆ ಎಚ್ಚರಿಸಿ ಹೊರಟು ಹೊದರು. ತಮ್ಮ ಪಾಲಿನ ಹಣವನ್ನು ಮಾತ್ರ ನೆನಪು ಹಾರದೆ ಇಸಿದುಕೊಂಡು ಹೋದರು.ಇವನಿಗೆ ಹುಚ್ಚು ಹಿಡಿಯೊದೊಂದೆ ಬಾಕಿ. ಕೈಲಿದ್ದ ಹಣಾನೂ ಹೋಯ್ತು. ತಲೆ ಮೇಲೆ ಕೈ ಹೊತ್ತು ಕುಳಿತಿದ್ದ. ಅಷ್ಟರಲ್ಲೆ, ಮಂಗಣ್ಣ ನಿಧಾನವಾಗಿ ಅವನ ಬಳಿ ಬಂತು; ಅವನ ಹೆಗಲ ಮೇಲೆ ಕೈ ಇಟ್ಟು ಹೀಗೆ ಅರುಹಿತು "ಯಾಕೆ, ಬೇಜರಾಯ್ತಾ?". ಅವನಿಗೆ ಕೆಂಡದಂಥ ಕೋಪ ಬಂತು (ಬರದೇ ಇರುತ್ತದೆಯೆ ಮತ್ತೆ?). ಆತ ಕೋಪದಿಂದ ಕೂಗಿದ "ಆಗ್ಲೇ ಇಷ್ಟು ಮಾತಾಡೋಕೆ ಏನಗಿತ್ತು ನಿಂಗೆ ಧಾಡಿ?!". ಮಂಗಣ್ಣ ಅಷ್ಟೇ ಶಾಂತನಾಗಿ ನುಡಿದ "ಅಯ್ಯೊ ಹುಚ್ಹಪ್ಪಾ, ಆಗ ನಾನು ಮಾತಾಡಿದ್ದಿದ್ರೆ ನಿನಗೆ ಪುಟುಗೋಸಿ ಸಾವಿರಾರು ರುಪಾಯಿ ಗೆಲ್ತಿದ್ದೆ. ನಾಳೆ ಮತ್ತೆ ಅವ್ರ ಜೊತೆನೇ ಬೆಟ್ ಕಟ್ಟು ಈ ಸಲ ಲಕ್ಷಾಂತರ ರುಪಾಯಿ ಕಟ್ತಾರೆ. ಆಮೇಲೆ ನಾನು ಮಾತಾಡ್ತಿನಿ". ಅವನಿಗೆ ಅರ್ಥಾ ಆಯ್ತು! ಮರುದಿನ ಗೆಳೆಯರೆದುರು ಮತ್ತೆ ಚಾಲೆಂಜ್ ಮಾಡ್ದ. ಈ ಸಲ ಮಂಗಣ್ಣ ಮಾತಾಡ್ತು. ಆತ ಒಂದು ದಿನದಲ್ಲೆ ಲಕ್ಷಾಧೀಶನಾದ!&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/2372666341371107821-8445623405022103862?l=kurtkoti.blogspot.com' alt='' /&gt;&lt;/div&gt;</content><link rel='edit' type='application/atom+xml' href='http://www.blogger.com/feeds/2372666341371107821/posts/default/8445623405022103862'/><link rel='self' type='application/atom+xml' href='http://www.blogger.com/feeds/2372666341371107821/posts/default/8445623405022103862'/><link rel='alternate' type='text/html' href='http://kurtkoti.blogspot.com/2007/04/blog-post.html' title='ಮಾತಾಡು ಮಂಗಣ್ಣಾ!'/><author><name>ಗುರುಪ್ರಸಾದ ಕುರ್ತಕೋಟಿ</name><uri>http://www.blogger.com/profile/10861815905653228183</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://4.bp.blogspot.com/_e_tOxrsrEcc/SejNhmMPHWI/AAAAAAAAAkA/7fs9a56NqZg/S220/DSCF3720.JPG'/></author></entry></feed>
